Home / ಕವನ / ಕವಿತೆ / ಹೋರಾಟಕೆ

ಹೋರಾಟಕೆ

ಏಳಿ ಏಳಿ ಗೆಳೆಯರೇ ಏಳಿರಿ ಹೋರಾಟಕೆ
ತಾಳಿ ಬಾಳು ಎನುತ ಕೊಳೆತು ಹೋದೆವಲ್ಲ ಹಿಂದಕೆ ||ಪ||

ಗುಬ್ಬಿ ಪಾರಿವಾಳಗಳನು ಹದ್ದಿನಿಂದ ಉಳಿಸಲು
ಜಿಂಕೆ ಮೊಲಗಳನ್ನು ವ್ಯಾಘ್ರ ಬಾಯಿಯಿಂದ ಉಳಿಸಲು
ಮುರುಕು ಗುಡಿಸಲಲ್ಲಿ ದೀಪ ಮಿಣುಕು ಕುಟುಕು ಜೀವಕೆ
ಕಣ್ಣ ನೀರ ತೊಡೆದು ಎಣ್ಣೆ ಹೊಯ್ದು ಜ್ವಾಲೆ ಉರಿಸಲು ||೧||

ಹರಕು ತೇಪೆ ಬಟ್ಟೆಗಳಿಗೆ ರಕ್ಷೆ ಕವಚ ಕೊಡಲಿಕೆ
ಒಡಕು ಗಡಿಗೆ ಗಂಜಿಯಗಳ ಅಕ್ಷಯಾನ್ನ ಮಾಡಲಿಕೆ
ಎಲುಬು ಗೂಡು ಸುಕ್ಕು ಚರ್ಮಗಳಲಿ ಶಕ್ತಿ ತುಂಬಲು
ಮಾಂಸ ಭಕ್ಷಕಾಸುರರನು ಮಸಣ ಮನೆಗೆ ನೂಕಲು ||೨||

ಆಕಳಂತೆ ಮೇಕೆಯಂತೆ ಹುಲಿಯು ತೋಳ ಮೆರೆದಿವೆ
ಮೊಲಗಳನ್ನು ಕಚ್ಚಿತಿಂಬ ಹದ್ದುಗದ್ದುಗೇರಿವೆ
ಮತ ಧರ್ಮದ ಮತ್ತಿನಲ್ಲಿ ಯುಗಯುಗಗಳೆ ಕಳೆದಿವೆ
ಕೊಳೆತ ಬಾವಿ ಹಳಸುನಾತ ಕುಡಿಯುತ ಕಾಲೆಳೆದಿವೆ ||೩||

ನಾಮ ಪಟ್ಟಿದಾರ ಜುಟ್ಟುಗಳನು ಒಗೆದು ಬನ್ನಿರೊ
ಕಾವಿ ಬಟ್ಟೆ ಗೂಗೆಗಳನು ದುಡಿವ ಹೊಲಕೆ ತನ್ನಿರೊ
ಪ್ರಜರ ರಾಜರಾಗಿ ಮೆರೆವ ಹದ್ದು ತೋಳ ಹುಲಿಗಳ
ಬಣ್ಣ ಬಯಲಿಗೆಳೆದು ಹರಕು ಗುಡಿಸಲುಗಳಿಗೆಳೆಯಿರೊ ||೪||

ಗಿಳಿಪಾಠದ ಓದು ಓದಿ ಕೂಚು ಭಟ್ಟರಾದೆವೂ
ಕಾಗದ ಕೈಯಲ್ಲಿ ಹಿಡಿದು ಅಲೆವ ತಿರುಕರಾದೆವೂ
ಕುರ್ಚಿಕಾಲು ಹಣದ ಪಾದ ಹಿಡಿದು ಹೊಟ್ಟೆ ಹೊರೆದೆವೊ
ಗಟ್ಟಿಯಾಗಿ ನಗಲು ಬರದೆ ಬೆದರುಗೊಂಬೆಯಾದೆವೊ ||೫||

ಧಮನಿಗಳಲಿ ಉಚ್ಚೆ ನೀರು ಹರಿವರೆಲ್ಲ ಬಿದ್ದಿರಿ
ಕೆಂಪುರಕ್ತ ನಿಮಗಿದ್ದರೆ ಕ್ರಾಂತಿ ಮಾಡಲೆದ್ದಿರಿ
ಕುಷ್ಠರೋಗದಂಥ ಕೊಳೆತ ಪರಂಪರೆಯ ಒದೆಯಿರಿ
ಸಾಕು ಸಾಕು ಹಣದ ಬದುಕು ಹೋರಾಟಕೆ ಕುದಿಯಿರಿ ||೬||
**********************
೧೧.೧೧.೮೬

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...