Home / ಕವನ / ಕವಿತೆ / ಬಾರೇ ಬಾರೇ ನೀರೇ ಬಾರೇ

ಬಾರೇ ಬಾರೇ ನೀರೇ ಬಾರೇ

ಕಾದೇ ಕಾದೂ ಕಾದೇ ಕಾದೂ ಬೆಂಕಿಯೆ ಆಗೀನಿ
ಒಳಹೊರಗೆ ಹತ್ಕೊಂಡು ಉರಿಯಾಕ ಹತ್ತೆಯ್ತೆ ಹೇಗೋ ಸಾಗೀನಿ

ಬಾರೇ ಬಾರೇ ನೀರೇ ಬಾರೇ ಉರಿಯನು ನಂದಿಸು ಬಾ
ಮನೆ ಹೊತ್ತಿ ಉರಿದರೆ ನಿಲ್ಲಲುಬಹುದು ಮನದುರಿಯನಾರಿಸು ಬಾ

ಕರೆಯದೆ ಕೊರಗುತ ನರಕದಿ ಕೂಳೆಯುತ ಏಸೊಂದು ದಿನವಿರಲೀ
ಬಿಗುಮಾನ ಬಿಟ್ಟೀಗ ಕೈ ಚಾಚಿ ಕರೆಯುವೆ ಸಗ್ಗದೈಸಿರಿ ಬರಲೀ

ಒಂಟೀಽ ಒಂಟೀಽ ನನ್ನಲ್ಲೆ ಅಂಟೀಽ ಸನ್ನೇಸಿ ನಾನಲ್ಲ
ನಿನ್ನನ್ನ್ ಮುಟ್ಟಿದರೆ ಉರಿಯುವೆ ನಾನೆಂಬ ಮಡಿವಂತನೇನಲ್ಲ

ಹಾರುವ ಹಕ್ಕಿಯು ಹೊರಗಡೆ ಬರುತಿದೆ ಹಾರಲು ಪಥವಿಲ್ಲ
ಜೋಡಿಗೆ ನೀನೂ ಬಂದರೆ ಮುಗಿಲಿಗೆ ಹಾರಲು ಚಿಂತೆಯಿಲ್ಲ

ಹುಡುಕಿದೆ ಹುಡುಕಿದೆ ಅರಣ್ಯವೆಲ್ಲವ ನಿನ್ನಯ ಸುಳಿವಿಲ್ಲ
ಅಡಗಿದಿ ಎಲ್ಲೀ ಹುಡುಕಲಿನ್ನೆಲ್ಲಿಽ ಕರೆದರು ಬರಲಿಲ್ಲ

ಯುಗ ಯುಗ ಹುಡುಕೀನಿ ಹಗಲಿರುಳು ಹುಡಕೀನಿ ಎದ್ದಾಗ ನಿದ್ಯಾಗ
ಪ್ರಕೃತಿ ಪುರುಷರಂತೆ ಜೀವ ಭಾವರಂತೆ ವಿದ್ಯಾಗ ಬುಧ್ಯಾಗ

ಶಿಲ್ಪಾವ ಕಟದೀನಿ ನಿನ್ನೆಷ್ಟೊ ರೂಪಾವ ಬಣ್ಣೀಸಿ ಬರದೀನಿ
ಕವನದ ಹೂಮಾಲೆ ದಣಿಯದೆ ಕಟ್ಟೀನಿ ಮುಡಿಸಲು ಕರದೀನಿ

ನಾಮರ ನೀ ಬೇರು ನಾ ಹೂವು ನೀಕಂಪು ನಾಕೆಂಡ ನೀನೆಣ್ಣೆ
ನಾ ಭೂಮಿ ನೀ ಬಾನು ನಾ ಹಳ್ಳ ನೀ ನೀರು ನಾ ಬೆಳೆ ನೀ ಮಳೆ

ಹೀಗಿದೆ ಕಗ್ಗಂಟು ನನ್ನ ನಿನ್ನಯ ನಂಟು ಬಿಡಿಸಲು ಬಂದೀತೆ
ಹಸಿದಾಗ ಅನ್ನವ ಬಯಸುವ ಹಸಿವನು ತಡೆಯಲು ಬಂದೀತೆ

ಯೋಗದಾ ಮಾಧುರ್ಯ ವಿಯೋಗದಲ್ಲಿಯು ಹುಚ್ಚನ ಮಾಡುವುದು
ಸಂಯೋಗ ಸೌಭಾಗ್ಯ ಸೃಷ್ಟಿಯ ಒಳಹೊರಗೆ ಬೆಸೆದಂತೆ ಕಾಣುವುದು
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...