Home / ಕವನ / ಕವಿತೆ / ಮೋಡಿಕಾರ

ಮೋಡಿಕಾರ

ಮೋಡಿಕಾರ ಮುತ್ತಯ್ಯನ ಚೀಲದಿ
ಅಯ್ದೆಂದರೆ ಅಯ್ದೇ ಒಡವೆಗಳು
ಹುಲ್ಲು ಕಡ್ಡಿಗಳ ಕಟ್ಟೊಂದಿಹುದು
ಇನಿತರಿಂದಲೆ ಬೆರಗಿನಾಟವನು ಹೂಡಿಹನು
ವಿಧ ವಿಧದ ರೀತಿಯಲಿ ಅಯ್ದೊಡವೆಗಳ ಬೆರಸಿ
ಚಿನ್ನವನು ಮಾಡಿಹನು ಮಣ್ಣುಗಳ ಮಾಡಿಹನು
ರತ್ನ ವಜ್ರಾದಿಗಳ ತಾಮ್ರ ತವರಿದ್ದಲಿಯ
ಲವಣಾದಿ ಉಪ್ಪುಗಳ ಕಡಲುಕಣಿ ರಚಿಸಿಹನು
ಹುಲ್ಲುಗಳ ಬಗೆಯೇಸು, ಹಣ್ಣುಗಳ ವಿಧವೇಸು?
ಮಣ್ಣುಗಳ ಬಣ್ಣಗಳನೆಣಿಸಲಹುದೇ?
ಕಲ್ಲುಗಳ ಜಾತಿಯನು ಗುಣಿಸಲಹುದೇ?
ಮೂಳೆನರನೆತ್ತರದ ಚೀಲುಗಳ ರಚಿಸಿ
ತನ್ನ ಕಟ್ಟಿನ ಕಡ್ಡಿ ಅದರ ನೆತ್ತಿಗೆ ಚುಚ್ಚಿ
ಮಂತ್ರವನ್ನು ಸುರಿದರೆ ಆ ಗೊಂಬೆಗುಸಿರು
ನುಡಿಯುವದು-ನಲಿಯುವದು-ಕುಣಿಯುವುದು-ಕುಡಿಯುವದು
ಗೊಂಬೆಗಳ ಗುಣಗಣದ ಹೊಲಬನರಿವುದಸಾಧ್ಯ!
ಕೋಟಿರೂಪದ ಕೀಲು ಬೆರಗುಗೊಳಿಸುವ ಒಗಟು !
ನೆತ್ತಿಯಿಂದಾ ಕಡ್ಡಿ ಕಿತ್ತಿ ಕಡೆದೆಗೆದೊಗೆಯೆ
ನಿಂತ ನಿಂತಲ್ಲಿಯೇ ಆ ಗೊಂಬೆ ಬೀಳುವದು
ರಕ್ತಮಾಂಸಗಳೆಲ್ಲ ಅಯ್ದೊಡವೆಯಾಗುವವು
ಮಾಡುವನು ಆಡುವನು ತಾನೋಡಿ ನಲಿಯುವನು
ಆಟ ಸಾಕೆಂದೆನಿಸೆ ಮುರಿದು ಮೊಟ್ಟೆಯಕಟ್ಟಿ
ಮತ್ತೊಂದು ಹೂಡುವನನು

ಇವನೆಂಥ ಮೋಡಿಕಾರನಯ್ಯ!
ಮಂತ್ರಗಳ ಶಕ್ತಿಯೇನು, ತಂತ್ರಗಳಯುಕ್ತಿಯೇನು?
ಆಟ ಹೂಡಿದ ದಿವಸನೆಂದೆಂದೋ ಏನೋ !
ಮುಗಿವ ಮಿತಿ ತಿಳಿವುದೇನೋ?
*****

ಪುಸ್ತಕ: ಸಾಗರ ಸಿಂಪಿ

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...