Home / ಕವನ / ಕವಿತೆ / ಮೋಡಿಕಾರ

ಮೋಡಿಕಾರ

ಮೋಡಿಕಾರ ಮುತ್ತಯ್ಯನ ಚೀಲದಿ
ಅಯ್ದೆಂದರೆ ಅಯ್ದೇ ಒಡವೆಗಳು
ಹುಲ್ಲು ಕಡ್ಡಿಗಳ ಕಟ್ಟೊಂದಿಹುದು
ಇನಿತರಿಂದಲೆ ಬೆರಗಿನಾಟವನು ಹೂಡಿಹನು
ವಿಧ ವಿಧದ ರೀತಿಯಲಿ ಅಯ್ದೊಡವೆಗಳ ಬೆರಸಿ
ಚಿನ್ನವನು ಮಾಡಿಹನು ಮಣ್ಣುಗಳ ಮಾಡಿಹನು
ರತ್ನ ವಜ್ರಾದಿಗಳ ತಾಮ್ರ ತವರಿದ್ದಲಿಯ
ಲವಣಾದಿ ಉಪ್ಪುಗಳ ಕಡಲುಕಣಿ ರಚಿಸಿಹನು
ಹುಲ್ಲುಗಳ ಬಗೆಯೇಸು, ಹಣ್ಣುಗಳ ವಿಧವೇಸು?
ಮಣ್ಣುಗಳ ಬಣ್ಣಗಳನೆಣಿಸಲಹುದೇ?
ಕಲ್ಲುಗಳ ಜಾತಿಯನು ಗುಣಿಸಲಹುದೇ?
ಮೂಳೆನರನೆತ್ತರದ ಚೀಲುಗಳ ರಚಿಸಿ
ತನ್ನ ಕಟ್ಟಿನ ಕಡ್ಡಿ ಅದರ ನೆತ್ತಿಗೆ ಚುಚ್ಚಿ
ಮಂತ್ರವನ್ನು ಸುರಿದರೆ ಆ ಗೊಂಬೆಗುಸಿರು
ನುಡಿಯುವದು-ನಲಿಯುವದು-ಕುಣಿಯುವುದು-ಕುಡಿಯುವದು
ಗೊಂಬೆಗಳ ಗುಣಗಣದ ಹೊಲಬನರಿವುದಸಾಧ್ಯ!
ಕೋಟಿರೂಪದ ಕೀಲು ಬೆರಗುಗೊಳಿಸುವ ಒಗಟು !
ನೆತ್ತಿಯಿಂದಾ ಕಡ್ಡಿ ಕಿತ್ತಿ ಕಡೆದೆಗೆದೊಗೆಯೆ
ನಿಂತ ನಿಂತಲ್ಲಿಯೇ ಆ ಗೊಂಬೆ ಬೀಳುವದು
ರಕ್ತಮಾಂಸಗಳೆಲ್ಲ ಅಯ್ದೊಡವೆಯಾಗುವವು
ಮಾಡುವನು ಆಡುವನು ತಾನೋಡಿ ನಲಿಯುವನು
ಆಟ ಸಾಕೆಂದೆನಿಸೆ ಮುರಿದು ಮೊಟ್ಟೆಯಕಟ್ಟಿ
ಮತ್ತೊಂದು ಹೂಡುವನನು

ಇವನೆಂಥ ಮೋಡಿಕಾರನಯ್ಯ!
ಮಂತ್ರಗಳ ಶಕ್ತಿಯೇನು, ತಂತ್ರಗಳಯುಕ್ತಿಯೇನು?
ಆಟ ಹೂಡಿದ ದಿವಸನೆಂದೆಂದೋ ಏನೋ !
ಮುಗಿವ ಮಿತಿ ತಿಳಿವುದೇನೋ?
*****

ಪುಸ್ತಕ: ಸಾಗರ ಸಿಂಪಿ

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...