Home / ಕವನ / ಕವಿತೆ / ಬಡವರ ಕಾಮಧೇನು

ಬಡವರ ಕಾಮಧೇನು

ನಾ ಕಂಡ ಜೀವಿಯನು ಭೂಖಂಡವೆಲ್ಲ
ನೂಕೆಂದು ನುಡಿಯುತಿದೆ ಯಾಕೆಂದು ಕಾಣೆ
ಬಾಲ್ಯದಲಿ ಪಶುಗಳನು ಸಲಹುತ್ತ ಬೆಳೆದೆ
ಬಳಿಕೆಯಾಗಿಹ ಪ್ರಾಣಿಒಳಗಂಗಳರಿದೆ
ವನಮೃಗಖಗಂಗಳನು ನೋಡುತ್ತ ನಲಿದೆ
ಜನಪದಂಗಳನೆಲ್ಲ ಬಳಸುತ್ತ ತಿಳಿದೆ
ನಾ ಕಂಡ ಜೀವಿಯನು ಭೂಖಂಡವೆಲ್ಲ
ನೂಕೆಂದು ನುಡಿಯುತ್ತಿದೆ ಯಾಕಂದು ಕಾಣೆ
ಬೇಡಾದ ವಸ್ತುಗಳ ಮೆಲುತಿರುವ ಪ್ರಾಣಿ
ಬೇಕಾದ ಗೆಯ್ಮೆಗಳ ಗೆಯ್ಯುತಿಹ ತ್ರಾಣಿ
ಕಡಿದಾದ ಗುಡ್ಡದಲಿ ನಿಡಿದಾಗಿ ನಡೆವ
ಬಿರುಸಾದ ಮರಳಲ್ಲಿ ಸುಖವಾಗಿ ಸುಳಿವ
ನಾ ಕಂಡ ಜೀವಿಯನು ಭೂಖಂಡವೆಲ್ಲ
ನೂಕೆಂದು ನುಡಿಯುತಿದೆ ಯಾಕೆಂದು ಕಾಣೆ
ಇರುಕಾದ ಸರುವಿನೊಳು ಸರಸಾಗಿ ಸಾಗಿ
ಎರೆಯಂಗೆ ತೋಷವನು ಬೀರುತ್ತ ಸಾರಿ
ಪರಿಚರ್ಯೆಕೈಕೊಂಬ ಪರಿಯನ್ನು ಕಳೆದು
ನಿಷ್ಕಾಮ ಕರ್ಮವನು ಮನದಿಂದ ಮಾಳ್ಪ
ನಾ ಕ೦ದ ಜೀವಿಯನು ಭೂಖಂಡವೆಲ್ಲ
ನೂಕೆಂದು ನುಡಿಯುತಿದೆ ಯಾಕೆಂದು ಕಾಣೆ
ಹೊರೆಯನ್ನು ಹೇರಿರುವ ಪರಿಯನ್ನು ತಿಳಿದು
ಕೊರಗುತ್ತ ಕರಗದಲೆ ಮನವನ್ನು ಬಿಗಿದು
ಎರೆಯಂಗೆ ಎರೆಯಳಿಗೆ ಹರುಷವನು ತರುವ
ಕಷ್ಟದಿಂ ಕಾಯವನು ನೂಕುತ್ತ ನಡೆವ
ನಾ ಕಂಡ ಜೀವಿಯನ್ನು ಭೂಖಂಡವೆಲ್ಲ
ನೂಕೆಂದು ನುಡಿಯುತಿದೆ ಯಾಕಂದು ಕಾಣೆ
ಕಲ್ಲನ್ನು ಕಾಳನ್ನು ಕಟ್ಟಿಗೆಯ ಹೊರೆಯ
ಮಣ್ಣನ್ನು ಮುಂತಾಗಿ ಒಯ್ಯುತಿಹ ಪರಿಯ
ಕಾಸನ್ನು ಕಳೆಯದಲೆ ಸಾಕುತಿಹ ಬಗೆಯ
ಪಶುಜೀವ ಕೋಟಿಯಲಿ ಬಡಜನರ ಸಿರಿಯ
ನಾ ಕ೦ಡ ಜೀವಿಯನು ಭೂಖಂಡವೆಲ್ಲ
ನೂಕೆಂದು ನುಡಿಯುತಿದೆ ಯಾಕೆಂದು ಕಾಣೆ
ಗುಜರಾತ ನಾಡಿನಲಿ ಜನರಾಡಿಕೊಳುವ
“ರಾವಣನ ಗಡಿಯಾಳ” ಬಿರುದಾಗಿ ಮೆರೆವ
ಪ್ರತಿ ಮೂರು ತಾಸಿನಲಿ ಪರಮನನು ಸ್ಮರಿಸಿ
ಧರೆಗೊಂದು ಗಡಿಯಾಳ ತೆರನಾಗಿ ಮೆರೆವ
