Home / ಕವನ / ಕವಿತೆ / ನಾಡ ಕಟ್ಟ ಬನ್ನಿ

ನಾಡ ಕಟ್ಟ ಬನ್ನಿ

ನಾಡ ಕಟ್ಟ ಬನ್ನಿ ನಾಡ ಗುಡಿಯ ಕಟ್ಟ ಬನ್ನಿ
ನಾಡ ಜನತೆ ಕರೆಯುತಿಹುದು ಸೇವೆಗಾಗಿ ಬನ್ನಿ ||ಪ||

ಮೇಲು ಕೀಳು ಭೇದ ತೊಡೆದು ಸಮಾನತೆಯು ನೆಲೆಸಲು
ನೂರು ಜಾತಿ ಪಂಥ ಬೇದಗಳನು ಮರೆತು ಬೆರೆಯಲು
ಭಾರತೀಯ ಧರ್ಮ ಸಾರುವಂಥ ನೀತಿ ನಡೆಸಲು
ನವೋದಯದ ಸರ್ವೋದಯ ಕರೆಯುತಿಹುದು ಬನ್ನಿ ||೧||

ಹೊಲ ಮನೆಗಳು ಇಲ್ಲದಂಥ ಬಡವರವನು ಪಡೆಯಲಿ
ಸಾಲ ಶೂಲವಿಳಿಸಿ ಅವರು ಬಿಡುಗಡೆಯನು ಪಡೆಯಲಿ
ಹಳ್ಳಿಗಳಲಿ ವಿವಿಧ ಕೆಲಸ ಮಾಡಿ ತಿಂಬ ದೇಸಿಗರಿಗೆ
ಅಲ್ಲೇ ಅಲ್ಲೇ ನೆರವು ನೀಡಿ ಎತ್ತಿರವರ ಸುಖದ ಗುರಿಗೆ ||೨||

ನೂರು ಮಂದಿ ಬೆಳೆದ ಫಲವನೊಬ್ಬಿಬ್ಬರು ತಿನ್ನದಂತೆ
ಸೇರುತಿರಲಿ ಅವರ ಅವರ ನ್ಯಾಯಭಾಗ ಗೆಮ್ಮೆಯಂತೆ
ಕುಳಿತು ತಿಂಬ ಮೈಗಳ್ಳರ ಹಿಡಿದು ದುಡಿಯ ಹಚ್ಚಿರಿ

ಲಂಚಕೋರರನ್ನು ಹಿಡಿದು ಮಣ್ಣು ತಿನ್ನ ಹಚ್ಚಿರಿ ||೩||

ಕಳ್ಳ ಮಾಲು ಕಳ್ಳ ನೋಟು ಹಿಡಿವ ಕೈಯ ಕಳೆಯಿರಿ
ಸುಳ್ಳು ದಾರಿಯಿಂದ ಪಡೆವ ನೀಚರನ್ನು ತುಳಿಯಿರಿ
ಪೊಳ್ಳು ರಾಜಕೀಯ ಮಾಡಿ ಹೊರೆವ ಬೊಜ್ಜ ಇಳಿಸಿರಿ
ಶ್ರದ್ಧೆಯಿಂದ ಕೆಲಸಗೈದವರನು ಹೊಗಳಿ ಬೆಳೆಸಿರಿ ||೪||

ಅಂಧ ಸಂಪ್ರದಾಯಗಳನು ಜ್ಞಾನಗಂಗೆ ತೊಳೆಯಲಿ
ಬಂಧಿಸಿರುವ ಜಡ ಬುದ್ದಿ ಮಸೆದು ಮಸಗಿ ಹೊಳೆಯಲಿ
ವಿಜ್ಞಾನವು ಪರರ ಹೆಜ್ಜೆ ತುಳಿಯದಂತೆ ಬೆಳಗಲಿ
ನಾಗರೀಕತೆ ಹಳ್ಳಿಗಳನು ತಿನ್ನದಂತೆ ಬೆಳೆಯಲಿ ||೫||

ಕಾಂಬ ಬನ್ನಿ ಕಟ್ಟ ಬನ್ನಿ ದುಡಿಮೆ ದೈವ ದೇಗುಲ
ನಾಡಕಟ್ಟ ಬನ್ನಿ ಕರೆಯುತಿಹುದು ತೆರೆದು ಬಾಗಿಲ ||೬||
******************

Tagged:

Leave a Reply

Your email address will not be published. Required fields are marked *

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...