Home / ಕವನ / ಕವಿತೆ / ಬಜಾರ

ಬಜಾರ

ಅಗೊ ಹೋಗುತ್ತಿವೆ ನೋಡಿ ನೋಟುಗಳ ಸಾರೋಟುಗಳು
ಹಣದ ಹೆಣಗಳ ಮೆರವಣಿಗೆಗಳು
ರಣಹದ್ದುಗಳ ಕಾಲುಗುರು ಕೊಕ್ಕುಗಳು
ಗಂಟೆ ಜಾಗಟೆಗಳ ಶಂಖವಾದ್ಯಗಳು
ಜುಟ್ಟು ಜನಿವಾರ ಸಿವುಡುಗಂಟುಗಳು
ನಾಮ ಪೇಟಗಳ ಪೇಟೆ ಮಾಮೂಲು ಮಾಲುಗಳು

ಬರೀ ಮೈಯಲ್ಲಿ ಹುಟ್ಟುಬಟ್ಟೆಯಲ್ಲೇ
ಬರುವ ಪ್ರಾಣಲಿಂಗಿಗಳಿಗಿಲ್ಲಿ ಕೋಲುಪೂಜೆ
ಕಾಲಕೆಳಗೆ ಪ್ರಾಣವೊತ್ತೆ ಇಡಬೇಕಿಲ್ಲಿ ಹುಷಾರ್,
ಕಾಮಣ್ಣ ಕಣ್ಣ ಬಾಣ ಬಿಡುತ್ತಾನೆ ಕುಣಿಕೆಯಲ್ಲಿ ಜಾರೀಯೆ,
ನೀ ಮಾಡಿದ್ದು ಮನೆಯಲ್ಲೇ ಉಂಡು ಬಾ
ಹೊರಗೆ ತಂದರೆ ನಗೆ ಪಾಟಲು

ಬಸ್ಸು ಲಾರಿಯ ಗಾಲಿಗೆ ಸಿಕ್ಕು ಹೋದೀಯೆ
ಬರಿಗಡಿಗೆ ಮನೆಯಲ್ಲಿ ಹಾಡುತ್ತಿದ್ದರೇನು ವೇದಾಂತ
ಶೂನ್ಯ ಸಿದ್ಧಾಂತ,
ತಾಂಬೂಲ ಸೇವಿಸಿ ಬಾಯಿ ಕೆಂಪಾಗಿಸಿಕೊಂಡು ಬಾ
ನಗು ಹಾದರದ ನಗು
ಗಂಟಿಗೆ ಗಂಟು ಹಾಕಿ ಬಿಗಿ ಮೋರೆಯ ಯಾರೂ ಬಿಚ್ಚಲಾರದಂತೆ
ಹಾಯ್ದು ಹೋದವನಿಗೆ ಹಲ್ಲು ಬೀರಿ ಹಲ್ಲೋ ಎನ್ನು ಸಾಕು

ಯಾವುದೇ ಕೂಸು ಕುನ್ನಿ ಕುಂಟು ಕುರಡ
ಯುವುದೋ ಕುರುಡುಗಾಲಿಗೆ ಬಲಿಯಾದರೆ
ಕೈಹಿಡಿದೆತ್ತಲು ಹೋದಿಯಾ ಯಾಕೆಂದರೆ
ಎತ್ತಿದವನಿಗೆ ಬೀಳುತ್ತದೆ ಕುರುಡು ಕಾನೂನಿನ ಲತ್ತೆ

ಅಗೋ ಏನೋ ಗುಂಪು ಘೋಷಣೆ
ಯಾವನೋ ಕೂಗಿ ಕಣ್ಮರೆಯಲ್ಲಿದ್ದರೂ
ಈಗ ಗುಂಪಾಗಿ ಗಾಳಿ ಕೂಗುತ್ತಿದೆ
ಕುರಿಯಾಗಿ ಕೂಗಿಬಿಡು, ಯಾಕೆಂದರೆ
ಯಾವುದೇ ಗುಂಪಿಗೆ ಘೋಷಣೆಗೆ ಒಳಗಾಗದಿದ್ದರೆ
ಪಿತೂರಿಗಾರನಿವನೆಂದು ಸಂಶಯದ ಕಣ್ಣು ಬೆನ್ನಟ್ಟುವುದು
ಎಲ್ಲಿಯಾದರೂ ತಲೆಯ ಮೇಲೆ ನಿಂತೀಯಾ
ಮೇಲೆ ಹರಿದು ಹೋದಾವು ನೂರಾರು ಕಾಲು, ಹೊಟ್ಟೆ, ಕೋಲು
ಎಚ್ಚರ ಇದು ಬೀದಿ ಬಜಾರ
ಇಲ್ಲಿ ತಾಳಿದವನು ಬಾಳಿಯಾನು ಅಲ್ಲ
ಓಡುವವನು ಮುಂದೆ ಹೋದಾನು
ತಾಳಿದವನು ಕೊಳೆತು ಹೋದಾನು
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...