ನಾಡ ಕಟ್ಟ ಬನ್ನಿ

ನಾಡ ಕಟ್ಟ ಬನ್ನಿ ನಾಡ ಗುಡಿಯ ಕಟ್ಟ ಬನ್ನಿ
ನಾಡ ಜನತೆ ಕರೆಯುತಿಹುದು ಸೇವೆಗಾಗಿ ಬನ್ನಿ ||ಪ||

ಮೇಲು ಕೀಳು ಭೇದ ತೊಡೆದು ಸಮಾನತೆಯು ನೆಲೆಸಲು
ನೂರು ಜಾತಿ ಪಂಥ ಬೇದಗಳನು ಮರೆತು ಬೆರೆಯಲು
ಭಾರತೀಯ ಧರ್ಮ ಸಾರುವಂಥ ನೀತಿ ನಡೆಸಲು
ನವೋದಯದ ಸರ್ವೋದಯ ಕರೆಯುತಿಹುದು ಬನ್ನಿ ||೧||

ಹೊಲ ಮನೆಗಳು ಇಲ್ಲದಂಥ ಬಡವರವನು ಪಡೆಯಲಿ
ಸಾಲ ಶೂಲವಿಳಿಸಿ ಅವರು ಬಿಡುಗಡೆಯನು ಪಡೆಯಲಿ
ಹಳ್ಳಿಗಳಲಿ ವಿವಿಧ ಕೆಲಸ ಮಾಡಿ ತಿಂಬ ದೇಸಿಗರಿಗೆ
ಅಲ್ಲೇ ಅಲ್ಲೇ ನೆರವು ನೀಡಿ ಎತ್ತಿರವರ ಸುಖದ ಗುರಿಗೆ ||೨||

ನೂರು ಮಂದಿ ಬೆಳೆದ ಫಲವನೊಬ್ಬಿಬ್ಬರು ತಿನ್ನದಂತೆ
ಸೇರುತಿರಲಿ ಅವರ ಅವರ ನ್ಯಾಯಭಾಗ ಗೆಮ್ಮೆಯಂತೆ
ಕುಳಿತು ತಿಂಬ ಮೈಗಳ್ಳರ ಹಿಡಿದು ದುಡಿಯ ಹಚ್ಚಿರಿ

ಲಂಚಕೋರರನ್ನು ಹಿಡಿದು ಮಣ್ಣು ತಿನ್ನ ಹಚ್ಚಿರಿ ||೩||

ಕಳ್ಳ ಮಾಲು ಕಳ್ಳ ನೋಟು ಹಿಡಿವ ಕೈಯ ಕಳೆಯಿರಿ
ಸುಳ್ಳು ದಾರಿಯಿಂದ ಪಡೆವ ನೀಚರನ್ನು ತುಳಿಯಿರಿ
ಪೊಳ್ಳು ರಾಜಕೀಯ ಮಾಡಿ ಹೊರೆವ ಬೊಜ್ಜ ಇಳಿಸಿರಿ
ಶ್ರದ್ಧೆಯಿಂದ ಕೆಲಸಗೈದವರನು ಹೊಗಳಿ ಬೆಳೆಸಿರಿ ||೪||

ಅಂಧ ಸಂಪ್ರದಾಯಗಳನು ಜ್ಞಾನಗಂಗೆ ತೊಳೆಯಲಿ
ಬಂಧಿಸಿರುವ ಜಡ ಬುದ್ದಿ ಮಸೆದು ಮಸಗಿ ಹೊಳೆಯಲಿ
ವಿಜ್ಞಾನವು ಪರರ ಹೆಜ್ಜೆ ತುಳಿಯದಂತೆ ಬೆಳಗಲಿ
ನಾಗರೀಕತೆ ಹಳ್ಳಿಗಳನು ತಿನ್ನದಂತೆ ಬೆಳೆಯಲಿ ||೫||

ಕಾಂಬ ಬನ್ನಿ ಕಟ್ಟ ಬನ್ನಿ ದುಡಿಮೆ ದೈವ ದೇಗುಲ
ನಾಡಕಟ್ಟ ಬನ್ನಿ ಕರೆಯುತಿಹುದು ತೆರೆದು ಬಾಗಿಲ ||೬||
******************

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮರುಭೂಮಿಗಳು
Next post ಥ್ರೀ-ಪಿನ್-ಪ್ಲಗ್ಗಿನ ಶಾಕ್

ಸಣ್ಣ ಕತೆ

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

  • ದಾರಿ ಯಾವುದಯ್ಯಾ?

    ಮೂವತೈದು ವರ್‍ಷಗಳ ನಂತರ ಅಮಲ ನಿನ್ನೂರಿಗೆ ಬರುತ್ತಿದ್ದೇನೆ ಅಂತ ಫೋನ ಮಾಡಿದಾಗ ಮೃಣಾಲಿನಿಗೆ ಆಶ್ಚರ್‍ಯ ಮತ್ತು ಆತಂಕ ಕಾಡಿದವು. ಬರೋಬ್ಬರಿ ಮೂವತ್ತೈದು ವರ್ಷಗಳ ಹಿಂದೆ ವಿಶ್ವವಿದ್ಯಾಲಯದ ಕ್ಯಾಂಪಸ್… Read more…

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

  • ಕೇರೀಜಂ…

    ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…