Home / ಕವನ / ಕವಿತೆ / ಬಜಾರ

ಬಜಾರ

ಅಗೊ ಹೋಗುತ್ತಿವೆ ನೋಡಿ ನೋಟುಗಳ ಸಾರೋಟುಗಳು
ಹಣದ ಹೆಣಗಳ ಮೆರವಣಿಗೆಗಳು
ರಣಹದ್ದುಗಳ ಕಾಲುಗುರು ಕೊಕ್ಕುಗಳು
ಗಂಟೆ ಜಾಗಟೆಗಳ ಶಂಖವಾದ್ಯಗಳು
ಜುಟ್ಟು ಜನಿವಾರ ಸಿವುಡುಗಂಟುಗಳು
ನಾಮ ಪೇಟಗಳ ಪೇಟೆ ಮಾಮೂಲು ಮಾಲುಗಳು

ಬರೀ ಮೈಯಲ್ಲಿ ಹುಟ್ಟುಬಟ್ಟೆಯಲ್ಲೇ
ಬರುವ ಪ್ರಾಣಲಿಂಗಿಗಳಿಗಿಲ್ಲಿ ಕೋಲುಪೂಜೆ
ಕಾಲಕೆಳಗೆ ಪ್ರಾಣವೊತ್ತೆ ಇಡಬೇಕಿಲ್ಲಿ ಹುಷಾರ್,
ಕಾಮಣ್ಣ ಕಣ್ಣ ಬಾಣ ಬಿಡುತ್ತಾನೆ ಕುಣಿಕೆಯಲ್ಲಿ ಜಾರೀಯೆ,
ನೀ ಮಾಡಿದ್ದು ಮನೆಯಲ್ಲೇ ಉಂಡು ಬಾ
ಹೊರಗೆ ತಂದರೆ ನಗೆ ಪಾಟಲು

ಬಸ್ಸು ಲಾರಿಯ ಗಾಲಿಗೆ ಸಿಕ್ಕು ಹೋದೀಯೆ
ಬರಿಗಡಿಗೆ ಮನೆಯಲ್ಲಿ ಹಾಡುತ್ತಿದ್ದರೇನು ವೇದಾಂತ
ಶೂನ್ಯ ಸಿದ್ಧಾಂತ,
ತಾಂಬೂಲ ಸೇವಿಸಿ ಬಾಯಿ ಕೆಂಪಾಗಿಸಿಕೊಂಡು ಬಾ
ನಗು ಹಾದರದ ನಗು
ಗಂಟಿಗೆ ಗಂಟು ಹಾಕಿ ಬಿಗಿ ಮೋರೆಯ ಯಾರೂ ಬಿಚ್ಚಲಾರದಂತೆ
ಹಾಯ್ದು ಹೋದವನಿಗೆ ಹಲ್ಲು ಬೀರಿ ಹಲ್ಲೋ ಎನ್ನು ಸಾಕು

ಯಾವುದೇ ಕೂಸು ಕುನ್ನಿ ಕುಂಟು ಕುರಡ
ಯುವುದೋ ಕುರುಡುಗಾಲಿಗೆ ಬಲಿಯಾದರೆ
ಕೈಹಿಡಿದೆತ್ತಲು ಹೋದಿಯಾ ಯಾಕೆಂದರೆ
ಎತ್ತಿದವನಿಗೆ ಬೀಳುತ್ತದೆ ಕುರುಡು ಕಾನೂನಿನ ಲತ್ತೆ

ಅಗೋ ಏನೋ ಗುಂಪು ಘೋಷಣೆ
ಯಾವನೋ ಕೂಗಿ ಕಣ್ಮರೆಯಲ್ಲಿದ್ದರೂ
ಈಗ ಗುಂಪಾಗಿ ಗಾಳಿ ಕೂಗುತ್ತಿದೆ
ಕುರಿಯಾಗಿ ಕೂಗಿಬಿಡು, ಯಾಕೆಂದರೆ
ಯಾವುದೇ ಗುಂಪಿಗೆ ಘೋಷಣೆಗೆ ಒಳಗಾಗದಿದ್ದರೆ
ಪಿತೂರಿಗಾರನಿವನೆಂದು ಸಂಶಯದ ಕಣ್ಣು ಬೆನ್ನಟ್ಟುವುದು
ಎಲ್ಲಿಯಾದರೂ ತಲೆಯ ಮೇಲೆ ನಿಂತೀಯಾ
ಮೇಲೆ ಹರಿದು ಹೋದಾವು ನೂರಾರು ಕಾಲು, ಹೊಟ್ಟೆ, ಕೋಲು
ಎಚ್ಚರ ಇದು ಬೀದಿ ಬಜಾರ
ಇಲ್ಲಿ ತಾಳಿದವನು ಬಾಳಿಯಾನು ಅಲ್ಲ
ಓಡುವವನು ಮುಂದೆ ಹೋದಾನು
ತಾಳಿದವನು ಕೊಳೆತು ಹೋದಾನು
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...