Home / ಲೇಖನ / ವ್ಯಕ್ತಿ / ನರಸಿಂಹರಾಜು

ನರಸಿಂಹರಾಜು

ನಾನು ಮೊತ್ತ ಮೊದಲು ಹಾಸ್ಯ ನಟ ವರನಟ ಅಪ್ಪಟ ಕಲಾವಿದ ನರಸಿಂಹರಾಜು ಅವರನ್ನು ಕಂಡಿದ್ದು ನನ್ನಳ್ಳಿಯ ಟೆಂಟಿನಲ್ಲಿ. ಚಿಕ್ಕಂದಿನಿಂದಲೂ ಸಿನಿಮಾ ನೋಡುವ ಹುಚ್ಚು. ಹೊಟ್ಟೆಗೆ ಇಲ್ಲದಿದ್ದರೂ ಕನ್ನಡ-ತೆಲುಗು ಸಿನಿಮಾ ನೋಡಿ ಸಂಭ್ರಮಿಸುತ್ತಿದ್ದ ಆ ಕಾಲದಲ್ಲಿ ನಮ್ಮೂರು ಟೆಂಟಿಗೆ ಸತ್ಯ ಹರಿಶ್ಚಂದ್ರ-ರತ್ನಗಿರಿ ರಹಸ್ಯ ಸಿನಿಮಾದಲ್ಲಿ ನರಸಿಂಹರಾಜು ಕಾಣಿಸಿಕೊಂಡರೆ ಸಾಕು ಭಲೇ ಖುಷಿ ಪಡುತ್ತಿದ್ದ ಕಾಲವದು !

ಡಾ|| ರಾಜಕುಮಾರ್‌ ನರಸಿಂಹರಾಜು ಅವರ ಜೋಡಿಯಂತೂ ಸೂಪರ್ ಆಗಿತ್ತು.

ನರಸಿಂಹರಾಜು ಅವರನ್ನು ಕಂಡವರು ನಗದವರಿದ್ದರೆ ಹೇಳಿ ? ಅವರ ಹಾವಭಾವ ಭಂಗಿ ಸಪೂರ ಶರೀರ ಹಾಸ್ಯ ಉಕ್ಕುವ ನಟನೆ ಮಾತು ಮುಖಭಾವ ನಿಲ್ಲುವ ಶೈಲಿ. ಇವೆಲ್ಲ ನಮ್ಮನ್ನು ನಗೆಯ ಲೋಕಕ್ಕೆ ಕೊಂಡೊಯ್ಯುತ್ತಿದ್ದವು. ಅವರಿದ್ದರೆ ಸಿನಿಮಾ ಬಲು ಪ್ರಿಯವಾಗುತ್ತಿತ್ತು.

ದಿನಾಂಕ ೨೪-೦೭-೧೯೨೩ ರಲ್ಲಿ ತುಮಕೂರು ಜಿಲ್ಲೆಯ ತಿಪಟೂರಿನಲ್ಲಿ ಹುಟ್ಟಿದರು.

ತಂದೆ – ರಾಮರಾಜು

ತಾಯಿ- ವೆಂಕಟಲಕ್ಷ್ಮೀ.

ತಂದೆ- ಪೋಲೀಸ್, ಮನೆಯಲ್ಲಿ ನರಸಿಂಹರಾಜು ಹಿರಿಯರು, ಬಹಳ ಸೋಜಿಗದ ಸಂಗತಿಯೆಂದರೆ ಇವರು ಓದಲೇ ಇಲ್ಲ.

ಈ ವೇಳೆಯಲ್ಲೇ ತಂದೆಯ ತಮ್ಮ ಚಿಕ್ಕಪ್ಪ ಲಕ್ಷ್ಮೀಪತಿರಾಜು ತನ್ನಣ್ಣ ತನ್ನತ್ತಿಗೆಯನ್ನು ಕೇಳಿ ಇವರೇ ಸಾಕಿದ್ದಲ್ಲ… ರಂಗ ಕಲಾವಿದನನ್ನಾಗಿ ಮಾಡಲು ಶ್ರಮಿಸಿದರು.

ಸಣ್ಣ ಹುಡುಗನಿಗೆ ಬಣ್ಣ ಹಚ್ಚಿ ನಾಟಕದಲ್ಲಿ ಬಾಲ ಕಲಾವಿದನಾಗಿ ನೋಡಿದರು.

ಮಲ್ಲಪ್ಪನವರ ಶ್ರೀ ಚಂದ್ರ ಮೌಳೇಶ್ವರ ನಾಟಕ ಕಂಪನಿಯಲ್ಲಿ ಎಡ ತೊರೆಯ ಕಂಪನಿ ಹಿರಣ್ಣಯ್ಯನವರ ಮಿತ್ರ ಮಂಡಲಿ, ಭಾರತ ಲಲಿತ ಕಲಾ ಸಂಘ, ಬೇಲೂರಿನ ಗುಂಡಾ ಜೋಯಿಸರ ಕಂಪನಿ, ಗುಬ್ಬಿಯ ಚನ್ನಬಸವೇಶ್ವರ ನಾಟಕ ಕಂಪನಿ… ಗಳಲ್ಲಿ ಸುಮಾರು ಮೂರು ದಶಕಗಳವರೆಗೆ ಕಲಾವಿದರಾಗಿ ಪಳಗಿದರು.

ನರಸಿಂಹ ರಾಜು ಅವರು ನಟಿಸಿದ ಬೇಡರ ಕಣ್ಣಪ್ಪ ನಾಟಕವಂತೂ ಸಾವಿರಾರು ಪ್ರದರ್ಶನ ಕಂಡಿತು. ಅವರ ಕಾಶಿಪಾತ್ರವಾಗಲಿ ನಕ್ಷತ್ರಿಕನಾಗಿ ನಟಿಸಿದ ಸತ್ಯ ಹರಿಶ್ಚಂದ್ರವಾಗಲಿ ನಾವಿನ್ನೂ ಮರೆತಿಲ್ಲ. ನಾಯಕ ನಟರಾಗಿ ಪ್ರೊಫೆಸರ್ ಹುಚ್ಚುರಾಯ… ಹೀಗೆ ಒಂದಲ್ಲ ಎರಡಲ್ಲ ೨೫೫ ಚಿತ್ರಗಳಲ್ಲಿ ನಟಿಸಿ ಸೈಸೈ ಜೈಜೈ ಎನಿಸಿಕೊಂಡ ಮೇರು ನಟರಾಗಿದ್ದರು. ಅವರು ತೀರಿದರೆಂದರೆ ಯಾರು ನಂಬರು…

ಸುಮಾರು ಮೂರು ದಶಕಗಳವರೆಗೆ ರಜತ ಪರದೆಯನ್ನು ಆಳಿದರು. ಜನರನ್ನು ನಕ್ಕು ನಗಿಸಿದರು. ಈಗಲೂ ನಮ್ಮ ಮಧ್ಯೆ ಇರುವರು. ಆಗಿನ ಜನರೂ ಹಾಗಿದ್ದರೂ! ನರಸಿಂಹರಾಜುರವರೂ ಹಾಗಿದ್ದರು. ಕಲೆಗೆ ಬೆಲೆಯಿತ್ತು. ಕಲಾವಿದರನ್ನು ಬೆನ್ನು ತಟ್ಟಿ ಜೀವಿಸುತ್ತಿದ್ದರು.
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...