ಜೋಕಾಲಿ ಆಡೋಣ ಬರ್ರೆ

ಜೋಕಾಲಿ ಆಡೋಣ ಬರ್ರೆ
ಬೇಕಾದ ನಾರಿಯರೆಲ್ಲ
ಸಾಕಾಗುವತನಕನಾಡೋಣ ನಾವು ನೀವು
ಸಾಕಾದಮ್ಯಾಲೆ ಇಳಿಯೋಣ ||ಪ||

ಖೊಬ್ಬರಿ ತಂಬಿಟ್ಟು
ಇಬ್ಬರು ಉಡಿಯೊಳು ಕಟ್ಟಿ
ಹಬ್ಬಕೊಮ್ಮೆ ಹಾಲ ಹೊಯ್ಯೋಣ
ಸಾಕಾಗುತನಕನಾಡೋಣ ನಾವು ನೀವು
ಸಾಕಾದಮ್ಯಾಲೆ ಇಳಿಯೋಣ ||೧||

ಏಕ ನಿಷ್ಠೆಯಿಂದ
ಎಡಬಲ ಹಗ್ಗವ ಪಿಡಿದು
ನೆಟ್ಟಗ ನಿಂತು ಜೂರಿ ಬಿಡೋಣ
ಸಾಕಾಗುತನಕನಾಡೋಣ ನಾವು ನೀವು
ಸಾಕಾದಮ್ಯಾಲೆ ಇಳಿಯೋಣ ||೨||

ತುತ್ತನ್ನ ತುದಿಯಮ್ಯಾಲೆ
ಕಟ್ಟೇತ್ರಿ ಜೋಕಾಲಿ
ನಟ್ಟನಡುವೆ ನಿಂತು ಜೂರಿ ಬಿಡೋಣ
ಸಾಕಾಗುತನಕನಾಡೋಣ ನಾವು ನೀವು
ಸಾಕಾದಮ್ಯಾಲೆ ಇಳಿಯೋಣ ||೩||

ಹೊಸಧಿಯೊಳಗ ನಮ್ಮ
ಶಿಶುನಾಳಧೀಶನ
ಅಂತಃಕರಣವಿದ್ದ ಗುರುವಿನ ಕೂಡೋಣ
ಸಾಕಾಗುತನಕನಾಡೋಣ ನಾವು ನೀವು
ಸಾಕಾದಮ್ಯಾಲೆ ಇಳಿಯೋಣ ||೪||

*****

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಧ್ವಜ
Next post ಶ್ರೀಮಂತ ಬಡವರು

ಸಣ್ಣ ಕತೆ

  • ಸಂಬಂಧ

    ದೆಹಲಿಯಲ್ಲಿ ವಿಪರೀತ ಚಳಿ. ಆ ದಿನ ವಿಪರೀತ ಮಂಜು ಕೂಡಾ ಕವಿದಿತ್ತು. ದೆಹಲಿಗೆ ಬರುವ ವಿಮಾನಗಳೆಲ್ಲಾ ತಡವಾಗಿ ಬರುತ್ತಿದ್ದವು. ಸರಿಯಾಗಿ ಲ್ಯಾಂಡಿಂಗ್ ಮಾಡಲಾಗದೆ ಫೈಲೆಟ್‌ಗಳು ಒದ್ದಾಡುತ್ತಿದ್ದರು. ದೆಹಲಿಯಿಂದ… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…