ಬಯ್ಯುವಿ ಯಾಕೆ

ಮಣ್ಣು ಮಣ್ಣೆಂದು ಹಳಿದರೆ ಬಂತೆ
ಎಲ್ಲಿಂದ ಮರ ಹುಟ್ಟಿ ಬೆಳೆಯಿತಯ್ಯಾ
ಸಾವು ಸಾವೆಂದು ಅಂಜೀಕೆ ಯೇಕೆ
ಜೀವವು ಹುಟ್ಟಿದೆ ಸಾವಿನಿಂದಯ್ಯ ||

ನಿದ್ದೆ ಮಬ್ಬಂತಾ ಗೊಣಗುವಿಯಾಕೆ
ನಿದ್ದೇನೆ ಇಲ್ದಂಥ ಎಚ್ಚರೆಂತು
ದೌರ್ಬಲ್ಯ ದೌರ್ಬಲ್ಯ ಎಂದೇಕೆ ಕೊರಗುವಿ
ದೇವರ ರಾಜ್ಯವೆ ದುರ್ಬಲರದ್ದು ||

ಸುಡುಗಾಡು ಕಾಡೆಂದು ಬಯ್ಯುವಿಯಾಕೆ
ಸುಡದೆಯ ಸಂಸ್ಕಾರ ಹುಟ್ಟುವುದೇ
ಕತ್ತಲು ಕತ್ತಲು ಅದರಲ್ಲಿ ಭಯ ಯಾಕೆ
ಬೆಳಕಿನ ಗರ್ಭವು ಕತ್ತಲಿನದೇ ||

ಗಲಭೆ ಗೊಂದಲ ಕಂಡು ಮೂಗು ಮುರಿಯುವಿಯಾಕೆ
ಸುಲಭವೆ ಶಾಂತಿಯು ಗಲಭೆಯಿಲ್ದೆ
ಕಾಯಿ ಕಾಯೆಂದು ಬಾಯ್ ಬಿಡುವಿಯಾಕೆ
ಕಾಯದೆ ಹಣ್ಣಾಗಿ ಬೀಳೋದ್ಹೆಂಗೆ ||

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಡಾ|| ಅಂಬೇಡ್ಕರ್ ಆಶಯ ಅರಳುವ ಬಗೆ ಹೇಗೆ?
Next post ದ್ರವ್ಯದ ಬಡತನ

ಸಣ್ಣ ಕತೆ

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

  • ಏಡಿರಾಜ

    ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

cheap jordans|wholesale air max|wholesale jordans|wholesale jewelry|wholesale jerseys