Home / ಕವನ / ಕವಿತೆ / ಬಡವರ ಕಾಮಧೇನು

ಬಡವರ ಕಾಮಧೇನು

ನಾ ಕಂಡ ಜೀವಿಯನು ಭೂಖಂಡವೆಲ್ಲ
ನೂಕೆಂದು ನುಡಿಯುತಿದೆ ಯಾಕೆಂದು ಕಾಣೆ
ಬಾಲ್ಯದಲಿ ಪಶುಗಳನು ಸಲಹುತ್ತ ಬೆಳೆದೆ
ಬಳಿಕೆಯಾಗಿಹ ಪ್ರಾಣಿಒಳಗಂಗಳರಿದೆ
ವನಮೃಗಖಗಂಗಳನು ನೋಡುತ್ತ ನಲಿದೆ
ಜನಪದಂಗಳನೆಲ್ಲ ಬಳಸುತ್ತ ತಿಳಿದೆ
ನಾ ಕಂಡ ಜೀವಿಯನು ಭೂಖಂಡವೆಲ್ಲ
ನೂಕೆಂದು ನುಡಿಯುತ್ತಿದೆ ಯಾಕಂದು ಕಾಣೆ
ಬೇಡಾದ ವಸ್ತುಗಳ ಮೆಲುತಿರುವ ಪ್ರಾಣಿ
ಬೇಕಾದ ಗೆಯ್ಮೆಗಳ ಗೆಯ್ಯುತಿಹ ತ್ರಾಣಿ
ಕಡಿದಾದ ಗುಡ್ಡದಲಿ ನಿಡಿದಾಗಿ ನಡೆವ
ಬಿರುಸಾದ ಮರಳಲ್ಲಿ ಸುಖವಾಗಿ ಸುಳಿವ
ನಾ ಕಂಡ ಜೀವಿಯನು ಭೂಖಂಡವೆಲ್ಲ
ನೂಕೆಂದು ನುಡಿಯುತಿದೆ ಯಾಕೆಂದು ಕಾಣೆ
ಇರುಕಾದ ಸರುವಿನೊಳು ಸರಸಾಗಿ ಸಾಗಿ
ಎರೆಯಂಗೆ ತೋಷವನು ಬೀರುತ್ತ ಸಾರಿ
ಪರಿಚರ್ಯೆಕೈಕೊಂಬ ಪರಿಯನ್ನು ಕಳೆದು
ನಿಷ್ಕಾಮ ಕರ್ಮವನು ಮನದಿಂದ ಮಾಳ್ಪ
ನಾ ಕ೦ದ ಜೀವಿಯನು ಭೂಖಂಡವೆಲ್ಲ
ನೂಕೆಂದು ನುಡಿಯುತಿದೆ ಯಾಕೆಂದು ಕಾಣೆ
ಹೊರೆಯನ್ನು ಹೇರಿರುವ ಪರಿಯನ್ನು ತಿಳಿದು
ಕೊರಗುತ್ತ ಕರಗದಲೆ ಮನವನ್ನು ಬಿಗಿದು
ಎರೆಯಂಗೆ ಎರೆಯಳಿಗೆ ಹರುಷವನು ತರುವ
ಕಷ್ಟದಿಂ ಕಾಯವನು ನೂಕುತ್ತ ನಡೆವ
ನಾ ಕಂಡ ಜೀವಿಯನ್ನು ಭೂಖಂಡವೆಲ್ಲ
ನೂಕೆಂದು ನುಡಿಯುತಿದೆ ಯಾಕಂದು ಕಾಣೆ
ಕಲ್ಲನ್ನು ಕಾಳನ್ನು ಕಟ್ಟಿಗೆಯ ಹೊರೆಯ
ಮಣ್ಣನ್ನು ಮುಂತಾಗಿ ಒಯ್ಯುತಿಹ ಪರಿಯ
ಕಾಸನ್ನು ಕಳೆಯದಲೆ ಸಾಕುತಿಹ ಬಗೆಯ
ಪಶುಜೀವ ಕೋಟಿಯಲಿ ಬಡಜನರ ಸಿರಿಯ
ನಾ ಕ೦ಡ ಜೀವಿಯನು ಭೂಖಂಡವೆಲ್ಲ
ನೂಕೆಂದು ನುಡಿಯುತಿದೆ ಯಾಕೆಂದು ಕಾಣೆ
ಗುಜರಾತ ನಾಡಿನಲಿ ಜನರಾಡಿಕೊಳುವ
“ರಾವಣನ ಗಡಿಯಾಳ” ಬಿರುದಾಗಿ ಮೆರೆವ
