Home / ಕವನ / ಕವಿತೆ / ನಿರೀಕ್ಷೆಯ ಮಮ್ಮಿಗಳು

ನಿರೀಕ್ಷೆಯ ಮಮ್ಮಿಗಳು

ಗ್ಲಾಸಿನ ಪೆಟ್ಟಿಗೆಯೊಳಗೆ ಮೈ ತುಂಬಾ
ಬ್ಯಾಂಡೇಜ್ ಮಾಡಿಕೊಂಡು ಬಿದ್ದಿರೋ ನೂರಾರು
ಇಜಿಪ್ಶಿಯನ್ ಮಮ್ಮಿಗಳು (British Museum London)
ಮ್ಯೂಸಿಯಂದೊಳಗಿಂದ ಹೊರಬೀಳಲು
Q ಹಚ್ಚಿವೆಯೆಂದು ನನ್ನೊಂದಿಗೆ ಉಸುರಿದವು.
ಕೆಲವೊಂದು ವೃದ್ಧ ಮಮ್ಮಿಗಳು
ಅದೆಲ್ಲಿ ತೊಂದರೆ
ಹೊರಗಡೆ ಚಳಿ – ಹಿಮ ತರಾತುರಿ ಜೀವನ
ಇದೆಲ್ಲ ನಮಗೆ ಒಗ್ಗದು: ಇಲ್ಲಿಯೇ ನಮಗೆ ಬೆಚ್ಚಗಿದೆ
ನಿಮ್ಮಂಥವರ ಟಿಕೆಟ್ ಹಣದಿಂದ
ಬೆಚ್ಚಗೆ ಚಾ ಕುಡಿದು ನಿಮ್ಮೊಂದಿಗೆ ನಮ್ಮ
ಅಷ್ಟಷ್ಟು ಪರಿಚಯ ತೋರಿಸಿ ಹೀಗೇ
ಇನ್ನೂ ನೂರಾರು ವರ್ಷ ಕಳೆಯುತ್ತ ಹೋಗುತ್ತೇವೆ
ಎಂದು ನಗುತ್ತವೆ.
Mrs. Guttiನೋಡಿ ನಾವು ಯಾವತ್ತೂ
ನಮ್ಮ ಅಜ್ಜ- ಮುತ್ತಜ್ಜ- ಅಜ್ಜಿಯರೊಂದಿಗೆ
ಇಲ್ಲೇ ಇರುತ್ತೇವೆ
ಮಲಗಿರುವ ಚಿಕ್ಕ ಮಮ್ಮಿಗಳು
ಹೇಳುತ್ತಲೇ ಇದ್ದಂತೆ –
ಎರಡು ವರ್ಷದ ಬ್ಯಾಂಡೇಜ್ ಬೇಬಿಯೊಂದು
ಆಂಟಿ ನಿಮಗೆ ಅಜ್ಜ ಅಜ್ಜಿ ಬಿಟ್ಟಿರಲಿಕ್ಕೆ
ಬೇಜಾರಾಗೋದಿಲ್ಲವೆ? ಎಂದು ಕೇಳಿ
ನನ್ನ ಭಾವನೆಗಳಿಗೆ ಲಗ್ಗೆ ಹಾಕಿತು.
ಅರಿಯದೇ ನನ್ನ ಕಣ್ಣಂಚಿನಲ್ಲಿ ನೀರು ಬಂದಾಗ
ಬ್ಯಾಂಡೇಜ್ ಬೇಬಿಯ ಮೇಲೆ ಕೈಯಾಡಿಸಿ
ನಿನ್ನಂತೆಯೇ ನನಗೂ ಅಜ್ಜಾ- ಅಜ್ಜಿ ಬೇಕು
ಎಂದು ಮುಂದೆ ಸರಿಯುತ್ತಿದ್ದಂತೆಯೇ –
ಡಬಲ್ ಟ್ರಿಬಲ್ ಬ್ಯಾಂಡೇಜಿನ
ಗೂಂಡಾ ಮಮ್ಮಿ ಎದುರಾಯ್ತು
ಅದೇನೋ ನಿಮ್ಮಕಡೆಗೆ ಜೀವ ಹೋದರೆ
