ಸೃಜನ

ಮೇಲೆ ಚಂದ್ರಾಮ
ಇಲ್ಲಿ ಚಿಗುರೆಲೆ ಬಳ್ಳಿ
ಅದರಲ್ಲಿ ಬಿಟ್ಟ ಅಮೃತಕಲಶ
ಮೇಲೊಂದು ಜೇನತೊಟ್ಟು
ಈ ತಂಬೂರಿ ಕುಂಬಳಕಾಯಿ
ಅದರಲ್ಲಿ ಹೃದಯ ಮೀಟಿ ಹಾಡುವ ಸೃಷ್ಟಿಗೀತೆ

ಈ ದೇಗುಲ
ಕಲೆಯುಸಿರಾಡುವ ಸ್ತಂಭಗಳು
ನವರಂಗದ ಮೇಲೆಕೆಳಗಿರಿಸಿದ
ಅರಳಿದ ಕಮಲ
ಇದರೊಂದು ರನ್ನ
ದ್ವಾರವ ಸಮೆದನೋ!
ಈ ರಸವಾಹಿನಿಯ
ಸೇತುಗಟ್ಟಿದ ಕಣ್ಣ ಕಂಡರಸಿ
ಚೆಲುವಿನೆಳೆಯೆಳೆಯ
ಗಂಟು ಕಟ್ಟಿದನೋ

ಅಥವಾ ಈ ಕಣ್ಣಿಂದ
ಈ ಕುಸುರಿದ್ವಾರದಿಂದ
ತನ್ನ ಸೃಜನವ ಪ್ರಾರಂಭಿಸಿ

ಒಂದೊಂದಾಗಿ ಅದರ ಸುತ್ತಮುತ್ತ,
ಮೇಲೆ ಕೆಳಗೆ ಸೇರಿಸಿದನೋ
ತನ್ನ ಸೃಷ್ಟಿಗೆ ತಾನೇ
ಹಿಗ್ಗಿ ಮಗುವಿನಂತೆ
ಚಪ್ಪಾಳೆ ತಟ್ಟಿ ಕುಣಿದಾಡಿ ಈ ಹಿಗ್ಗು
ಹೊಳೆಯಲೀಜಾಡಿದನೋ ತಿಳಿಯದು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಾಯಕರಿಲ್ಲದ ನಾಯಕ ಜನಾಂಗ
Next post ಲಿಂಗಮ್ಮನ ವಚನಗಳು – ೬೯

ಸಣ್ಣ ಕತೆ

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

  • ಜುಡಾಸ್

    "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

cheap jordans|wholesale air max|wholesale jordans|wholesale jewelry|wholesale jerseys