Home / ಕವನ / ಕವಿತೆ / ಹುಂಬರಾದೆವಲ್ಲೋ

ಹುಂಬರಾದೆವಲ್ಲೋ

ನಂಬಿದ್ರೆ ನಂಬಿ ಬಿಟ್ರೆ ಬಿಡ್ರಿ ಹುಂಬಗುತ್ಗಿ ಮಾತಿದಲ್ಲ
ಹುಂಬರಾದೆವಲ್ಲೋ ನಾವು ಇಷ್ಟೂ ದಿನ ||ಪ||

ತುಂಬಿ ತುಳುಕೋ ದೇಶದೊಳ್ಗೆ ತುಂಬದಂಗೆ ಹೊಟ್ಟೆ ಬಟ್ಟೆ
ದೊಂಬಿ ಮಾಡೋ ಶಕ್ತಿ ಇಲ್ದೆ ಕೊಳಿತಿವೋ ಜನ ||ಅ.ಪ||

ಕಂಡ ಕಂಡ ಗುಂಡು ಕಲ್ಗೆ ದೇವ್ರು ದಿಂಡ್ರು ಅಂದುಕೊಂತ
ಕಂಡು ಕಂಡು ಹಾಳು ಭಾವ್ಯಾಗ ಬಿದ್ದೀವಲ್ಲ
ಉಂಡು ತಿಂದು ಬೊಜ್ಜಾದೋರು ಕಾಲಿಗೆ ಬೀಳ್ರೋ ಅಂತಾ ಅಂದ್ರೆ
ದಿಂಡುಗೆಡ್ಡು ಮಂಡೆ ಬೋಳ್ಸಿಕೊಂಡೇವಲ್ಲ ||೧||

ಖೂನೀ ಮಾಡ್ಸೋ ಕಟುಕರಿಗೆ ಹೆಂಗಸರ್ಯಾನ ಕಳದೋರಿಗೆ
ನೀನೇ ದಣಿ ನಮ್ಮಪ್ಪಂತ ಕಾಲಿಗೆ ಬೀಳ್ತೀವಿ
ತಾನೇ ತಿಂದು ಊರಿನಾಸ್ತಿ ನಾನೇ ನಾನೆಂದ್ಮೆರದೋರ್ನೆಲ್ಲ
ನೀನೇ ಇಂದ್ರ ಚಂದ್ರ ಅಂತ ನಾವೆ ಹೊಗಳ್ತೀವಿ ||೨||

ನಮ್ಮ ಸೇವೆ ಮಾಡೋ ಆಳ್ಗೋಳ್ ಆಫೀಸಿನ್ಯಾಗೆ ದಣಿಗಳಂಗೆ
ಕಮ್ಗೆ ಮೆರ್ದು ದಬಾಯಿಸಿದ್ರೆ ನಾಯ್ಗಳಾಗ್ತೀವಿ
ದಮ್ಮು ಇಲ್ದೆ ಕಾಲಿಗೆ ಬಿದ್ದು ಕೇಳಿದಷ್ಟು ಬೋಳಿಸ್ಕೊಂಡು
ಸುಮ್ಗೆ ಹಲ್ಲಾಗ ನಾಲ್ಗೆ ಮಡ್ಗಿ ಮೂಳ್ಳುಳಾಗ್ತೀವಿ  ||೩||

ನಾನು ಮೇಲಿನ ಜಾತಿಯೋನು ನಾನು ಮೇಲಿಂದುದ್ರಿದೋನು
ನೀವು ಕೀಳು ಅಂದೋರ್ಕಾಲ್ಗೆ ನಾವೆ ಬೀಳ್ತೀವಿ
ಬಾನು ಭೂಮಿ ಗಾಳಿ ಬೆಂಕಿ ಒಂದೇ ಎಂದು ಸಾರುತಿದ್ರು
ಹೀನ ಜಾತಿ ಮೇಲು ಜಾತಿ ಅಂತ ಹೇಳ್ತೀವಿ ||೪||

