Home / ಕವನ / ಕವಿತೆ / ಬಾರೇ ಬಾರೇ ನೀರೇ ಬಾರೇ

ಬಾರೇ ಬಾರೇ ನೀರೇ ಬಾರೇ

ಕಾದೇ ಕಾದೂ ಕಾದೇ ಕಾದೂ ಬೆಂಕಿಯೆ ಆಗೀನಿ
ಒಳಹೊರಗೆ ಹತ್ಕೊಂಡು ಉರಿಯಾಕ ಹತ್ತೆಯ್ತೆ ಹೇಗೋ ಸಾಗೀನಿ

ಬಾರೇ ಬಾರೇ ನೀರೇ ಬಾರೇ ಉರಿಯನು ನಂದಿಸು ಬಾ
ಮನೆ ಹೊತ್ತಿ ಉರಿದರೆ ನಿಲ್ಲಲುಬಹುದು ಮನದುರಿಯನಾರಿಸು ಬಾ

ಕರೆಯದೆ ಕೊರಗುತ ನರಕದಿ ಕೂಳೆಯುತ ಏಸೊಂದು ದಿನವಿರಲೀ
ಬಿಗುಮಾನ ಬಿಟ್ಟೀಗ ಕೈ ಚಾಚಿ ಕರೆಯುವೆ ಸಗ್ಗದೈಸಿರಿ ಬರಲೀ

ಒಂಟೀಽ ಒಂಟೀಽ ನನ್ನಲ್ಲೆ ಅಂಟೀಽ ಸನ್ನೇಸಿ ನಾನಲ್ಲ
ನಿನ್ನನ್ನ್ ಮುಟ್ಟಿದರೆ ಉರಿಯುವೆ ನಾನೆಂಬ ಮಡಿವಂತನೇನಲ್ಲ

ಹಾರುವ ಹಕ್ಕಿಯು ಹೊರಗಡೆ ಬರುತಿದೆ ಹಾರಲು ಪಥವಿಲ್ಲ
ಜೋಡಿಗೆ ನೀನೂ ಬಂದರೆ ಮುಗಿಲಿಗೆ ಹಾರಲು ಚಿಂತೆಯಿಲ್ಲ

ಹುಡುಕಿದೆ ಹುಡುಕಿದೆ ಅರಣ್ಯವೆಲ್ಲವ ನಿನ್ನಯ ಸುಳಿವಿಲ್ಲ
ಅಡಗಿದಿ ಎಲ್ಲೀ ಹುಡುಕಲಿನ್ನೆಲ್ಲಿಽ ಕರೆದರು ಬರಲಿಲ್ಲ

ಯುಗ ಯುಗ ಹುಡುಕೀನಿ ಹಗಲಿರುಳು ಹುಡಕೀನಿ ಎದ್ದಾಗ ನಿದ್ಯಾಗ
ಪ್ರಕೃತಿ ಪುರುಷರಂತೆ ಜೀವ ಭಾವರಂತೆ ವಿದ್ಯಾಗ ಬುಧ್ಯಾಗ

ಶಿಲ್ಪಾವ ಕಟದೀನಿ ನಿನ್ನೆಷ್ಟೊ ರೂಪಾವ ಬಣ್ಣೀಸಿ ಬರದೀನಿ
ಕವನದ ಹೂಮಾಲೆ ದಣಿಯದೆ ಕಟ್ಟೀನಿ ಮುಡಿಸಲು ಕರದೀನಿ

ನಾಮರ ನೀ ಬೇರು ನಾ ಹೂವು ನೀಕಂಪು ನಾಕೆಂಡ ನೀನೆಣ್ಣೆ
ನಾ ಭೂಮಿ ನೀ ಬಾನು ನಾ ಹಳ್ಳ ನೀ ನೀರು ನಾ ಬೆಳೆ ನೀ ಮಳೆ

ಹೀಗಿದೆ ಕಗ್ಗಂಟು ನನ್ನ ನಿನ್ನಯ ನಂಟು ಬಿಡಿಸಲು ಬಂದೀತೆ
ಹಸಿದಾಗ ಅನ್ನವ ಬಯಸುವ ಹಸಿವನು ತಡೆಯಲು ಬಂದೀತೆ

ಯೋಗದಾ ಮಾಧುರ್ಯ ವಿಯೋಗದಲ್ಲಿಯು ಹುಚ್ಚನ ಮಾಡುವುದು
ಸಂಯೋಗ ಸೌಭಾಗ್ಯ ಸೃಷ್ಟಿಯ ಒಳಹೊರಗೆ ಬೆಸೆದಂತೆ ಕಾಣುವುದು
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...