Home / ಲೇಖನ / ವ್ಯಕ್ತಿ / ಗಾರುಡಿಗ ತಾರಾನಾಥ

ಗಾರುಡಿಗ ತಾರಾನಾಥ

20151003_121525ಅರವತ್ತರ ದಶಕದಲ್ಲಿ, ತಾರಾನಾಥ ನನ್ನನ್ನು ನನಗೆ ಸಾಧ್ಯವಾದ ಎತ್ತರಕ್ಕೆ ಏರುವಂತೆ ಪ್ರಚೋಸಿದ ಗೆಳೆಯ.  ಗೆಳೆಯ ಮಾತ್ರವಲ್ಲ ಗುರು, ತಿದ್ದಿತೀಡಿ ಹಂಗಿಸಿ ವಿಸ್ತರಿಸಿ ಹೊಗಳಿ ಬೆಳೆಸಿದವನು ರಾಜೀವ. ‘ಪ್ರಶ್ನೆ’ ಸಂಕಲನದ ಒಂದೊಂದು ಕಥೆಯೂ ರೂಪುಗೊಂಡಿದ್ದು ರಾಜೀವನ ಅತೃಪ್ರಿಯಲ್ಲಿ ಹೀಗೆ ತನ್ನ ನಿಲುವಿನಲ್ಲೂ ನನಗಿಂತ ಎತ್ತರದ- ಪಡೆದುದಕ್ಕಿಂತ ಹೆಚ್ಚು ಕೊಡಬಲ್ಲ ರಾಜೀವನ ಔದಾರ್ಯದಲ್ಲಿ ನನ್ನ ಸೃಜನಶೀಲತೆ ಬೆಳೆಯಿತು. ರಾಜೀವ ಎಲ್ಲವನ್ನೂ ಸಂಗೀತದ ಕಣ್ಣಿನಿಂದ ನೋಡುತ್ತಾನೆ; ಸಾಹಿತ್ಯದ ಬಗಗಿನ ರಾಜೀವನ ಒಳನೋಟಗಳು ಅವನನ್ನು ನಾನು ಕಂಡ ಅತ್ಯುತ್ತಮ ಮನಸ್ಸುಗಳ ಸಾಲಿನಲ್ಲಿ ನಿಲ್ಲಿಸುತ್ತದೆ. -ಯು.ಆರ್. ಅನಂತಮೂರ್ತಿ

ತಮ್ಮ ಗೆಳೆಯನ ಕುರಿತು ಆನಂತಮೂರ್ತಿ ಅವರ ಮೇಲಿನ ಮಾತುಗಳು ರಾಜೀವ ತಾರಾನಾಥರ ವ್ಯಕ್ತಿತ್ವದ ಸಂಕೀರ್ಣತೆಯನ್ನು ಹಾಗೂ ಪ್ರತಿಭಾವಿಲಾಸವನ್ನು ನಿಕ್ಕಿಗೊಳಿಸುವಂತಿವೆ. ದೇಶದ ಅಗ್ರಪಂಕ್ತಿಯ ಸಂಗೀತಗಾರರಲ್ಲಿ ಒಬ್ಬರಾದ ತಾರಾನಾಥರು ಅಷ್ಟೇ ಎತ್ತರದ ಸಾಹಿತ್ಯ ಸಹೃದಯಿಯೂ ಹೌದು. ಅವರ ಆಸಕ್ತಿ ಸಾಹಿತ್ಯ ಕ್ಷೇತ್ರದಲ್ಲೇ ಮುಂದುವರಿದಿದ್ದರೆ ಬಹುದೊಡ್ಡ ವಿಮರ್ಶಕರಾಗುತ್ತಿದ್ದರು ಎನ್ನುವುದು ಅವರ ಅಪ್ತ ಗೆಳೆಯರ ನಂಬಿಕೆ, ಹಾಗೆ ಆಗದೆ ಹೊದುದೇ ಒಳ್ಳೆಯದಾಯಿತು ಎನ್ನಿಸುತ್ತದೆ. ತಾರಾನಾಥರೇನಾದರೂ ವಿಮರ್ಶಕರಾಗಿದ್ದರೆ ಮತ್ತೊಬ್ಬ ಕುರ್ತುಕೋಟಿ ಅಥವಾ ಡಿ.ಆರ್. ನಾಗರಾಜ್ ಆಗಲು ಸಾಧ್ಯವಿತ್ತೇನೋ! ಆದರೆ ಭಾರತೀಯ ಸಂಗೀತ ಓರ್ವ ಮಹಾನ್ ಕಲಾವಿದನನ್ನು ಕಳೆದುಕೊಳ್ಳುತ್ತಿತ್ತು. ಅವರಿಂದು ವಿಶ್ವಮಾನ್ಯತೆ ಹೊಂದಿದ ಸಂಗೀತಗಾರ. ಸರೋದ್ ಎಂದಕೂಡಲೇ ನೆನಪಾಗುವ ಕೆಲವೇ ಕೆಲವು ಹೆಸರುಗಳಲ್ಲಿ ತಾರಾನಾಥರದೂ ಒಂದು.

