Home / ಕವನ / ಕವಿತೆ / ಬಡವರ ಕಾಮಧೇನು

ಬಡವರ ಕಾಮಧೇನು

ನಾ ಕಂಡ ಜೀವಿಯನು ಭೂಖಂಡವೆಲ್ಲ
ನೂಕೆಂದು ನುಡಿಯುತಿದೆ ಯಾಕೆಂದು ಕಾಣೆ
ಬಾಲ್ಯದಲಿ ಪಶುಗಳನು ಸಲಹುತ್ತ ಬೆಳೆದೆ
ಬಳಿಕೆಯಾಗಿಹ ಪ್ರಾಣಿಒಳಗಂಗಳರಿದೆ
ವನಮೃಗಖಗಂಗಳನು ನೋಡುತ್ತ ನಲಿದೆ
ಜನಪದಂಗಳನೆಲ್ಲ ಬಳಸುತ್ತ ತಿಳಿದೆ
ನಾ ಕಂಡ ಜೀವಿಯನು ಭೂಖಂಡವೆಲ್ಲ
ನೂಕೆಂದು ನುಡಿಯುತ್ತಿದೆ ಯಾಕಂದು ಕಾಣೆ
ಬೇಡಾದ ವಸ್ತುಗಳ ಮೆಲುತಿರುವ ಪ್ರಾಣಿ
ಬೇಕಾದ ಗೆಯ್ಮೆಗಳ ಗೆಯ್ಯುತಿಹ ತ್ರಾಣಿ
ಕಡಿದಾದ ಗುಡ್ಡದಲಿ ನಿಡಿದಾಗಿ ನಡೆವ
ಬಿರುಸಾದ ಮರಳಲ್ಲಿ ಸುಖವಾಗಿ ಸುಳಿವ
ನಾ ಕಂಡ ಜೀವಿಯನು ಭೂಖಂಡವೆಲ್ಲ
ನೂಕೆಂದು ನುಡಿಯುತಿದೆ ಯಾಕೆಂದು ಕಾಣೆ
ಇರುಕಾದ ಸರುವಿನೊಳು ಸರಸಾಗಿ ಸಾಗಿ
ಎರೆಯಂಗೆ ತೋಷವನು ಬೀರುತ್ತ ಸಾರಿ
ಪರಿಚರ್ಯೆಕೈಕೊಂಬ ಪರಿಯನ್ನು ಕಳೆದು
ನಿಷ್ಕಾಮ ಕರ್ಮವನು ಮನದಿಂದ ಮಾಳ್ಪ
ನಾ ಕ೦ದ ಜೀವಿಯನು ಭೂಖಂಡವೆಲ್ಲ
ನೂಕೆಂದು ನುಡಿಯುತಿದೆ ಯಾಕೆಂದು ಕಾಣೆ
ಹೊರೆಯನ್ನು ಹೇರಿರುವ ಪರಿಯನ್ನು ತಿಳಿದು
ಕೊರಗುತ್ತ ಕರಗದಲೆ ಮನವನ್ನು ಬಿಗಿದು
ಎರೆಯಂಗೆ ಎರೆಯಳಿಗೆ ಹರುಷವನು ತರುವ
ಕಷ್ಟದಿಂ ಕಾಯವನು ನೂಕುತ್ತ ನಡೆವ
ನಾ ಕಂಡ ಜೀವಿಯನ್ನು ಭೂಖಂಡವೆಲ್ಲ
ನೂಕೆಂದು ನುಡಿಯುತಿದೆ ಯಾಕಂದು ಕಾಣೆ
ಕಲ್ಲನ್ನು ಕಾಳನ್ನು ಕಟ್ಟಿಗೆಯ ಹೊರೆಯ
ಮಣ್ಣನ್ನು ಮುಂತಾಗಿ ಒಯ್ಯುತಿಹ ಪರಿಯ
ಕಾಸನ್ನು ಕಳೆಯದಲೆ ಸಾಕುತಿಹ ಬಗೆಯ
ಪಶುಜೀವ ಕೋಟಿಯಲಿ ಬಡಜನರ ಸಿರಿಯ
ನಾ ಕ೦ಡ ಜೀವಿಯನು ಭೂಖಂಡವೆಲ್ಲ
ನೂಕೆಂದು ನುಡಿಯುತಿದೆ ಯಾಕೆಂದು ಕಾಣೆ
ಗುಜರಾತ ನಾಡಿನಲಿ ಜನರಾಡಿಕೊಳುವ
“ರಾವಣನ ಗಡಿಯಾಳ” ಬಿರುದಾಗಿ ಮೆರೆವ
