Home / ಕವನ / ಕವಿತೆ / ಹುಂಬರಾದೆವಲ್ಲೋ

ಹುಂಬರಾದೆವಲ್ಲೋ

ನಂಬಿದ್ರೆ ನಂಬಿ ಬಿಟ್ರೆ ಬಿಡ್ರಿ ಹುಂಬಗುತ್ಗಿ ಮಾತಿದಲ್ಲ
ಹುಂಬರಾದೆವಲ್ಲೋ ನಾವು ಇಷ್ಟೂ ದಿನ ||ಪ||

ತುಂಬಿ ತುಳುಕೋ ದೇಶದೊಳ್ಗೆ ತುಂಬದಂಗೆ ಹೊಟ್ಟೆ ಬಟ್ಟೆ
ದೊಂಬಿ ಮಾಡೋ ಶಕ್ತಿ ಇಲ್ದೆ ಕೊಳಿತಿವೋ ಜನ ||ಅ.ಪ||

ಕಂಡ ಕಂಡ ಗುಂಡು ಕಲ್ಗೆ ದೇವ್ರು ದಿಂಡ್ರು ಅಂದುಕೊಂತ
ಕಂಡು ಕಂಡು ಹಾಳು ಭಾವ್ಯಾಗ ಬಿದ್ದೀವಲ್ಲ
ಉಂಡು ತಿಂದು ಬೊಜ್ಜಾದೋರು ಕಾಲಿಗೆ ಬೀಳ್ರೋ ಅಂತಾ ಅಂದ್ರೆ
ದಿಂಡುಗೆಡ್ಡು ಮಂಡೆ ಬೋಳ್ಸಿಕೊಂಡೇವಲ್ಲ ||೧||

ಖೂನೀ ಮಾಡ್ಸೋ ಕಟುಕರಿಗೆ ಹೆಂಗಸರ್ಯಾನ ಕಳದೋರಿಗೆ
ನೀನೇ ದಣಿ ನಮ್ಮಪ್ಪಂತ ಕಾಲಿಗೆ ಬೀಳ್ತೀವಿ
ತಾನೇ ತಿಂದು ಊರಿನಾಸ್ತಿ ನಾನೇ ನಾನೆಂದ್ಮೆರದೋರ್ನೆಲ್ಲ
ನೀನೇ ಇಂದ್ರ ಚಂದ್ರ ಅಂತ ನಾವೆ ಹೊಗಳ್ತೀವಿ ||೨||

ನಮ್ಮ ಸೇವೆ ಮಾಡೋ ಆಳ್ಗೋಳ್ ಆಫೀಸಿನ್ಯಾಗೆ ದಣಿಗಳಂಗೆ
ಕಮ್ಗೆ ಮೆರ್ದು ದಬಾಯಿಸಿದ್ರೆ ನಾಯ್ಗಳಾಗ್ತೀವಿ
ದಮ್ಮು ಇಲ್ದೆ ಕಾಲಿಗೆ ಬಿದ್ದು ಕೇಳಿದಷ್ಟು ಬೋಳಿಸ್ಕೊಂಡು
ಸುಮ್ಗೆ ಹಲ್ಲಾಗ ನಾಲ್ಗೆ ಮಡ್ಗಿ ಮೂಳ್ಳುಳಾಗ್ತೀವಿ  ||೩||

ನಾನು ಮೇಲಿನ ಜಾತಿಯೋನು ನಾನು ಮೇಲಿಂದುದ್ರಿದೋನು
ನೀವು ಕೀಳು ಅಂದೋರ್ಕಾಲ್ಗೆ ನಾವೆ ಬೀಳ್ತೀವಿ
ಬಾನು ಭೂಮಿ ಗಾಳಿ ಬೆಂಕಿ ಒಂದೇ ಎಂದು ಸಾರುತಿದ್ರು
ಹೀನ ಜಾತಿ ಮೇಲು ಜಾತಿ ಅಂತ ಹೇಳ್ತೀವಿ ||೪||

