Home / ಲೇಖನ / ವ್ಯಕ್ತಿ / ನರಸಿಂಹರಾಜು

ನರಸಿಂಹರಾಜು

ನಾನು ಮೊತ್ತ ಮೊದಲು ಹಾಸ್ಯ ನಟ ವರನಟ ಅಪ್ಪಟ ಕಲಾವಿದ ನರಸಿಂಹರಾಜು ಅವರನ್ನು ಕಂಡಿದ್ದು ನನ್ನಳ್ಳಿಯ ಟೆಂಟಿನಲ್ಲಿ. ಚಿಕ್ಕಂದಿನಿಂದಲೂ ಸಿನಿಮಾ ನೋಡುವ ಹುಚ್ಚು. ಹೊಟ್ಟೆಗೆ ಇಲ್ಲದಿದ್ದರೂ ಕನ್ನಡ-ತೆಲುಗು ಸಿನಿಮಾ ನೋಡಿ ಸಂಭ್ರಮಿಸುತ್ತಿದ್ದ ಆ ಕಾಲದಲ್ಲಿ ನಮ್ಮೂರು ಟೆಂಟಿಗೆ ಸತ್ಯ ಹರಿಶ್ಚಂದ್ರ-ರತ್ನಗಿರಿ ರಹಸ್ಯ ಸಿನಿಮಾದಲ್ಲಿ ನರಸಿಂಹರಾಜು ಕಾಣಿಸಿಕೊಂಡರೆ ಸಾಕು ಭಲೇ ಖುಷಿ ಪಡುತ್ತಿದ್ದ ಕಾಲವದು !

ಡಾ|| ರಾಜಕುಮಾರ್‌ ನರಸಿಂಹರಾಜು ಅವರ ಜೋಡಿಯಂತೂ ಸೂಪರ್ ಆಗಿತ್ತು.

ನರಸಿಂಹರಾಜು ಅವರನ್ನು ಕಂಡವರು ನಗದವರಿದ್ದರೆ ಹೇಳಿ ? ಅವರ ಹಾವಭಾವ ಭಂಗಿ ಸಪೂರ ಶರೀರ ಹಾಸ್ಯ ಉಕ್ಕುವ ನಟನೆ ಮಾತು ಮುಖಭಾವ ನಿಲ್ಲುವ ಶೈಲಿ. ಇವೆಲ್ಲ ನಮ್ಮನ್ನು ನಗೆಯ ಲೋಕಕ್ಕೆ ಕೊಂಡೊಯ್ಯುತ್ತಿದ್ದವು. ಅವರಿದ್ದರೆ ಸಿನಿಮಾ ಬಲು ಪ್ರಿಯವಾಗುತ್ತಿತ್ತು.

ದಿನಾಂಕ ೨೪-೦೭-೧೯೨೩ ರಲ್ಲಿ ತುಮಕೂರು ಜಿಲ್ಲೆಯ ತಿಪಟೂರಿನಲ್ಲಿ ಹುಟ್ಟಿದರು.

ತಂದೆ – ರಾಮರಾಜು

ತಾಯಿ- ವೆಂಕಟಲಕ್ಷ್ಮೀ.

ತಂದೆ- ಪೋಲೀಸ್, ಮನೆಯಲ್ಲಿ ನರಸಿಂಹರಾಜು ಹಿರಿಯರು, ಬಹಳ ಸೋಜಿಗದ ಸಂಗತಿಯೆಂದರೆ ಇವರು ಓದಲೇ ಇಲ್ಲ.

ಈ ವೇಳೆಯಲ್ಲೇ ತಂದೆಯ ತಮ್ಮ ಚಿಕ್ಕಪ್ಪ ಲಕ್ಷ್ಮೀಪತಿರಾಜು ತನ್ನಣ್ಣ ತನ್ನತ್ತಿಗೆಯನ್ನು ಕೇಳಿ ಇವರೇ ಸಾಕಿದ್ದಲ್ಲ… ರಂಗ ಕಲಾವಿದನನ್ನಾಗಿ ಮಾಡಲು ಶ್ರಮಿಸಿದರು.

ಸಣ್ಣ ಹುಡುಗನಿಗೆ ಬಣ್ಣ ಹಚ್ಚಿ ನಾಟಕದಲ್ಲಿ ಬಾಲ ಕಲಾವಿದನಾಗಿ ನೋಡಿದರು.

ಮಲ್ಲಪ್ಪನವರ ಶ್ರೀ ಚಂದ್ರ ಮೌಳೇಶ್ವರ ನಾಟಕ ಕಂಪನಿಯಲ್ಲಿ ಎಡ ತೊರೆಯ ಕಂಪನಿ ಹಿರಣ್ಣಯ್ಯನವರ ಮಿತ್ರ ಮಂಡಲಿ, ಭಾರತ ಲಲಿತ ಕಲಾ ಸಂಘ, ಬೇಲೂರಿನ ಗುಂಡಾ ಜೋಯಿಸರ ಕಂಪನಿ, ಗುಬ್ಬಿಯ ಚನ್ನಬಸವೇಶ್ವರ ನಾಟಕ ಕಂಪನಿ… ಗಳಲ್ಲಿ ಸುಮಾರು ಮೂರು ದಶಕಗಳವರೆಗೆ ಕಲಾವಿದರಾಗಿ ಪಳಗಿದರು.

ನರಸಿಂಹ ರಾಜು ಅವರು ನಟಿಸಿದ ಬೇಡರ ಕಣ್ಣಪ್ಪ ನಾಟಕವಂತೂ ಸಾವಿರಾರು ಪ್ರದರ್ಶನ ಕಂಡಿತು. ಅವರ ಕಾಶಿಪಾತ್ರವಾಗಲಿ ನಕ್ಷತ್ರಿಕನಾಗಿ ನಟಿಸಿದ ಸತ್ಯ ಹರಿಶ್ಚಂದ್ರವಾಗಲಿ ನಾವಿನ್ನೂ ಮರೆತಿಲ್ಲ. ನಾಯಕ ನಟರಾಗಿ ಪ್ರೊಫೆಸರ್ ಹುಚ್ಚುರಾಯ… ಹೀಗೆ ಒಂದಲ್ಲ ಎರಡಲ್ಲ ೨೫೫ ಚಿತ್ರಗಳಲ್ಲಿ ನಟಿಸಿ ಸೈಸೈ ಜೈಜೈ ಎನಿಸಿಕೊಂಡ ಮೇರು ನಟರಾಗಿದ್ದರು. ಅವರು ತೀರಿದರೆಂದರೆ ಯಾರು ನಂಬರು…

ಸುಮಾರು ಮೂರು ದಶಕಗಳವರೆಗೆ ರಜತ ಪರದೆಯನ್ನು ಆಳಿದರು. ಜನರನ್ನು ನಕ್ಕು ನಗಿಸಿದರು. ಈಗಲೂ ನಮ್ಮ ಮಧ್ಯೆ ಇರುವರು. ಆಗಿನ ಜನರೂ ಹಾಗಿದ್ದರೂ! ನರಸಿಂಹರಾಜುರವರೂ ಹಾಗಿದ್ದರು. ಕಲೆಗೆ ಬೆಲೆಯಿತ್ತು. ಕಲಾವಿದರನ್ನು ಬೆನ್ನು ತಟ್ಟಿ ಜೀವಿಸುತ್ತಿದ್ದರು.
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...