Home / ಲೇಖನ / ಇತರೆ / ಡಾ|| ಅಂಬೇಡ್ಕರ್ ಆಶಯ ಅರಳುವ ಬಗೆ ಹೇಗೆ?

ಡಾ|| ಅಂಬೇಡ್ಕರ್ ಆಶಯ ಅರಳುವ ಬಗೆ ಹೇಗೆ?

ಡಾ” ಅಂಬೇಡ್ಕರ್ ಜನಿಸಿ ಇಂದಿಗೆ ನೂರಾ ಒಂಭತ್ತು ವರ್ಷಗಳು. ಅವರ ಕೊಡುಗೆ ಸ್ಮರಣೀಯವಾದುದು. ಸಮಾನತೆ, ಸರ್ವೋದಯ, ಬ್ರಾತೃತ್ವ ಅವರ ಜೀವನ ಸಂದೇಶಗಳು. ಅವರದು ಬೆಂಕಿಯಲ್ಲಿ ಅರಳಿದ ಜೀವ. ಅನುಭವಸಿದ ನೋವು ಅಪಾರ. ತಿರಸ್ಕರಿಸಿದವರನ್ನು ಪುರಸ್ಕರಿಸಿ, ಬೆಂದು ಬಳಲಿದವರಿಗೆ ಬೆಳಕಾಗಿ ನಿಂದವರು. ಅಂತಹ ಮಹಾನುಭಾವರನ್ನು ಈಗ ಒಂದು ವರ್ಗ ಕಿತ್ತು ತಿನ್ನುತ್ತಿದ್ದರೆ ಮತ್ತೊಂದು ವರ್ಗ ಶವಪರೀಕ್ಷೆಗೆ ತೊಡಗಿರುವುದು ಇತಿಹಾಸದ ದುರಂತ.

ಭಾರತೀಯ ಮನಸ್ಸು ಒಂದು ವಿಚಿತ್ರ ರೀತಿಯದು. ಮೇಲೆ ಸೌಮ್ಯವಾಗಿ ಕಂಡರೂ ಅಂತರಂಗದಲ್ಲಿ ಕ್ರೌರ್ಯವನ್ನು ಹಿಡಿದಿಟ್ಟುಕೊಂಡಿದೆ. ಜಗತ್ತಿಗೆ ಬಂದ ಧಾರ್ಶನಿಕರ,ಮಹಾನ್ ನಾಯಕರ, ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿದವರ ಗತಿಯೇ ಡಾ|| ಅಂಬೇಡ್ಕರ್ ಅವರಿಗೂ ಸಂದಿದೆ. ಇದು ಮನುಕುಲದ ವ್ಯಂಗ್ಯ

ಜಾತಿ ಈ ದೇಶದ ದೊಡ್ಡ ಜಾಡ್ಯ. ಈ ದೇಶದ ರಾಜಕೀಯ ಅಂಬೇಡ್ಕರ್, ಜಗಜೀವನರಾಂ ಅವರನ್ನು ಆಯಾ ಜಾತಿಯ ನಾಯಕರನ್ನಾಗಿಸಿ ತನ್ನ ಬೇಳೆ ಬೇಯಿಸಿಕೊಳ್ಳುತ್ತಿದೆ..ಕಾಂಗ್ರೆಸ್ ಅಂಬೇಡ್ಕರ್ ಅವರನ್ನು ಹರಾಜು ಹಾಕಿದರೆ ಬಿಜೆಪಿ ಅವರ ಶವಪರೀಕ್ಷೆಗೆ ಹೊರಟಿದೆ.

‘ಜಾತಿ ಹೀನನ ಮನೆಯ ಜ್ಯೋತಿ ತಾ ಹೀನವೆ’ ಎಂದ ಸರ್ವಜ್ಞನ ನುಡಿಬೆಳಕು ಭಾರತೀಯರ ಹೃದಯದಾಳಕ್ಕೆ ಇಳಿಯಲಿಲ್ಲ. ಕೆಳಜಾತಿ ಎಂಬ ಒಂದೇ ಕಾರಣಕ್ಕೆ ಅಂಬೇಡ್ಕರ್ ಅವರ ವಿದ್ವತ್ತನ್ನು ಕಡೆಗಣಿಸಲಾಯ್ತು. ಅವರ ಪ್ರತಿಭೆಯನ್ನು ಗುರುತಿಸಿ ಡಾಕ್ಟರೇಟ್ ನೀಡಿ ಗೌರವಿಸಿದವರು ಅಮೇರಿಕಾದವರು. ಭಾರತದ ಯಾವ ವಿಶ್ವವಿದ್ಯಾಲಯಗಳೂ ಅವರಿಗೆ ಗೌರವ ಡಾಕ್ಟರೇಟ್ ಅನ್ನು ನೀಡಲಿಲ್ಲ. ಅವರು ಬದುಕಿದ್ದಾಗ ಅಪಮಾನದ ಅಂಚಿಗೆ ತಳ್ಳಿದರು. ನಗುನಗುತ್ತಲೇ ನಾಡಿ ಆಡದಂತೆ ಮಾಡಿದರು.