ತಕ್ಡಿ ಮುರ್ದು ತೌಡು ಕೊಟ್ಟು ಮಹಡಿ ಮಹಡಿ ಕಟ್ಟಿಸ್ತಾರೆ
ಬೆಪ್ಪ ತಕ್ಡಿ ಆದ್ವಿ ನಾವು ದುಡ್ಡು ಹಣ್ಣಾಗಿ
ಬಡ್ಡೀ ಬಡ್ಡೀ ಕೂಡ್ಸಿ ಬರ್ದು ಮನೀ ಹೊಲ ನುಂಗಿ ಕುಂತು
ಬಡ್ಡೀ ಮಕ್ಳೆ ಅಂತ ಒದ್ರೆ ಬಿದ್ವಿ ಮಣ್ಣಾಗಿ ||೫||

ಪುಂಡ ಪೋಕ್ರಿ ಭಂಡರೆಲ್ಲ ಗೂಂಡಾಗದಿಮಿ ಮಾಡಿಕೊಂತ
ದಂಡು ಕಟ್ಟಿ ಕುಡ್ದು ತಿಂದು ದೊಡ್ಡೋರಾಗ್ತಾರೆ
ಗಂಡ ಹೇಣ್ತಿ ರಟ್ಟಿ ಮುರ್ದು ಹಗಲೆಲ್ಲ ದುಡುದ್ರು ಕೂಡ
ತಿಂಡಿಗಿಲ್ದೆ ಬಟ್ಟೆಗಿಲ್ದೆ ಹೆಡ್ಡರಾಗ್ತಾರೆ ||೬||

ತಾರಾತಿಗಡೀ ಮಾಡಿದೋರೆಲ್ಲ ತಾರಸಿ ಮನಿ ಕಟ್ಟಿಸ್ತಾರೆ
ನೇರ ನ್ಯಾಯ ನೀತಿ ಅಂದೋನ್ ಕೋತಿಯಾಗ್ತಾನೆ
ಬಾರಾ ವಿದ್ಯಾ ಭಾನಗೇಡಿ ಒಳಾಗೊಳ್ಗೆ ಮಾಡೋರೆಲ್ಲ
ದೊರಿಗಳಾದ್ರೆ ದುಡ್ಡು ಮನಸ್ಯ ಕತ್ತೆ ಆಗ್ತಾನೆ ||೭||

ಪ್ರಜೆಗಳದೆಲ್ಲ ರಾಜ್ಯಂತಾರೆ ಪ್ರಜೆಗಳಂದ್ರೆ ಯಾರಂತೀರಿ
ಪ್ರಜಾರಾಜ್ಯದಾಗ ರೊಕ್ಕ ಇರೋನೆ ರಾಜಾ
ಮೋಜಿನ್ಯಾಗ ರೊಕ್ಕ ಉಗ್ಗಿ ರೊಕ್ಕ ಬಳಿಯೋ ಆಟದಾಗೆ
ನಿಜವಾಗಿ ಸರ್ಕಾರೆಲ್ಲ ರೊಕ್‌ದೋರ್ ಮಜಾ ||೮||

ಕಾವಿ ಬಟ್ಟೆ ಹಾಕಿ ಸ್ವಾಮಿ ಗುರುವು ಅಂತ ಮೆರೆಯೋವಂಥ
ಸಾವಿರಾರು ಕುಂತು ತಿಂಬೊ ಮೈಗಳ್ರಿಗೆ
ನಾವೆ ಕಾಲೀಗ್ ಬೀಳತೀವಿ ಕಾಣ್ಕೆ ಕೊಟ್ಟು ಮೆರೆಸುತೀವಿ
ಪಾವನಾದೆವಂತ ಮಬ್ಬು ಮುಚ್ಚಿ ಮಳ್ಳಿಗೆ ||೯||

ವೇಷಕೆ ನಾವು ಮಳ್ಳಾಗ್ತೀವಿ ಬಣ್ಣಕ ನಾವು ಬಾಯ್ಬಿಡ್ತೀವಿ
ಐಷಾರಾಮಿ ಹಣವಂತರಿಗೆ ಹೆದರಿಕೊಂತಿವಿ
ಭಾಷೆ ಇಲ್ಲದ ಭಂಡರ ಮುಂದೆ ಬಾಯಿ ತೆಕ್ಕೊಂಡ್ ಬಿದ್ದಿರ್ತೀವಿ
ದೋಷ ನಮದಲ್ಲವೇನ್ರೊ ಎಲ್ಲಿ ಕುಂತಿವಿ ||೧೦||

***.

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...