Home / ಲೇಖನ / ವ್ಯಕ್ತಿ / ನರಸಿಂಹರಾಜು

ನರಸಿಂಹರಾಜು

ನಾನು ಮೊತ್ತ ಮೊದಲು ಹಾಸ್ಯ ನಟ ವರನಟ ಅಪ್ಪಟ ಕಲಾವಿದ ನರಸಿಂಹರಾಜು ಅವರನ್ನು ಕಂಡಿದ್ದು ನನ್ನಳ್ಳಿಯ ಟೆಂಟಿನಲ್ಲಿ. ಚಿಕ್ಕಂದಿನಿಂದಲೂ ಸಿನಿಮಾ ನೋಡುವ ಹುಚ್ಚು. ಹೊಟ್ಟೆಗೆ ಇಲ್ಲದಿದ್ದರೂ ಕನ್ನಡ-ತೆಲುಗು ಸಿನಿಮಾ ನೋಡಿ ಸಂಭ್ರಮಿಸುತ್ತಿದ್ದ ಆ ಕಾಲದಲ್ಲಿ ನಮ್ಮೂರು ಟೆಂಟಿಗೆ ಸತ್ಯ ಹರಿಶ್ಚಂದ್ರ-ರತ್ನಗಿರಿ ರಹಸ್ಯ ಸಿನಿಮಾದಲ್ಲಿ ನರಸಿಂಹರಾಜು ಕಾಣಿಸಿಕೊಂಡರೆ ಸಾಕು ಭಲೇ ಖುಷಿ ಪಡುತ್ತಿದ್ದ ಕಾಲವದು !

ಡಾ|| ರಾಜಕುಮಾರ್‌ ನರಸಿಂಹರಾಜು ಅವರ ಜೋಡಿಯಂತೂ ಸೂಪರ್ ಆಗಿತ್ತು.

ನರಸಿಂಹರಾಜು ಅವರನ್ನು ಕಂಡವರು ನಗದವರಿದ್ದರೆ ಹೇಳಿ ? ಅವರ ಹಾವಭಾವ ಭಂಗಿ ಸಪೂರ ಶರೀರ ಹಾಸ್ಯ ಉಕ್ಕುವ ನಟನೆ ಮಾತು ಮುಖಭಾವ ನಿಲ್ಲುವ ಶೈಲಿ. ಇವೆಲ್ಲ ನಮ್ಮನ್ನು ನಗೆಯ ಲೋಕಕ್ಕೆ ಕೊಂಡೊಯ್ಯುತ್ತಿದ್ದವು. ಅವರಿದ್ದರೆ ಸಿನಿಮಾ ಬಲು ಪ್ರಿಯವಾಗುತ್ತಿತ್ತು.

ದಿನಾಂಕ ೨೪-೦೭-೧೯೨೩ ರಲ್ಲಿ ತುಮಕೂರು ಜಿಲ್ಲೆಯ ತಿಪಟೂರಿನಲ್ಲಿ ಹುಟ್ಟಿದರು.

ತಂದೆ – ರಾಮರಾಜು

ತಾಯಿ- ವೆಂಕಟಲಕ್ಷ್ಮೀ.

ತಂದೆ- ಪೋಲೀಸ್, ಮನೆಯಲ್ಲಿ ನರಸಿಂಹರಾಜು ಹಿರಿಯರು, ಬಹಳ ಸೋಜಿಗದ ಸಂಗತಿಯೆಂದರೆ ಇವರು ಓದಲೇ ಇಲ್ಲ.

ಈ ವೇಳೆಯಲ್ಲೇ ತಂದೆಯ ತಮ್ಮ ಚಿಕ್ಕಪ್ಪ ಲಕ್ಷ್ಮೀಪತಿರಾಜು ತನ್ನಣ್ಣ ತನ್ನತ್ತಿಗೆಯನ್ನು ಕೇಳಿ ಇವರೇ ಸಾಕಿದ್ದಲ್ಲ… ರಂಗ ಕಲಾವಿದನನ್ನಾಗಿ ಮಾಡಲು ಶ್ರಮಿಸಿದರು.

ಸಣ್ಣ ಹುಡುಗನಿಗೆ ಬಣ್ಣ ಹಚ್ಚಿ ನಾಟಕದಲ್ಲಿ ಬಾಲ ಕಲಾವಿದನಾಗಿ ನೋಡಿದರು.