ಹಿಂದೂ ಕೋಡ್ ಬಿಲ್ ಅವರ ಅಂತರಂಗದ ಹಿರಿದಾಸೆ. ಪಟ್ಟಭದ್ರ ಹಿತಾಸಕ್ತಿಗಳ ಒಳಸಂಚಿನಿಂದ ನೆಹರೂ ನೇತೃತ್ವದಲ್ಲಿ ಅದನ್ನು ತಿರಸ್ಕರಿಸಿ ಅವರ ಹೃದಯವನ್ನು ಈಟಿಯಿಂದ ಇರಿಯಲಾಯ್ತು. ಗಂಧದ ಮಾತನಾಡುತ್ತಲೇ ಒಳಗೊಳಗೆ ಮೆಣಸಿನ ಹೊಗೆ ಹಾಕಿ ಹಿಂದೂ ಧರ್ಮದಿಂದ ಬೌದ್ಧ ಧರ್ಮಕ್ಕೆ ತಳ್ಳಲಾಯ್ತು. ಈಗ ರಾಜಕೀಯ ಪಕ್ಷಗಳು ಮಾಡುತ್ತಿರುವ ಅವರ ಗುಣಗಾನ ಒಂದು ಮೋಸ, ಆತ್ಮವಂಚನೆಯದು. ಸರ್ಕಾರ ಅಂಬೇಡ್ಕರ್ ಆವರ ಜನ್ಮದಿನಾಚರಣೆ ಮಾಡುತ್ತಿರುವುದು ಹರಿಜನರ ಅನುಕಂಪಕ್ಕಾಗಿ.

ಅಂಬೇಡ್ಕರ್ ಅವರದು ನಿರಂತರ ಹೋರಾಟ. ಸ್ವಪ್ನ ನಿಲುವನ್ನು ಹೊಂದಿದ್ದ ಅವರು ಪ್ರತ್ಯೇಕ ದಲಿತರಾಜ್ಯಕ್ಕಾಗಿ ಒತ್ತಾಯಿಸಿದರು. ಕಾರಣ ಈ ದೇಶದ ಜಾತಿಯ ಕ್ರೌರ್ಯದ ಆಳ, ಅಗಲ, ವಿಸ್ತಾರಗಳನ್ನು ಅವರು ಬಲ್ಲವರಾಗಿದ್ದರು. ಅವರ ಭೇಡಿಕೆ ಈಡೇರಲಿಲ್ಲ. ದಲಿತರಿಗೆ ಎರಡು ಓಟಿನ ಹಕ್ಕಿಗಾಗಿ ಪ್ರತಿಪಾದಿಸಿದರು. ಅದೂ ಈಡೇರಲಿಲ್ಲ. ಕಡೆಗೆ ಮೀಸಲಾತಿಯನ್ನು ಸಂವಿಧಾನದಲ್ಲಿ ಅಳವಡಿಸುವಲ್ಲಿ ಯಶಸ್ವಿಯಾದರು. ಅವರೆ ಸ್ವತಂತ್ರ ಭಾರತದಲ್ಲಿ ಈ ಮೀಸಲಾತಿಯೂ ರಾಜಕೀಯ ತಿರುವನ್ನು ಪಡೆಡುಕೊಂಡು ಸಂಘರ್ಷಕ್ಕೆ ಕಾರಣವಾಯ್ತು. ಮೀಸಲಾತಿ ಪಡೆದ ಹಿಂದುಳಿದ ವರ್ಗದವರೂ ಅದನ್ನು ದುರುಪಯೋಗ ಪಡಿಸಿಕೊಂಡರು. ತಮ್ಮ ಹಿನ್ನೆಲೆಯನ್ನು ಮರೆತರು. ಸವರ್ಣೀಯರಿಗಿಂತ ಕ್ರೂರವಾಗಿ ತಮ್ಮ ಜನರನ್ನು ತಾವೇ ಶೋಷಿಸುತ್ತಾ ಸ್ವಾರ್ಥ ಸಾಧಿಸಿಕೊಳ್ಳುವ ಕೀಳುತನಕ್ಕೆ ಇಳಿದರು. ಈಗ ಮೀಸಲಾತಿ ಒಳಸಂರ್ಫರ್ಷಕ್ಕೆ ಕಾರಣವಾಗಿದೆ.