ಭಾರತೀಯ ಶಾಸ್ತ್ರೀಯ ಪರಂಪರೆಯ ವಾವ್ಯಗಳಲ್ಲೊಂದಾದ ಸರೋದನ್ನು ಅದರ ಸಾಧ್ಯತೆಗಳ ಪರಿಪೂರ್ಣತೆಯತ್ತ ಕೊಂಡೊಯ್ದ ಅಗ್ಗಳಿಕೆ ತಾರಾನಾಥರದು. ಗುರು ಉಸ್ತಾದ್ ಆಲಿ ಅಕ್ಬರ್ ಖಾನ್ ದೆಸೆಯಿಂದ ಕಲಿತ ವಿದ್ಯೆ, ಅದ್ಭುತ ಕಲಾಶಕ್ತಿ ಹಾಗೂ ಭಾವುಕತೆಯನ್ನು ಸರೋದ್‍ಗೆ ತುಂಬಿದ ಮಾಂತ್ರಿಕರು ತಾರಾನಾಥ. ನಾಲ್ಕಾನೇ ವಯಸ್ಸಿನಲ್ಲಿಯೇ ಬಾಲಕ ರಾಜೀವನಿಗೆ ಸಂಗೀತದ ಅಧಿಕೃತ ಪಾಠ ಆರಂಭವಾಯಿತು. ಅವರ ತಂದೆ ತಾರಾನಾಥ್ ತಬಲಾ ನುಡಿಸುವುದನ್ನು ಹೇಳಿಕೊಟ್ಟರು. ಆರನೇ ವಯಸ್ಸಿಗೆ ಆರಂಭವಾದ ಗಾಯನದ ಅಭ್ಯಾಸ ಹದಿನೈದರವರೆಗೂ ಮುಂದುವರೆಯಿತು. ೨೧ನೇ ವಯಸ್ಸಿನಲ್ಲಿ ಅಕ್ಬರ್ ಖಾನ್‍ರ ಶಿಷ್ಯತ್ವ ದೊರೆಯಿತು. ಆಗ ಆರಂಭವಾದ ಸರೋದ್ ನಂಟು, ಗುರುಮುಖೇನ ಇಂದಿಗೂ ಮುಂದುವರೆದಿದೆ. ಪಂಡಿತ್ ರವಿಶಂಕರ್ ಹಾಗೂ ಅನ್ನಪುರ್ಣಾದೇವಿ ಅವರ ಸಂಗೀತವನ್ನು ಸಮೃದ್ದಗೊಳಿಸಿದ ಇನ್ನಿಬ್ಬರು ಹಿರಿಯರು.

ತಾರಾನಾಥ್‍ರ ಇಂದಿನ ಎತ್ತರಕ್ಕೆ ಗುರು ಅಲಿ ಅಕ್ಬರ್ ಖಾನ್‍ರ ಕೊಡುಗೆ ದೊಡ್ಡದಿದೆ. ಗುರುಗಳ ನೆನಪು ತಾರಾನಾಥರನ್ನು ಆದ್ರ್‍ಅಗೊಳಿಸುತ್ತದೆ. ‘ಅವರು ನನಗೆ ತಾಯಿದ್ದಂತೆ. ಅಪ್ಪ ಎಂದು ಕರೆದರೂ, ಅವರು ತಾಯಿಯೇ. ಭಾರತೀಯ ಸಂಸ್ಕೃತಿಯಲ್ಲಿ ತಾಯಿಗೆ ಕೇವಲ ಕೊಡುವುದಷ್ಟೇ ಗೊತ್ತು. ತಂದೆ ಹಾಗಲ್ಲ ಆತ ಲೆಕ್ಕ ಕೇಳುತ್ತಾನೆ. ಅಮ್ಮ ಕೆಲವೊಮ್ಮೆ ಕೋಪಿಸಿಕೊಳ್ಳಬಹುದು. ಆದರೆ ಎಂದಿಗೂ ಲೆಕ್ಕ ಕೇಳುವುದಿಲ್ಲ. ೧೯೫೫ ರಿಂದ ಗುರುಗಳು ಅಮ್ಮನಂತೆ ಕೊಡುತ್ತಲೇ ಇದ್ದಾರೆ. ಒಬ್ಬ ಗುರುಗಳಿಂದ ಇನ್ನೇನನ್ನು ತಾನೆ ನಿರೀಕ್ಷಿಸಲು ಸಾಧ್ಯ?’ ಎಂದು ಭಾವುಕರಾಗುವ ತಾರಾನಾಥ್ ಸ್ವತಃ ಗುರುವಾಗಿ ದೊಡ್ಡ ಶಿಷ್ಯವೃಂದ ಹೊಂದಿದ್ದಾರೆ.

