Home / ಕವನ / ಕವಿತೆ / ದುಡಿಮೆಯೆ ದೇವರು

ದುಡಿಮೆಯೆ ದೇವರು

ದುಡಿಮೆಯೆ ದೇವರು ದುಡೀ ದುಡೀ
ಅಕ್ಷರ ಬ್ರಹ್ಮನ ಪಡೀ ಪಡೀ ||ಪ||

ಭೂಮಿ ತಾಯಿಯು ದುಡಿತಾಳೆ
ಸೂರ್ಯ ಚಂದ್ರರು ದುಡಿತಾವೆ
ಗಾಳಿ ಬೀಸುತಾ ನೀರು ಹರಿಯುತಾ
ಬೆಂಕಿ ಉರಿಯುತಾ ದುಡಿತಾವೆ ||೧||

ದುಡಿಮೆಯಿಂದಲೇ ಕೋಟೆ ಕೊತ್ತಲ
ವೈಭವ ರಾಜ್ಯವು ಮೆರೆದಾವೆ
ಗುಡಿ ಗೋಪುರಗಳು ಮಠಮಾನ್ಯಗಳು
ದುಡಿಮೆಯಿಂದಲೇ ಬೆಳೆದಾವೆ ||೨||

ಕಾರು ಲಾರಿಗಳು ಓಡುವ ರಸ್ತೆಯು
ದುಡಿಮೆಯಿಂದಲೇ ಓಡುತಿವೆ
ಮಂತ್ರಿ ಮಹಾಜನರಾಳುವಂತಹ
ವಿಧಾನ ಭವನಗಳಾಗುತಿವೆ ||೩||

ಚಳಿ ಬಿಸಿಲೆನ್ನದೆ ದುಡಿಯುವ ರೈತನು
ದೇಶಕೆ ಅನ್ನವ ಬೆಳಿತಾನೆ
ಕಾರಖಾನೆಗಳ ಮನೆ ಅರಮನೆಗಳ
ಕಾರ್ಮಿಕ ಕಟ್ಟುತ ನಿಲಿಸ್ಯಾನೆ ||೪||

ಹಾಡು ಕಟ್ಟುವವು ಕಾವ್ಯ ಮೊಳೆಯುವುವು
ದುಡಿಮೆಯೆ ಬಾಳಿನ ಬಟ್ಟೆಯಲಿ
ಕಲೆಗಳರಳುವುವು ನಾಟ್ಯವಾಡುವುವು
ದುಡಿಮೆಯೆ ದಾರಿಯ ಕಟ್ಟೆಯಲಿ ||೫||

ವಿದ್ಯ ಬುದ್ದಿಗಳು ನೀತಿನೇಮಗಳು
ಚೆನ್ನುಡಿ ಚೆನ್ನಡೆ ದುಡಿಮೆಯಲೆ
ದುಡಿಯುವ ಜನಗಳೆ ನಾಡಿನ ಬುನಾದಿ
ವಿಜ್ಞಾಗಳಿಗು ಅದೇ ನೆಲೆ ||೬||

ದುಡಿಯುವ ಜನರನು ಹೀರುತ ಬಂದಿವೆ
ಒಡೆತನ ಮಾಡುವ ಜಿಗಣೆಗಳು
ಕೆಚ್ಚಲ ಹಾಲದು ಕರುವಿಗೆ ದಕ್ಕದೆ
ರಕ್ತವ ಕುಡಿಯುವ ಉಣ್ಣೆಗಳು ||೭||

ಅಕ್ಷರ ಬಲ್ಲವ ರಕ್ಕಸನಾದರೆ
ದುಡಿಯುವ ಬಡವಗೆ ಉಳಿವಿಲ್ಲ
ಓದುತ ಬರೆಯುತ ಎಲ್ಲವನರಿತರೆ
ದೋಚುವರ್ಯಾರು ಉಳಿಯಲ್ಲ ||೮||

ದುಡಿಮೆಯೆ ಬದುಕಿನ ಹಣತೆಗೆ ಎಣ್ಣೆ
ವಿದ್ಯೆಯು ಉರಿಯುವ ಬತ್ತಿ
ಎರಡೂ ಸೇರಲು ಕಾಂತಿಯು ಶಾಂತಿಯು
ದುಡಿವವ ದೇಶದ ಶಕ್ತಿ ||೯||

*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...