ಮೀಸಲಾತಿ ಭಿಕ್ಷೆ ಅಲ್ಲ. ಭಾರತೀಯ ಸಮಾಜದ ಸಾವಿರಾರು ವರ್ಷಗಳಿಂದ ಆಚರಿಸಿಕೊಂಡು ಬಂದ ಅಮಾನವೀಯ ಅಸ್ಪೃಶ್ಯತೆಯಿಂದ ಬಿಡುಗಡೆಗೊಂಡು ಭಾರತೀಯರು ಒಂದು ಜನಾಂಗವಾಗಿ ಹೊರಹೊಮ್ಮಲು ಬೇಕಾಗಿರುವ ಮೀಸಲಾತಿಯ ಅಗತ್ಯವನ್ನು ಒತ್ತಿ ಹೇಳಿದವರು ಸ್ವಾಮಿ ವಿವೇಕಾನಂದರು. ಮಹಾರಾಷ್ಟ್ರದ ಸಾಹುಮಹಾರಾಜರಂತೆ ತಮ್ಮ ಆಳ್ವಿಕೆಯಲ್ಲಿ ೧೯೧೭ ರಷ್ಟು ಹಿಂದೆಯೇ ಮೀಸಲಾತಿಯನ್ನು ಜಾರಿಗೊಳಿಸಿದವರು ಮೈಸೂರು ಅರಸರಾದ ನಾಲ್ಪಡಿ ಕೃಷ್ಣರಾಜ ಒಡೆಯರ್ ಅವರು. ನಂತರ ಅದನ್ನು ಸಂವಿಧಾನದಲ್ಲಿ ಅಳವಡಿಸಿದವರು ಡಾ|| ಅಂಬೇಡ್ಕರ್. ಮೀಸಲಾತಿಯ ಈ ತತ್ವ ಕಾಂಗ್ರೆಸ್‌ನ ದುರಾಡಳಿತದಿಂದಾಗಿ ರಾಜಕೀಯಗೊಂಡು ಈಗ ಅಪಹಾಸ್ಯಕ್ಕೆ, ವ್ಯಂಗಕ್ಕೆ ತುತ್ತಾಗಿದೆ.

ಅಂಬೇಡ್ಕರ್ ಅವರ ಆಶಯ ಭಾರತದ ಮಣ್ಲಿನಲ್ಲಿ ಅರಳಲಿಲ್ಲ. ಅಂತರಂಗದಲ್ಲಿ ಅಸಮಾನತೆಯನ್ನು ತುಂಬಿಕೊಂಡ ರಾಜಕೀಯ ಪಕ್ಷಗಳು ಬಹಿರಂಗದಲ್ಲಿ ಆಲಂಗಿಸುವ ನಾಟಕವಾಡಿದುವು. ಈ ರಾಜಕೀಯ ನಾಟಕಕ್ಕೆ ಕಾನ್ಸಿರಾಂ, ಮಾಯಾವತಿ, ರಾಂವಿಲಾಸ್‌ಪಾಸ್ವಾನ್, ಚಾರ್ಜ್ ಫರ್ನಾಂಡೀಸ್ ಅಂಥವರು ಬಲಿಯಾದದ್ದು ದೊಡ್ಡ ದುರಂತ.

ಈಗ ದಲಿತರ ಹೆಸರು ಹೇಳಿಕೊಂಡು ಹುಟ್ಟಿಕೊಂಡ ರಾಜಕೀಯ ಪಕ್ಷಗಳು, ವ್ಯಕ್ತಿಗಳು, ಸಂಘಟನೆಗಳು, ಸಂಘ-ಸಂಸ್ಥೆಗಳು ತಮ್ಮ ಸ್ವಾರ್ಥ ಸಾಧನೆಗಾಗಿ ಅಂಬೇಡ್ಕರ್ ಅವರನ್ನು ಮುಂದು ಮಾಡಿಕೊಂಡು ಆವರ ಹೆಸರನ್ನು ಹೇಳಿ ಕಿತ್ತು ತಿನ್ನುತ್ತಿವೆ. ದೇಶದ ಕೆಳಹಂತದಿಂದ ಮೇಲಿನವರೆಗೆ ಈ ರೋಗ ಉಲ್ಬಣಿಸಿದೆ. ಯಾವ ಅಜ್ಞಾನದಿಂದ, ಗಾಡಾಂಧಕಾರದಿಂದ, ಅಸಹ್ಯದ ಕೊಳಚೆಯಿಂದ ಆನಂದದ ಸ್ವಚ್ಛ ವಿಹಾರಕ್ಕೆ ಅಂಬೇಡ್ಕರ್ ಕೈ ಬೀಸಿ ಕರೆದರೋ ಅದರ ಕಿಂಚಿತ್ ಗಂಧ ಗಾಳಿಯನ್ನು ಅರಿಯದೆ ಕೊಚ್ಚೆಯೇ ಮೆಚ್ಚಿಗೆ ಎನ್ನುವಂತೆ ವರ್ತಿಸುತ್ತಿರುವುದನ್ನು ನೋಡಿದರೆ ಕತ್ತಲೆ ದಾರಿ ದೂರ ಎನ್ನುವ ಕರಾಳ ಅನುಭವವಾಗುತ್ತಿದೆ.

