Home / ಕವನ / ಕವಿತೆ / ಹೋರಾಟಕೆ

ಹೋರಾಟಕೆ

ಏಳಿ ಏಳಿ ಗೆಳೆಯರೇ ಏಳಿರಿ ಹೋರಾಟಕೆ
ತಾಳಿ ಬಾಳು ಎನುತ ಕೊಳೆತು ಹೋದೆವಲ್ಲ ಹಿಂದಕೆ ||ಪ||

ಗುಬ್ಬಿ ಪಾರಿವಾಳಗಳನು ಹದ್ದಿನಿಂದ ಉಳಿಸಲು
ಜಿಂಕೆ ಮೊಲಗಳನ್ನು ವ್ಯಾಘ್ರ ಬಾಯಿಯಿಂದ ಉಳಿಸಲು
ಮುರುಕು ಗುಡಿಸಲಲ್ಲಿ ದೀಪ ಮಿಣುಕು ಕುಟುಕು ಜೀವಕೆ
ಕಣ್ಣ ನೀರ ತೊಡೆದು ಎಣ್ಣೆ ಹೊಯ್ದು ಜ್ವಾಲೆ ಉರಿಸಲು ||೧||

ಹರಕು ತೇಪೆ ಬಟ್ಟೆಗಳಿಗೆ ರಕ್ಷೆ ಕವಚ ಕೊಡಲಿಕೆ
ಒಡಕು ಗಡಿಗೆ ಗಂಜಿಯಗಳ ಅಕ್ಷಯಾನ್ನ ಮಾಡಲಿಕೆ
ಎಲುಬು ಗೂಡು ಸುಕ್ಕು ಚರ್ಮಗಳಲಿ ಶಕ್ತಿ ತುಂಬಲು
ಮಾಂಸ ಭಕ್ಷಕಾಸುರರನು ಮಸಣ ಮನೆಗೆ ನೂಕಲು ||೨||

ಆಕಳಂತೆ ಮೇಕೆಯಂತೆ ಹುಲಿಯು ತೋಳ ಮೆರೆದಿವೆ
ಮೊಲಗಳನ್ನು ಕಚ್ಚಿತಿಂಬ ಹದ್ದುಗದ್ದುಗೇರಿವೆ
ಮತ ಧರ್ಮದ ಮತ್ತಿನಲ್ಲಿ ಯುಗಯುಗಗಳೆ ಕಳೆದಿವೆ
ಕೊಳೆತ ಬಾವಿ ಹಳಸುನಾತ ಕುಡಿಯುತ ಕಾಲೆಳೆದಿವೆ ||೩||

ನಾಮ ಪಟ್ಟಿದಾರ ಜುಟ್ಟುಗಳನು ಒಗೆದು ಬನ್ನಿರೊ
ಕಾವಿ ಬಟ್ಟೆ ಗೂಗೆಗಳನು ದುಡಿವ ಹೊಲಕೆ ತನ್ನಿರೊ
ಪ್ರಜರ ರಾಜರಾಗಿ ಮೆರೆವ ಹದ್ದು ತೋಳ ಹುಲಿಗಳ
ಬಣ್ಣ ಬಯಲಿಗೆಳೆದು ಹರಕು ಗುಡಿಸಲುಗಳಿಗೆಳೆಯಿರೊ ||೪||

ಗಿಳಿಪಾಠದ ಓದು ಓದಿ ಕೂಚು ಭಟ್ಟರಾದೆವೂ
ಕಾಗದ ಕೈಯಲ್ಲಿ ಹಿಡಿದು ಅಲೆವ ತಿರುಕರಾದೆವೂ
ಕುರ್ಚಿಕಾಲು ಹಣದ ಪಾದ ಹಿಡಿದು ಹೊಟ್ಟೆ ಹೊರೆದೆವೊ
ಗಟ್ಟಿಯಾಗಿ ನಗಲು ಬರದೆ ಬೆದರುಗೊಂಬೆಯಾದೆವೊ ||೫||

ಧಮನಿಗಳಲಿ ಉಚ್ಚೆ ನೀರು ಹರಿವರೆಲ್ಲ ಬಿದ್ದಿರಿ
ಕೆಂಪುರಕ್ತ ನಿಮಗಿದ್ದರೆ ಕ್ರಾಂತಿ ಮಾಡಲೆದ್ದಿರಿ
ಕುಷ್ಠರೋಗದಂಥ ಕೊಳೆತ ಪರಂಪರೆಯ ಒದೆಯಿರಿ
ಸಾಕು ಸಾಕು ಹಣದ ಬದುಕು ಹೋರಾಟಕೆ ಕುದಿಯಿರಿ ||೬||
**********************
೧೧.೧೧.೮೬

Tagged:

Leave a Reply

Your email address will not be published. Required fields are marked *

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಕೀಲಿಕರಣ: ಎಂ.ಎನ್.ಎಸ್‌. ರಾವ್