ತಕ್ಡಿ ಮುರ್ದು ತೌಡು ಕೊಟ್ಟು ಮಹಡಿ ಮಹಡಿ ಕಟ್ಟಿಸ್ತಾರೆ
ಬೆಪ್ಪ ತಕ್ಡಿ ಆದ್ವಿ ನಾವು ದುಡ್ಡು ಹಣ್ಣಾಗಿ
ಬಡ್ಡೀ ಬಡ್ಡೀ ಕೂಡ್ಸಿ ಬರ್ದು ಮನೀ ಹೊಲ ನುಂಗಿ ಕುಂತು
ಬಡ್ಡೀ ಮಕ್ಳೆ ಅಂತ ಒದ್ರೆ ಬಿದ್ವಿ ಮಣ್ಣಾಗಿ ||೫||

ಪುಂಡ ಪೋಕ್ರಿ ಭಂಡರೆಲ್ಲ ಗೂಂಡಾಗದಿಮಿ ಮಾಡಿಕೊಂತ
ದಂಡು ಕಟ್ಟಿ ಕುಡ್ದು ತಿಂದು ದೊಡ್ಡೋರಾಗ್ತಾರೆ
ಗಂಡ ಹೇಣ್ತಿ ರಟ್ಟಿ ಮುರ್ದು ಹಗಲೆಲ್ಲ ದುಡುದ್ರು ಕೂಡ
ತಿಂಡಿಗಿಲ್ದೆ ಬಟ್ಟೆಗಿಲ್ದೆ ಹೆಡ್ಡರಾಗ್ತಾರೆ ||೬||

ತಾರಾತಿಗಡೀ ಮಾಡಿದೋರೆಲ್ಲ ತಾರಸಿ ಮನಿ ಕಟ್ಟಿಸ್ತಾರೆ
ನೇರ ನ್ಯಾಯ ನೀತಿ ಅಂದೋನ್ ಕೋತಿಯಾಗ್ತಾನೆ
ಬಾರಾ ವಿದ್ಯಾ ಭಾನಗೇಡಿ ಒಳಾಗೊಳ್ಗೆ ಮಾಡೋರೆಲ್ಲ
ದೊರಿಗಳಾದ್ರೆ ದುಡ್ಡು ಮನಸ್ಯ ಕತ್ತೆ ಆಗ್ತಾನೆ ||೭||

ಪ್ರಜೆಗಳದೆಲ್ಲ ರಾಜ್ಯಂತಾರೆ ಪ್ರಜೆಗಳಂದ್ರೆ ಯಾರಂತೀರಿ
ಪ್ರಜಾರಾಜ್ಯದಾಗ ರೊಕ್ಕ ಇರೋನೆ ರಾಜಾ
ಮೋಜಿನ್ಯಾಗ ರೊಕ್ಕ ಉಗ್ಗಿ ರೊಕ್ಕ ಬಳಿಯೋ ಆಟದಾಗೆ
ನಿಜವಾಗಿ ಸರ್ಕಾರೆಲ್ಲ ರೊಕ್‌ದೋರ್ ಮಜಾ ||೮||

ಕಾವಿ ಬಟ್ಟೆ ಹಾಕಿ ಸ್ವಾಮಿ ಗುರುವು ಅಂತ ಮೆರೆಯೋವಂಥ
ಸಾವಿರಾರು ಕುಂತು ತಿಂಬೊ ಮೈಗಳ್ರಿಗೆ
ನಾವೆ ಕಾಲೀಗ್ ಬೀಳತೀವಿ ಕಾಣ್ಕೆ ಕೊಟ್ಟು ಮೆರೆಸುತೀವಿ
ಪಾವನಾದೆವಂತ ಮಬ್ಬು ಮುಚ್ಚಿ ಮಳ್ಳಿಗೆ ||೯||

ವೇಷಕೆ ನಾವು ಮಳ್ಳಾಗ್ತೀವಿ ಬಣ್ಣಕ ನಾವು ಬಾಯ್ಬಿಡ್ತೀವಿ
ಐಷಾರಾಮಿ ಹಣವಂತರಿಗೆ ಹೆದರಿಕೊಂತಿವಿ
ಭಾಷೆ ಇಲ್ಲದ ಭಂಡರ ಮುಂದೆ ಬಾಯಿ ತೆಕ್ಕೊಂಡ್ ಬಿದ್ದಿರ್ತೀವಿ
ದೋಷ ನಮದಲ್ಲವೇನ್ರೊ ಎಲ್ಲಿ ಕುಂತಿವಿ ||೧೦||

***.

Tagged:

Leave a Reply

Your email address will not be published. Required fields are marked *

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...