ನೀನಿಲ್ಲದಾಗ-ಇದ್ದಾಗ

ನೀನಿಲ್ದೆ ಸಂಪತ್ತು ಶವದಲಂಕಾರಾ
ನೀನಿದ್ರೆ ಸುಡುಗಾಡು ಅರಮನೆಯಾಕಾರ ||ಪ||

ನೀನಿಲ್ಲೆ ತಣ್ಣೀರ ಬಾವೀಲಿ ಮುಳುಗಿದರು
ಕುದಿವಂಥ ಎದೆಗುದಿ ಒಳಹೊರಗ
ನೀನಿದ್ರೆ ಬಿಸಿಲಿನ ಬೇಗೆಯ ಬೆವರೂ
ತಣ್ಣೀರ ಸ್ನಾನವು ಏನ್ ಬೆರಗ ||೧||

ನೀನಿದ್ರೆ ತುಂಬಿದ ಮನೆಯೆಲ್ಲ ಬಿಕೋ ಬಿಕೊ
ಬಂಧು ಬಳಗ ಕೂಡ ವೈರಿಗಳು
ನೀನಿದ್ರೆ ಬರಿದಾದ ಮನೆತುಂಬ ಪ್ರೇಮವು
ಹರಿದಾಗ ಪರರೂ ಸಹಚಾರಿಗಳು ||೨||

ನೀನಿಲ್ದೆ ಆಕಾಶ ತಲೆಮ್ಯಾಲೆ ಬಿದ್ದಂತೆ
ಭೂಮಿಯು ಬಾಯ್ತೆರೆದು ತಿನ್ನುವಂತೆ
ನೀನಿದ್ರೆ ಜಗವೆಲ್ಲ ಹಗುರಾದ ಹೂವಂತೆ
ನಾನೋ ನಡೆಯುವೆ ಹಾರುವಂತೆ ||೩||

ನೀನಿಲ್ದೆ ನಾನೊಂದು ಮರುಭೂಮಿಯಲಿ ಬೆಳೆದ
ಒಂಟ್ಯಾದ ಈಚಲ ಮರದಂತೆ
ನೀನಿದ್ರೆ ನಂದನ ವನದಾಗೆ ಬೆಡಗಿನ
ಹೂಗಿಡ ಮುದ್ದಾಗಿ ಕರೆಯುವಂತೆ ||೪||

ನೀನಿಲ್ದೆ ಹಸಿವೇನ ಯಾ ಅನ್ನ ತುಂಬೀತು
ಮಣ್ಣೀನ ಗೊಂಬ್ಯಾಗೆ ಎಲ್ಲಿ ಜೀವಾ
ನೀನಿದ್ರೆ ಅಮೃತಾನೆ ಹೊಟ್ಯಾಗೆ ತುಂಬೀತು
ಹಸಿವಿಯ ಕಸಿವಿಸಿ ಎಲ್ಲಿ ನೋವಾ ||೫||

ನೀನಿಲ್ದೆ ಇರುವಾಗ ಗಂಡ್ಸತ್ತ ರಂಡ್ಮುಂಡೆ
ತಲಿಮ್ಯಾಲೆ ಕೆಂಪುಮುಸುಕು ಎಳಕೊಂಡಂಗೆ
ನೀನಿದ್ರೆ ಮುತ್ತೈದೆ ಹರಿಷಿಣ ಕುಂಕುಮ
ಎಲ್ಲಾ ಲಕ್ಷಣಗಳ ಪಡಕೊಂಡಂಗೆ ||೬||

***

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಶತಮಾನದ ಪ್ರಾಮಾಣಿಕ ವ್ಯಕ್ತಿ ಡಾ||ಲೋಹಿಯಾ
Next post ಹಿರಿ ಕಿರಿಯರು

ಸಣ್ಣ ಕತೆ

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…

  • ಬಿರುಕು

    ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್‍ತಿ ಬೆಚ್ಚಿ… Read more…

cheap jordans|wholesale air max|wholesale jordans|wholesale jewelry|wholesale jerseys