ಡಾ|| ಅಂಬೇಡ್ಕರ್ ಅತ್ಯಂತ ಜವಾಬ್ದಾರಿಯಿಂದ ಸಂವಿಧಾನವನ್ನು ರಚಿಸಿದ್ದಾರೆ. ಪ್ರಪಂಚದ ಎಲ್ಲ ರಾಷ್ಟ್ರಗಳ ಸಂವಿಧಾನದ ಉತ್ತಮ ಅಂಶಗಳನ್ನು ಅಳವಡಿಸಿಕೊಂಡು ಭಾರತೀಯ ಸಂಸ್ಕೃತಿಯ ಹಿನ್ನೆಲೆಯನ್ನರಿತು ಸಮಾನತೆಯನ್ನು ಹುಟ್ಟು ಹಾಕುವ, ಸರ್ವರ ಏಳ್ಗೆಗೆ ಪೂರಕವಾದ ಜಾತ್ಯಾತೀತ ಧರ್ಮನಿರಪೇಕ್ಷ ತತ್ವಗಳನ್ನು ಅದರಲ್ಲಿ ಅಳವಡಿಸಲಾಗಿದೆ. ಮನುಷ್ಯ ಮನುಷ್ಯರಲ್ಲಿ, ಸ್ತ್ರೀ-ಪುರುಷರಲ್ಲಿ ಅಸಮಾನತೆಯನ್ನು ಸೃಶ್ಯ-ಅಸ್ಪೃಶ್ಯತೆಯನ್ನು ಸುಟ್ಟು ಸಮಾನತೆಯ, ಸಹೋದರ ಭಾವನೆಯನ್ನು ಬಿತ್ತುವ ಸಂವಿಧಾನವನ್ನು ನೀಡಿದರು. ವರ್ಗ, ವರ್ಣ, ಜಾತಿ, ಅಸ್ಪೃಶ್ಯತೆಯನ್ನು ಮಾನ್ಯ ಮಾಡುವ ಬಿಜೆಪಿ ಈ ಸಂವಿಧಾನ ಪರಾಮರ್ಶೆ ಮಾಡಲು ಹೊರಟಿದೆ. ಬಿಜೆಪಿಯ ಈ  ಸಂವಿಧಾನ ಪರಾಮರ್ಶೆ ಎನ್ನುವುದು ಅಂಬೇಡ್ಕರ್ ಅವರ ಶವಪರೀಕ್ಷೆ ಮತ್ತೇನೂ ಅಲ್ಲ.

ತನ್ನವರಿಂದಲೇ ಕಿತ್ತು ತಿನ್ನಲ್ಪಡುತ್ತಿರುವ. ಕೋಮುವಾದಿಗಳ ಕ್ರೂರ ಕತ್ತಿಗೆ ಗುರಿಯಾಗಿ ಶವಪರೀಕ್ಷೆಗೆ ಒಳಗಾಗಿರುವ ಅಂಬೇಡ್ಕರ್ ಅವರಿಗೆ ಬಿಡುಗಡೆ ಎಂದಿಗೆ? ಅವರ ಆಶಯಗಳು ಈ ಮಣ್ಣಿನಲ್ಲಿ ಅರಳುವ ಬಗೆ ಹೇಗೆ? ಅವರ ಜೀವನ ಹೋರಾಟದ ಫಲವನ್ನು ಭಾರತೀಯರು ಸಾಕಾರಗೊಳಿಸಿಕೊಳ್ಳುವ ಮಾರ್ಗ ಯಾವುದು? ಈ ಪ್ರಶ್ನೆಗಳು ನಿಮ್ಮಂತೆ ನನ್ನನ್ನೂ ಕಾಡುತ್ತಿವೆ.
-೨೦೦೦

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...