ನಾಡ ಕಟ್ಟ ಬನ್ನಿ

ನಾಡ ಕಟ್ಟ ಬನ್ನಿ ನಾಡ ಗುಡಿಯ ಕಟ್ಟ ಬನ್ನಿ
ನಾಡ ಜನತೆ ಕರೆಯುತಿಹುದು ಸೇವೆಗಾಗಿ ಬನ್ನಿ ||ಪ||

ಮೇಲು ಕೀಳು ಭೇದ ತೊಡೆದು ಸಮಾನತೆಯು ನೆಲೆಸಲು
ನೂರು ಜಾತಿ ಪಂಥ ಬೇದಗಳನು ಮರೆತು ಬೆರೆಯಲು
ಭಾರತೀಯ ಧರ್ಮ ಸಾರುವಂಥ ನೀತಿ ನಡೆಸಲು
ನವೋದಯದ ಸರ್ವೋದಯ ಕರೆಯುತಿಹುದು ಬನ್ನಿ ||೧||

ಹೊಲ ಮನೆಗಳು ಇಲ್ಲದಂಥ ಬಡವರವನು ಪಡೆಯಲಿ
ಸಾಲ ಶೂಲವಿಳಿಸಿ ಅವರು ಬಿಡುಗಡೆಯನು ಪಡೆಯಲಿ
ಹಳ್ಳಿಗಳಲಿ ವಿವಿಧ ಕೆಲಸ ಮಾಡಿ ತಿಂಬ ದೇಸಿಗರಿಗೆ
ಅಲ್ಲೇ ಅಲ್ಲೇ ನೆರವು ನೀಡಿ ಎತ್ತಿರವರ ಸುಖದ ಗುರಿಗೆ ||೨||

ನೂರು ಮಂದಿ ಬೆಳೆದ ಫಲವನೊಬ್ಬಿಬ್ಬರು ತಿನ್ನದಂತೆ
ಸೇರುತಿರಲಿ ಅವರ ಅವರ ನ್ಯಾಯಭಾಗ ಗೆಮ್ಮೆಯಂತೆ
ಕುಳಿತು ತಿಂಬ ಮೈಗಳ್ಳರ ಹಿಡಿದು ದುಡಿಯ ಹಚ್ಚಿರಿ

ಲಂಚಕೋರರನ್ನು ಹಿಡಿದು ಮಣ್ಣು ತಿನ್ನ ಹಚ್ಚಿರಿ ||೩||

ಕಳ್ಳ ಮಾಲು ಕಳ್ಳ ನೋಟು ಹಿಡಿವ ಕೈಯ ಕಳೆಯಿರಿ
ಸುಳ್ಳು ದಾರಿಯಿಂದ ಪಡೆವ ನೀಚರನ್ನು ತುಳಿಯಿರಿ
ಪೊಳ್ಳು ರಾಜಕೀಯ ಮಾಡಿ ಹೊರೆವ ಬೊಜ್ಜ ಇಳಿಸಿರಿ
ಶ್ರದ್ಧೆಯಿಂದ ಕೆಲಸಗೈದವರನು ಹೊಗಳಿ ಬೆಳೆಸಿರಿ ||೪||

ಅಂಧ ಸಂಪ್ರದಾಯಗಳನು ಜ್ಞಾನಗಂಗೆ ತೊಳೆಯಲಿ
ಬಂಧಿಸಿರುವ ಜಡ ಬುದ್ದಿ ಮಸೆದು ಮಸಗಿ ಹೊಳೆಯಲಿ
ವಿಜ್ಞಾನವು ಪರರ ಹೆಜ್ಜೆ ತುಳಿಯದಂತೆ ಬೆಳಗಲಿ
ನಾಗರೀಕತೆ ಹಳ್ಳಿಗಳನು ತಿನ್ನದಂತೆ ಬೆಳೆಯಲಿ ||೫||

ಕಾಂಬ ಬನ್ನಿ ಕಟ್ಟ ಬನ್ನಿ ದುಡಿಮೆ ದೈವ ದೇಗುಲ
ನಾಡಕಟ್ಟ ಬನ್ನಿ ಕರೆಯುತಿಹುದು ತೆರೆದು ಬಾಗಿಲ ||೬||
******************

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮರುಭೂಮಿಗಳು
Next post ಥ್ರೀ-ಪಿನ್-ಪ್ಲಗ್ಗಿನ ಶಾಕ್

ಸಣ್ಣ ಕತೆ

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…

  • ಮತ್ತೆ ಬಂದ ವಸಂತ

    ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

cheap jordans|wholesale air max|wholesale jordans|wholesale jewelry|wholesale jerseys