ತಾರಾನಾಥ್ ಅವರದ್ದು ಪ್ರಯೋಗಶೀಲ ಮನಸ್ಸು ಭಾರತೀಯ ಸಂಗೀತದ ರಾಯಭಾರಿಯಾಗಿ ಅವರು ಸರೋದ್ ಜೊತೆಯಲ್ಲಿ ವಿಶ್ವದ ವಿವಿಧ ಭಾಗಗಳನ್ನು ಸುತ್ತಿದ್ದಾರೆ. ಕ್ಯಾಲಿಫೋರ್ನಿಯಾ ಪ್ರದರ್ಶನ ಕಲೆಗಳ ವಿದ್ಯಾಸಂಸ್ಥೆಯಲ್ಲಿ ಭಾರತೀಯ ಸಂಗೀತದ ಬಗ್ಗೆ ಪಾಠ ಹೇಳಿದ್ದಾರೆ. ಸಿನಿಮಾ ಸಂಗೀತದಲ್ಲೂ ಅವರು ತೊಡಗಿಸಿಕೊಂಡಿದ್ದುಂಟು. ಕನ್ನಡದ ಹೊಸ ಅಲೆಯ ಚಿತ್ರಗಳಾದ ‘ಸಂಸ್ಕಾರ’ ಹಾಗೂ ‘ಪಲ್ಲವಿ’ಗೆ ತಾರಾನಾಥದ್ದೇ ಸಂಗೀತ.

ನನ್ನ ನಂತಂತರವೂ ಸರೋದ್ ಮಾಂತ್ರಿಕತೆ ಉಳಿಯಬೇಕು ಎನ್ನುವುದು ಅವರ ಹೆಬ್ಬಯಕೆ. ಕೊನೆಯವರೆಗೂ ತಮ್ಮ ಸಂಗೀತದಲ್ಲಿ ಮಾಂತ್ರಿಕತೆ-ಜೀವಂತಿಕೆ ಉಳಿಸಿಕೊಳ್ಳಬೇಕು ಎನ್ನುವುದು ಅವರ ಹಂಬಲ.

‘ಚೌಡಯ್ಯ ಪ್ರಶಸ್ತಿ’ ಸೇರಿದಂತೆ ಅನೇಕ ಉನ್ನತ ಗೌರವಗಳು ಸರೊದ್ ಮಾಂತ್ರಿಕನಿಗೆ ಸಂದಿವೆ. ಯಮೆನ್‍ನಲ್ಲಿ ತಾರಾನಾಥನ್ನು ಕುರಿತೇ ಕಿರುತೆರೆಗಾಗಿ ಒಂದು ಸಾಕ್ಷ್ಯಚಿತ್ರ ನಿರ್ಮಾಣಗೊಂಡಿದೆ. ತಾರಾನಾಥರೀಗ ಗಾಯನ ಸಮಾಜದ ೩೯ನೇ ಸಂಗೀತ ಸಮ್ಮೇಳನದ ಅಧ್ಯಕ್ಷರು. ಹಿರಿಕಿರಿಯರ, ಗುರುತಿಷ್ಯರ ಸರಿಗಮ – ಸಮಾಗಮಕ್ಕೆ ವೇದಿಕೆಯಾಗುವ ಈ ಸಮ್ಮೇಳನ ತಾರಾನಾಥರ ಅಧ್ಯಕ್ಷತೆಯಿಂದಾಗಿ ಹೊಸ ಕಳೆ ಪಡೆದುಕೊಂಡಿದೆ. ನಗರದಲ್ಲಿ ಸಂಗೀತದ ಸೋನೆ ಶುರುವಾಗುತ್ತಿದೆ.
*****

Tagged:

Leave a Reply

Your email address will not be published. Required fields are marked *

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...