Home / ಕವನ / ಕವಿತೆ / ದುಡಿಮೆಯೆ ದೇವರು

ದುಡಿಮೆಯೆ ದೇವರು

ದುಡಿಮೆಯೆ ದೇವರು ದುಡೀ ದುಡೀ
ಅಕ್ಷರ ಬ್ರಹ್ಮನ ಪಡೀ ಪಡೀ ||ಪ||

ಭೂಮಿ ತಾಯಿಯು ದುಡಿತಾಳೆ
ಸೂರ್ಯ ಚಂದ್ರರು ದುಡಿತಾವೆ
ಗಾಳಿ ಬೀಸುತಾ ನೀರು ಹರಿಯುತಾ
ಬೆಂಕಿ ಉರಿಯುತಾ ದುಡಿತಾವೆ ||೧||

ದುಡಿಮೆಯಿಂದಲೇ ಕೋಟೆ ಕೊತ್ತಲ
ವೈಭವ ರಾಜ್ಯವು ಮೆರೆದಾವೆ
ಗುಡಿ ಗೋಪುರಗಳು ಮಠಮಾನ್ಯಗಳು
ದುಡಿಮೆಯಿಂದಲೇ ಬೆಳೆದಾವೆ ||೨||

ಕಾರು ಲಾರಿಗಳು ಓಡುವ ರಸ್ತೆಯು
ದುಡಿಮೆಯಿಂದಲೇ ಓಡುತಿವೆ
ಮಂತ್ರಿ ಮಹಾಜನರಾಳುವಂತಹ
ವಿಧಾನ ಭವನಗಳಾಗುತಿವೆ ||೩||

ಚಳಿ ಬಿಸಿಲೆನ್ನದೆ ದುಡಿಯುವ ರೈತನು
ದೇಶಕೆ ಅನ್ನವ ಬೆಳಿತಾನೆ
ಕಾರಖಾನೆಗಳ ಮನೆ ಅರಮನೆಗಳ
ಕಾರ್ಮಿಕ ಕಟ್ಟುತ ನಿಲಿಸ್ಯಾನೆ ||೪||

ಹಾಡು ಕಟ್ಟುವವು ಕಾವ್ಯ ಮೊಳೆಯುವುವು
ದುಡಿಮೆಯೆ ಬಾಳಿನ ಬಟ್ಟೆಯಲಿ
ಕಲೆಗಳರಳುವುವು ನಾಟ್ಯವಾಡುವುವು
ದುಡಿಮೆಯೆ ದಾರಿಯ ಕಟ್ಟೆಯಲಿ ||೫||

ವಿದ್ಯ ಬುದ್ದಿಗಳು ನೀತಿನೇಮಗಳು
ಚೆನ್ನುಡಿ ಚೆನ್ನಡೆ ದುಡಿಮೆಯಲೆ
ದುಡಿಯುವ ಜನಗಳೆ ನಾಡಿನ ಬುನಾದಿ
ವಿಜ್ಞಾಗಳಿಗು ಅದೇ ನೆಲೆ ||೬||

ದುಡಿಯುವ ಜನರನು ಹೀರುತ ಬಂದಿವೆ
ಒಡೆತನ ಮಾಡುವ ಜಿಗಣೆಗಳು
ಕೆಚ್ಚಲ ಹಾಲದು ಕರುವಿಗೆ ದಕ್ಕದೆ
ರಕ್ತವ ಕುಡಿಯುವ ಉಣ್ಣೆಗಳು ||೭||

ಅಕ್ಷರ ಬಲ್ಲವ ರಕ್ಕಸನಾದರೆ
ದುಡಿಯುವ ಬಡವಗೆ ಉಳಿವಿಲ್ಲ
ಓದುತ ಬರೆಯುತ ಎಲ್ಲವನರಿತರೆ
ದೋಚುವರ್ಯಾರು ಉಳಿಯಲ್ಲ ||೮||

ದುಡಿಮೆಯೆ ಬದುಕಿನ ಹಣತೆಗೆ ಎಣ್ಣೆ
ವಿದ್ಯೆಯು ಉರಿಯುವ ಬತ್ತಿ
ಎರಡೂ ಸೇರಲು ಕಾಂತಿಯು ಶಾಂತಿಯು
ದುಡಿವವ ದೇಶದ ಶಕ್ತಿ ||೯||

*****

Tagged:

Leave a Reply

Your email address will not be published. Required fields are marked *

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...