ನಾ ಕಂಡ ಜೀವಿಯನು ಭೂಖಂಡವೆಲ್ಲ
ನೂಕೆಂದು ನುಡಿಯುತಿದೆ ಯಾಕೆಂದು ಕಾಣೆ
ಸ್ವರವನ್ನು ಕರ್ಕಶದ ಕಣಿಯೆಂದು ಬಗೆವ
ಮರವೆಯನು ಬಡಪಾಯಿ ಮತಿಯಂದು ತಿಳಿವ
ಗುರುತರದ್ರೋಹವನ್ನೆಸಗುತ್ತ ನರರು
ಮನಬಂದ ತೆರದಲ್ಲಿ ದೂರುತ್ತಲಿರುವ
ನಾ ಕಂಡ ಜೀವಿಯನು ಭೂಖಂಡವೆಲ್ಲ
ನೂಕೆ೦ದು ನುಡಿಯುತಿದೆ ಯಾಕೆಂದು ಕಾಣೆ
ಆರಯ್ಯೆ ಹಾಲುಂಡಪರಿಯಿಂದ ತಿಳಿದು
ಮೀರಿರ್ದ ಬಾಲಗ್ರಹಂಗಳನು ತರಿದು
ಸೇರಿರ್ದ ಕಾಲನುರು ಸಂಕಲೆಯ ಕಡಿದು
ಸೆಟೆದಿರ್ದ ಶಿಶುವನ್ನು ಸುಖವಾಗಿ ನಗೆಪ
ನಾ ಕಂಡ ಜೀವಿಯನು ಭೂಖಂಡವೆಲ್ಲ
ನೂಕೆಂದು ನುಡಿಯುತಿದೆ ಯಾಕೆ೦ದು ಕಾಣೆ
ಕಿವಿನೆಟ್ಟಗಿಟ್ಟಿರುವ ಮುಖವನ್ನು ನೋಡಿ
ಬೆರಗಾಗಿ ಮನದಲ್ಲಿ ಮುದದಿಂದ ಕೂಡಿ
ಮೂಡಿರ್ದ ಬಾಳೆಗಳ ಗೊನೆಯಂತೆ ಕಾ೦ಬ
ತುಂಬಿರ್ದ ಸರಳತೆಯು ತುಳುಕುತ್ತಲಿರುವ
ನಾ ಕಂಡ ಜೀವಿಯನು ಭೂಖಂಡವೆಲ್ಲ
ನೂಕೆಂದು ನುಡಿಯುತಿದೆ ಯಾಕೆ೦ದು ಕಾಣೆ
೧೦
ಮಹಾತ್ಮಾ ಯೇಸುವನು ಹೊರೆಯಾಗಿಹೊತ್ತ
ಪಿರಿದಾದ ಸೈರಣೆಗೆ ನೆಲೆಯಾಗಿ ನಿಂತ
ಗಂಗಾತರಂಗಗಳ ತಟಗಳಲಿ ಮಿಂದು
ಕಂಗೊಳಿಪ ಹಿಮಗಿರಿಯ ದರಿಗಳಲಿ ನಿಂದು
ನಾ ಕಂಡ ಜೀವಿಯನು ಭೂಖಂಡವೆಲ್ಲ
ನೂಕೆಂದು ನುಡಿಯುತಿದೆ ಯಾಕೆಂದು ಕಾಣೆ
೧೧
ತಿಪ್ಪೆಯುಪ್ಪರಿಗೆಗಳ ಹೊಲಬನ್ನು ತಿಳಿದು
ಬಡವಂಗೆ ನೆರೆಕಾಮಧೇನುವಾಗಿರುವ
ನಿಷ್ಕಾಮ ಕರ್ಮವನು ಕಲಿಸುತಿಹ ಋಷಿಯ
ಸತ್ಕಾರ್ಯ ಮಹಿಮೆಯನು ಸಾರುತಿಹ ಸಿರಿಯ
ನಾ ಕಂಡ ಜೀವಿಯನ್ನು ಭೂಖಂಡವೆಲ್ಲ
ನೂಕೆಂದು ನುಡಿಯುತಿದೆ ಯಾಕೆಂದು ಕಾಣೆ
*****
Tagged:

Leave a Reply

Your email address will not be published. Required fields are marked *

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...