ಬೇಗ ಮಣ್ಣಿಗೋ – ಬೆಂಕಿಗೋ ಕೊಟ್ಟುಬಿಡ್ತಾರಂತೆ
ಹೌದಾ ?
ನಾವು ನೋಡಿ ನಮ್ಮ ಪರಿಚಯದ
ತಲೆ ಪಟ್ಟಿಕಟ್ಟಿಕೊಂಡು ದಿನಾಲೂ
ಸಾವಿರಾರು ಜನರನ್ನು ಮಾತಾಡಿಸ್ತೀವಿ
ನಾವು ಜೀವಂತ ಇಜಿಪ್ತದ ಪರೋಹಗಳು
ಆದರೆ ನೀವು …?
ನನ್ನ ಕೆಣಕಲೆತ್ನಿಸಿದಾಗ ತಪ್ಪಿಸಿಕೊಂಡು
ಮುಂದೆ ಹೋದೆ.
ಆದರೆ ಆಶಾವಾದಿ ಬತೇಹನ್‌ ವಿಜ್ಞಾನ
ಯುಗದ ಭವಿಷ್ಯತೆಯಲ್ಲಿ ಮೈಮರೆತಿದ್ದ.
ಅವನಿಗೆ ತೊಂದರೆಯಾಗದಂತೆ ಪರಿಚಯಿಸಿಕೊಳ್ಳಲು
(ತಲೆಪಟ್ಟಿ ಆಥವಾ ಪರಿಚಯ ಪತ್ರ)
ನಾ ಹತ್ತಿರ ನಿಂತಿದ್ದೆ.
ವಿಜ್ಞಾನಿಗಳೇನಾದರೂ ನಮ್ಮಲ್ಲಿ ಇಂದಿಲ್ಲಿ ನಾಳೆಯಾದರೂ
ಜೀವ ತುಂಬಿದರೆ,
ನಾವೂ ನಿಮ್ಮ ತಲೆಪಟ್ಟಿ ಆಥವಾ
ಸಮಾಧಿ ನೋಡಲು ಬರುತ್ತೇವೆ.
ಈವರೆಗೆ ನೀವು, ನಿಮ್ಮ ಅಜ್ಜಂದಿರೆಲ್ಲ
ನಮ್ಮನ್ನು ನೋಡಿ ಮಾತಾಡಿಸಿ
ಕ್ಷೇಮ ಸಮಾಚಾರ ವಿಚಾರಿಸಿದ್ದಕ್ಕೆ ಧನ್ಯವಾದಗಳು.
ಎಂದು ನನ್ನ ಕಿವಿಯಲ್ಲಿ
ಬತೇಹನ್ ಎಚ್ಚರಗೊಂಡು ಉಸುರಿದಾಗ
ನಾನು ಹೆದರಿ ಬೆವೆತು ಕಂಗಾಲಾಗಿ ಕಂಪಿಸಿ
You are most welcome my friend
ಎಂದು ಹೇಳಿ ಚಕ್ಕನೆ ಹಿಂದೆ ಸರಿದೆ.

(British Museum ದೊಳಗೆ ನೂರಾರು ಮಮ್ಮಿಗಳು ಬಿದ್ದುಕೊಂಡಿವೆ. ಅವುಗಳಿಗೆ ಆಕಸ್ಮಿಕ ಜೀವ ಬಂದರೆ (ಈ ವಿಜ್ಞಾನ ಯುಗದಲ್ಲಿ) ಹೇಗಿರಬಹುದು ವಾತಾವರಣ ಅನಿಸಿತು.  ಆ ಅನಿಸಿಕೆಯೇ ಈ ಒಂದು ಕವನ)
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...