ಪ್ರತಿ ಮೂರು ತಾಸಿನಲಿ ಪರಮನನು ಸ್ಮರಿಸಿ
ಧರೆಗೊಂದು ಗಡಿಯಾಳ ತೆರನಾಗಿ ಮೆರೆವ
ನಾ ಕಂಡ ಜೀವಿಯನು ಭೂಖಂಡವೆಲ್ಲ
ನೂಕೆಂದು ನುಡಿಯುತಿದೆ ಯಾಕೆಂದು ಕಾಣೆ
ಸ್ವರವನ್ನು ಕರ್ಕಶದ ಕಣಿಯೆಂದು ಬಗೆವ
ಮರವೆಯನು ಬಡಪಾಯಿ ಮತಿಯಂದು ತಿಳಿವ
ಗುರುತರದ್ರೋಹವನ್ನೆಸಗುತ್ತ ನರರು
ಮನಬಂದ ತೆರದಲ್ಲಿ ದೂರುತ್ತಲಿರುವ
ನಾ ಕಂಡ ಜೀವಿಯನು ಭೂಖಂಡವೆಲ್ಲ
ನೂಕೆ೦ದು ನುಡಿಯುತಿದೆ ಯಾಕೆಂದು ಕಾಣೆ
ಆರಯ್ಯೆ ಹಾಲುಂಡಪರಿಯಿಂದ ತಿಳಿದು
ಮೀರಿರ್ದ ಬಾಲಗ್ರಹಂಗಳನು ತರಿದು
ಸೇರಿರ್ದ ಕಾಲನುರು ಸಂಕಲೆಯ ಕಡಿದು
ಸೆಟೆದಿರ್ದ ಶಿಶುವನ್ನು ಸುಖವಾಗಿ ನಗೆಪ
ನಾ ಕಂಡ ಜೀವಿಯನು ಭೂಖಂಡವೆಲ್ಲ
ನೂಕೆಂದು ನುಡಿಯುತಿದೆ ಯಾಕೆ೦ದು ಕಾಣೆ
ಕಿವಿನೆಟ್ಟಗಿಟ್ಟಿರುವ ಮುಖವನ್ನು ನೋಡಿ
ಬೆರಗಾಗಿ ಮನದಲ್ಲಿ ಮುದದಿಂದ ಕೂಡಿ
ಮೂಡಿರ್ದ ಬಾಳೆಗಳ ಗೊನೆಯಂತೆ ಕಾ೦ಬ
ತುಂಬಿರ್ದ ಸರಳತೆಯು ತುಳುಕುತ್ತಲಿರುವ
ನಾ ಕಂಡ ಜೀವಿಯನು ಭೂಖಂಡವೆಲ್ಲ
ನೂಕೆಂದು ನುಡಿಯುತಿದೆ ಯಾಕೆ೦ದು ಕಾಣೆ
೧೦
ಮಹಾತ್ಮಾ ಯೇಸುವನು ಹೊರೆಯಾಗಿಹೊತ್ತ
ಪಿರಿದಾದ ಸೈರಣೆಗೆ ನೆಲೆಯಾಗಿ ನಿಂತ
ಗಂಗಾತರಂಗಗಳ ತಟಗಳಲಿ ಮಿಂದು
ಕಂಗೊಳಿಪ ಹಿಮಗಿರಿಯ ದರಿಗಳಲಿ ನಿಂದು
ನಾ ಕಂಡ ಜೀವಿಯನು ಭೂಖಂಡವೆಲ್ಲ
ನೂಕೆಂದು ನುಡಿಯುತಿದೆ ಯಾಕೆಂದು ಕಾಣೆ
೧೧
ತಿಪ್ಪೆಯುಪ್ಪರಿಗೆಗಳ ಹೊಲಬನ್ನು ತಿಳಿದು
ಬಡವಂಗೆ ನೆರೆಕಾಮಧೇನುವಾಗಿರುವ
ನಿಷ್ಕಾಮ ಕರ್ಮವನು ಕಲಿಸುತಿಹ ಋಷಿಯ
ಸತ್ಕಾರ್ಯ ಮಹಿಮೆಯನು ಸಾರುತಿಹ ಸಿರಿಯ
ನಾ ಕಂಡ ಜೀವಿಯನ್ನು ಭೂಖಂಡವೆಲ್ಲ
ನೂಕೆಂದು ನುಡಿಯುತಿದೆ ಯಾಕೆಂದು ಕಾಣೆ
*****
Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...