ಕಾಯುತ್ತಿದ್ದೇನೆ

ಅನಿಸಿಕೆಯ ಬೀಜ ಮರವಾಗಿ ಅಭಿವ್ಯಕ್ತಿ ಪಡೆಯುವುದನ್ನು
ಎಲ್ಲ ಗೋಲಿಗಳೂ ಸಟಸಟ ತಂತಮ್ಮ ಗುಳಿಗಳಲ್ಲಿ
ಸಲೀಸಾಗಿ ಬೀಳುವುದನ್ನು
ಎಲ್ಲ ಬಾಗಿಲುಗಳು ನನ್ನ ಟಕಟಕಾಟಕ್ಕೆ ಕೂಡಲೇ
ತೊರೆದುಕೊಂಡು ನನ್ನ ಸ್ವೀಕರಿಸುವುದನ್ನು
ಎಲ್ಲ ಕಲ್ಪತರುವಿನ ತಲೆಕಾಯಿಗಳಿಗೆ ಬಡಕೊಂಡಿರುವ
ಸಣ್ಣ ಹುಳುಕೊರೆವ ರೋಗ ವಾಸಿಯಾಗುವುದನ್ನು
ಎಲ್ಲಾ ಮೂಳೆ ಮುನುಗು ಹೊರಮಿನುಗಿ ಮೌನದ ಬಸಿರಿಂದ
ದನಿಯಾಗಿ ಘನೀಭವಿಸಿ ಘಂಟಾಘೋಷಗಳಾಗುವುದನ್ನು
ದಾರಿಯಿಲ್ಲದ ಬಯಲಾರಣ್ಯದಲ್ಲಿ ದಿಕ್ಕುತಪ್ಪಿದ ಮರಿವಕ್ಕಿಗಳು
ತಂತಮ್ಮ ತಾಯಗೂಡುಗಳ ಸೇರುವುದನ್ನು
ದಿನೇ ದಿನೇ ಬೆಳೆಯುತ್ತಿರುವ ಕುರುಕೋಟಿಯ
ಧೃತರಾಷ್ಟ್ರ ಸಂತಾನ ಬೀಜವು ಸುಟ್ಟುಹೋಗುವುದನ್ನು
ಹದ್ದು ಮೀರುವ ಮಂಗಬಾಲಗಳ ಕತ್ತರಿಸುವುದನ್ನು
ಜಿದ್ದುಗೇಡಿ ಕಲ್ಲೆದ್ದು ಕೂಗಿ ಕುಣಿವುದನ್ನು;
ನಿದ್ದೆ ಇಲ್ಲದೆ ಕಣ್ಬಿಡುವ ರಾತ್ರಿಗಳಲ್ಲಿ
ರತಿಗೀತೆಯು ಸೆಲೆಯೊಡೆದು ಉಕ್ಕುವುದನ್ನು
ತುಂಬಿದ ಕೊಡ ತುಳುಕುವುದನು ತೆರವೆಲ್ಲ ತುಂಬುವುದನ್ನು
ಕಾಣಲು ಕಾಯುತ್ತಿದ್ದೇನೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹುಟ್ಟು ಸಾವಿನ ಮಧ್ಯೆ
Next post ಲಿಂಗಮ್ಮನ ವಚನಗಳು – ೭೦

ಸಣ್ಣ ಕತೆ

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…

  • ಡಿಪೋದೊಳಗಣ ಕಿಚ್ಚು…

    ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

  • ತೊಳೆದ ಮುತ್ತು

    ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…

cheap jordans|wholesale air max|wholesale jordans|wholesale jewelry|wholesale jerseys