ಪ್ರತಿ ಮೂರು ತಾಸಿನಲಿ ಪರಮನನು ಸ್ಮರಿಸಿ
ಧರೆಗೊಂದು ಗಡಿಯಾಳ ತೆರನಾಗಿ ಮೆರೆವ
ನಾ ಕಂಡ ಜೀವಿಯನು ಭೂಖಂಡವೆಲ್ಲ
ನೂಕೆಂದು ನುಡಿಯುತಿದೆ ಯಾಕೆಂದು ಕಾಣೆ
ಸ್ವರವನ್ನು ಕರ್ಕಶದ ಕಣಿಯೆಂದು ಬಗೆವ
ಮರವೆಯನು ಬಡಪಾಯಿ ಮತಿಯಂದು ತಿಳಿವ
ಗುರುತರದ್ರೋಹವನ್ನೆಸಗುತ್ತ ನರರು
ಮನಬಂದ ತೆರದಲ್ಲಿ ದೂರುತ್ತಲಿರುವ
ನಾ ಕಂಡ ಜೀವಿಯನು ಭೂಖಂಡವೆಲ್ಲ
ನೂಕೆ೦ದು ನುಡಿಯುತಿದೆ ಯಾಕೆಂದು ಕಾಣೆ
ಆರಯ್ಯೆ ಹಾಲುಂಡಪರಿಯಿಂದ ತಿಳಿದು
ಮೀರಿರ್ದ ಬಾಲಗ್ರಹಂಗಳನು ತರಿದು
ಸೇರಿರ್ದ ಕಾಲನುರು ಸಂಕಲೆಯ ಕಡಿದು
ಸೆಟೆದಿರ್ದ ಶಿಶುವನ್ನು ಸುಖವಾಗಿ ನಗೆಪ
ನಾ ಕಂಡ ಜೀವಿಯನು ಭೂಖಂಡವೆಲ್ಲ
ನೂಕೆಂದು ನುಡಿಯುತಿದೆ ಯಾಕೆ೦ದು ಕಾಣೆ
ಕಿವಿನೆಟ್ಟಗಿಟ್ಟಿರುವ ಮುಖವನ್ನು ನೋಡಿ
ಬೆರಗಾಗಿ ಮನದಲ್ಲಿ ಮುದದಿಂದ ಕೂಡಿ
ಮೂಡಿರ್ದ ಬಾಳೆಗಳ ಗೊನೆಯಂತೆ ಕಾ೦ಬ
ತುಂಬಿರ್ದ ಸರಳತೆಯು ತುಳುಕುತ್ತಲಿರುವ
ನಾ ಕಂಡ ಜೀವಿಯನು ಭೂಖಂಡವೆಲ್ಲ
ನೂಕೆಂದು ನುಡಿಯುತಿದೆ ಯಾಕೆ೦ದು ಕಾಣೆ
೧೦
ಮಹಾತ್ಮಾ ಯೇಸುವನು ಹೊರೆಯಾಗಿಹೊತ್ತ
ಪಿರಿದಾದ ಸೈರಣೆಗೆ ನೆಲೆಯಾಗಿ ನಿಂತ
ಗಂಗಾತರಂಗಗಳ ತಟಗಳಲಿ ಮಿಂದು
ಕಂಗೊಳಿಪ ಹಿಮಗಿರಿಯ ದರಿಗಳಲಿ ನಿಂದು
ನಾ ಕಂಡ ಜೀವಿಯನು ಭೂಖಂಡವೆಲ್ಲ
ನೂಕೆಂದು ನುಡಿಯುತಿದೆ ಯಾಕೆಂದು ಕಾಣೆ
೧೧
ತಿಪ್ಪೆಯುಪ್ಪರಿಗೆಗಳ ಹೊಲಬನ್ನು ತಿಳಿದು
ಬಡವಂಗೆ ನೆರೆಕಾಮಧೇನುವಾಗಿರುವ
ನಿಷ್ಕಾಮ ಕರ್ಮವನು ಕಲಿಸುತಿಹ ಋಷಿಯ
ಸತ್ಕಾರ್ಯ ಮಹಿಮೆಯನು ಸಾರುತಿಹ ಸಿರಿಯ
ನಾ ಕಂಡ ಜೀವಿಯನ್ನು ಭೂಖಂಡವೆಲ್ಲ
ನೂಕೆಂದು ನುಡಿಯುತಿದೆ ಯಾಕೆಂದು ಕಾಣೆ
*****
Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...