Home / ಕವನ / ಕವಿತೆ / ಬಾರೇ ಬಾರೇ ನೀರೇ ಬಾರೇ

ಬಾರೇ ಬಾರೇ ನೀರೇ ಬಾರೇ

ಕಾದೇ ಕಾದೂ ಕಾದೇ ಕಾದೂ ಬೆಂಕಿಯೆ ಆಗೀನಿ
ಒಳಹೊರಗೆ ಹತ್ಕೊಂಡು ಉರಿಯಾಕ ಹತ್ತೆಯ್ತೆ ಹೇಗೋ ಸಾಗೀನಿ

ಬಾರೇ ಬಾರೇ ನೀರೇ ಬಾರೇ ಉರಿಯನು ನಂದಿಸು ಬಾ
ಮನೆ ಹೊತ್ತಿ ಉರಿದರೆ ನಿಲ್ಲಲುಬಹುದು ಮನದುರಿಯನಾರಿಸು ಬಾ

ಕರೆಯದೆ ಕೊರಗುತ ನರಕದಿ ಕೂಳೆಯುತ ಏಸೊಂದು ದಿನವಿರಲೀ
ಬಿಗುಮಾನ ಬಿಟ್ಟೀಗ ಕೈ ಚಾಚಿ ಕರೆಯುವೆ ಸಗ್ಗದೈಸಿರಿ ಬರಲೀ

ಒಂಟೀಽ ಒಂಟೀಽ ನನ್ನಲ್ಲೆ ಅಂಟೀಽ ಸನ್ನೇಸಿ ನಾನಲ್ಲ
ನಿನ್ನನ್ನ್ ಮುಟ್ಟಿದರೆ ಉರಿಯುವೆ ನಾನೆಂಬ ಮಡಿವಂತನೇನಲ್ಲ

ಹಾರುವ ಹಕ್ಕಿಯು ಹೊರಗಡೆ ಬರುತಿದೆ ಹಾರಲು ಪಥವಿಲ್ಲ
ಜೋಡಿಗೆ ನೀನೂ ಬಂದರೆ ಮುಗಿಲಿಗೆ ಹಾರಲು ಚಿಂತೆಯಿಲ್ಲ

ಹುಡುಕಿದೆ ಹುಡುಕಿದೆ ಅರಣ್ಯವೆಲ್ಲವ ನಿನ್ನಯ ಸುಳಿವಿಲ್ಲ
ಅಡಗಿದಿ ಎಲ್ಲೀ ಹುಡುಕಲಿನ್ನೆಲ್ಲಿಽ ಕರೆದರು ಬರಲಿಲ್ಲ

ಯುಗ ಯುಗ ಹುಡುಕೀನಿ ಹಗಲಿರುಳು ಹುಡಕೀನಿ ಎದ್ದಾಗ ನಿದ್ಯಾಗ
ಪ್ರಕೃತಿ ಪುರುಷರಂತೆ ಜೀವ ಭಾವರಂತೆ ವಿದ್ಯಾಗ ಬುಧ್ಯಾಗ

ಶಿಲ್ಪಾವ ಕಟದೀನಿ ನಿನ್ನೆಷ್ಟೊ ರೂಪಾವ ಬಣ್ಣೀಸಿ ಬರದೀನಿ
ಕವನದ ಹೂಮಾಲೆ ದಣಿಯದೆ ಕಟ್ಟೀನಿ ಮುಡಿಸಲು ಕರದೀನಿ

ನಾಮರ ನೀ ಬೇರು ನಾ ಹೂವು ನೀಕಂಪು ನಾಕೆಂಡ ನೀನೆಣ್ಣೆ
ನಾ ಭೂಮಿ ನೀ ಬಾನು ನಾ ಹಳ್ಳ ನೀ ನೀರು ನಾ ಬೆಳೆ ನೀ ಮಳೆ

ಹೀಗಿದೆ ಕಗ್ಗಂಟು ನನ್ನ ನಿನ್ನಯ ನಂಟು ಬಿಡಿಸಲು ಬಂದೀತೆ
ಹಸಿದಾಗ ಅನ್ನವ ಬಯಸುವ ಹಸಿವನು ತಡೆಯಲು ಬಂದೀತೆ

ಯೋಗದಾ ಮಾಧುರ್ಯ ವಿಯೋಗದಲ್ಲಿಯು ಹುಚ್ಚನ ಮಾಡುವುದು
ಸಂಯೋಗ ಸೌಭಾಗ್ಯ ಸೃಷ್ಟಿಯ ಒಳಹೊರಗೆ ಬೆಸೆದಂತೆ ಕಾಣುವುದು
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...