ಮಲ್ಲಪ್ಪನವರ ಶ್ರೀ ಚಂದ್ರ ಮೌಳೇಶ್ವರ ನಾಟಕ ಕಂಪನಿಯಲ್ಲಿ ಎಡ ತೊರೆಯ ಕಂಪನಿ ಹಿರಣ್ಣಯ್ಯನವರ ಮಿತ್ರ ಮಂಡಲಿ, ಭಾರತ ಲಲಿತ ಕಲಾ ಸಂಘ, ಬೇಲೂರಿನ ಗುಂಡಾ ಜೋಯಿಸರ ಕಂಪನಿ, ಗುಬ್ಬಿಯ ಚನ್ನಬಸವೇಶ್ವರ ನಾಟಕ ಕಂಪನಿ… ಗಳಲ್ಲಿ ಸುಮಾರು ಮೂರು ದಶಕಗಳವರೆಗೆ ಕಲಾವಿದರಾಗಿ ಪಳಗಿದರು.

ನರಸಿಂಹ ರಾಜು ಅವರು ನಟಿಸಿದ ಬೇಡರ ಕಣ್ಣಪ್ಪ ನಾಟಕವಂತೂ ಸಾವಿರಾರು ಪ್ರದರ್ಶನ ಕಂಡಿತು. ಅವರ ಕಾಶಿಪಾತ್ರವಾಗಲಿ ನಕ್ಷತ್ರಿಕನಾಗಿ ನಟಿಸಿದ ಸತ್ಯ ಹರಿಶ್ಚಂದ್ರವಾಗಲಿ ನಾವಿನ್ನೂ ಮರೆತಿಲ್ಲ. ನಾಯಕ ನಟರಾಗಿ ಪ್ರೊಫೆಸರ್ ಹುಚ್ಚುರಾಯ… ಹೀಗೆ ಒಂದಲ್ಲ ಎರಡಲ್ಲ ೨೫೫ ಚಿತ್ರಗಳಲ್ಲಿ ನಟಿಸಿ ಸೈಸೈ ಜೈಜೈ ಎನಿಸಿಕೊಂಡ ಮೇರು ನಟರಾಗಿದ್ದರು. ಅವರು ತೀರಿದರೆಂದರೆ ಯಾರು ನಂಬರು…

ಸುಮಾರು ಮೂರು ದಶಕಗಳವರೆಗೆ ರಜತ ಪರದೆಯನ್ನು ಆಳಿದರು. ಜನರನ್ನು ನಕ್ಕು ನಗಿಸಿದರು. ಈಗಲೂ ನಮ್ಮ ಮಧ್ಯೆ ಇರುವರು. ಆಗಿನ ಜನರೂ ಹಾಗಿದ್ದರೂ! ನರಸಿಂಹರಾಜುರವರೂ ಹಾಗಿದ್ದರು. ಕಲೆಗೆ ಬೆಲೆಯಿತ್ತು. ಕಲಾವಿದರನ್ನು ಬೆನ್ನು ತಟ್ಟಿ ಜೀವಿಸುತ್ತಿದ್ದರು.
*****

Tagged:

Leave a Reply

Your email address will not be published. Required fields are marked *

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...

ಒಂದೊಂದೆ ನೀರ ಹನಿಗಳು ಮುಳಿಹುಲ್ಲಿನ ಮಾಡಿನಿಂದ ಜಿನುಗಿ ತೊಟ್ಟಿಕ್ಕಿ ಆತ ಹೊದ್ದ ಕಂಬಳಿಯ ನೆನೆಸಿ ಒಳನುಸುಳಿ ಆತನ ಕುಂಡೆಯ ಭಾಗವೆಲ್ಲಾ ಒದ್ದೆಯಾದ ಕಾರಣವೋ ಹೊತ್ತಿಗೆ ಮುಂಚೆ ಎಂದೂ ಏಳದ ಹೊಲಿಯಪ್ಪ ಅಂದು ದಡಬಡಿಸಿ ಎದ್ದ. ಆತ ಮಲಗಿದ ಕಡೆಯಲ್ಲಿ ನೆಲವೆಲ್ಲಾ ಅದಾಗಲೇ ಹಸಿಯಾಗಿತ್ತಲ್ಲ. ಹ...

ಅದು ರಾಷ್ಟೀಯ ಹೆದ್ದಾರಿ ಎನ್.ಎಚ್.೧೭. ಎಡೆಬಿಡದ ವಾಹನಗಳ ಸಂಚಾರ. ಮಧ್ಯೆ ಮಧ್ಯೆ ಅಪಾಯಕಾರಿ ತಿರುವುಗಳು. ಹೊಸಬರಿಗೆ ಅಪರಿಚಿತರಿಗೆ ಮುಂದೆ ತಿರುವು ಇದೆ ಎಂದು ತಿಳಿಯಲಾಗದ, ಅವಘಡವೇನಾದರೂ ಸಂಭವಿಸಿದರೆ ನೇರವಾಗಿ ಪ್ರಪಾತದ ಪಾಲಾಗುವ ಭಯವನ್ನು ಹೊಂದಿದ ಭೀಕರ ತಿರುವುಗಳನ್ನು ಹೊಂದಿದ ವಕ...