Home / ಕವನ / ಕವಿತೆ / ಬುದ್ಧನ ಹುಡುಕಾಟ

ಬುದ್ಧನ ಹುಡುಕಾಟ

ಬುದ್ಧನ ಹುಡುಕಿದೆ.
ಉಸಿರುಗಟ್ಟಿಸುವ ನಾಗರೀಕ ತಾಣಗಳಲ್ಲಿ
ಚಿತ್ರಹಿಂಸೆಯ ಗ್ಯಾಸ್ ಛೇಂಬರ್‌ಗಳಲ್ಲಿ
ತೊಟ್ಟಿಲಲ್ಲಿ ಮಲಗಿದ ಮುದ್ದು ಕಂದನ
ಮುಗ್ಧ ಮುಗುಳು ನಗೆಯ ಬೆಳಕಲ್ಲಿ
ದ್ವೇಷವಿಲ್ಲ, ಮಗುವಿನ ಮುಗ್ಧತೆಯಲ್ಲಿ.

ಬುದ್ಧನ ಹುಡುಕಿದೆ.
ಬೆಳಗು ಮುಂಜಾವಿನ ಬಿದ್ದ ಕನಸಿನಲಿ
ಹುಲ್ಲ ಮೇಲಿನ ಇಬ್ಬನಿ ಕರಗಿ ಮೋಡವಾಗುವಲ್ಲಿ
ಅಕ್ಷರಗಳು ಅಜ್ಞಾನ ಸುಡುವ ಸಾಕ್ಷಿ -ಪ್ರಜ್ಞೆ ಅರಳುವಲ್ಲಿ
ಅಹಮ್ಮನ್ನು ಅಗ್ನಿಗರ್‍ಪಿಸಿದ ಆತ್ಮದ ಪ್ರಭೆಯಲ್ಲಿ.

ಬುದ್ಧನ ಹುಡುಕಿದೆ
ಶಬ್ದ ಸಂತೆಯಲ್ಲಿ ನಿಶಬ್ಧ ಗೂಡುಗಳಲ್ಲಿ
ಮಹಾ ಮೌನದ ಘನತೆಯ ನಡೆಯಲ್ಲಿ
ನೆಲದ ತುಂಬ ಬೆಳಕಿನ ಬೀಜ ಬಿತ್ತುವಲ್ಲಿ
ಶಾಂತಿ ಪ್ರಭೆಯ ಚಿಗುರು ಮೊಳೆಯುವಲ್ಲಿ.

ಬುದ್ಧನ ಹುಡುಕಿದೆ.
ಬೋಧಿವೃಕ್ಷದ ನೆರಳಿನಲ್ಲಿ ಜ್ಞಾನ ಬೆಳಕಿಲ್ಲಿ
ಬುದ್ಧಗಯಾದ ಎಲೆ ಮೇಲಿನ ಇಬ್ಬನಿಯಲ್ಲಿ
ಕೋಗಿಲೆಯ ಇಂಪಾದ ಶಾಂತಿ ಸಂದೇಶದಲ್ಲಿ
ಉದಾತ್ತ ನಿಲುವಿನ ಆ ಭವ್ಯ ಭಂಗಿಯಲ್ಲಿ

ಬುದ್ಧನ ಹುಡುಕಿದೆ.
ಊರು ಕೇರಿಯ ವಧಾಸ್ಥಾನಗಳಲ್ಲಿ
ಚಿತ್ತಕ್ಕೆ ಹತ್ತಿದ ಬೆಂಕಿ ಉರಿಯುವಲ್ಲಿ
ಪ್ರೀತಿ ಲೋಕದ ಬೀಜ ಮೊಳೆಯುವಲ್ಲಿ
ಮನದ ಕೋಣೆಯಲಿ ಮಬ್ಬು ಪ್ರಜ್ವಲಿಸುವಲ್ಲಿ
ಕರುಣಾರಸದಲ್ಲಿ ತೊಯ್ದ ಅದ್ದಿದ ಭಾವಗಳಲಿ.

ಬುದ್ಧನ ಹುಡುಕಿದೆ.
ನಿದ್ದೆಯಿಂದೆದ್ದು ನಡೆದ ಬರಿಗಾಲು ನಡಿಗೆಯಲ್ಲಿ
ನಾಡ ತುಂಬ ಮೂಡಿದ ಹೆಜ್ಜೆ ಗುರುತುಗಳಲ್ಲಿ
ಬತ್ತಿಹೋದ ಕರುಳ ಬಳ್ಳಿಯ ಸಂಬಂಧಗಳಲ್ಲಿ
ಇಬ್ಬನಿ ಹನಿಗೆ ಅಮರತ್ವದ ಆಸೆ ಚಿಗುರುವಲ್ಲಿ.

ಬುದ್ಧನ ಹುಡುಕಿದೆ.
ರಸ್ತೆಗಂಟಿದ ರಕ್ತ ಕಲೆಗಳ ತೊಳೆವ ಮಳೆ ಹನಿಗಳಲ್ಲಿ
ಕ್ರೌರ್‍ಯತುಂಬಿರುವಲ್ಲಿ, ಪ್ರೀತಿಯ ಸಾಗರಗಳಲ್ಲಿ
ಟಾರು ರಸ್ತೆಯ ಕಲೆಗಳೇನೋ ತೊಳೆದು ಹೋದವು
ಬಿದ್ದ ಹನಿಗಳ ಹೀರಿಕೊಳ್ಳಲು ನೆಲವೇ ಇಲ್ಲವಲ್ಲ
ಬರೀ ಹಾರ್‍ನು, ಸಿಗ್ನಲ್ಲು, ಟ್ರಾಫಿಕ್ಕು, ಕಾಂಕ್ರೀಟು ಬರೀ ಧೂಳು
ಬರಡು ಕಾಂಕ್ರೀಟು ಕಾಡಿನಲ್ಲಿ ಎಲ್ಲಿ ಹುಡುಕಲಿ ನಿನ್ನ
ಬುದ್ಧ ಎಲ್ಲಿ ಹುಡುಕಲಿ ನಿನ್ನ?
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...