Home / ಕವನ / ಕವಿತೆ / ನಿರೀಕ್ಷೆಯ ಮಮ್ಮಿಗಳು

ನಿರೀಕ್ಷೆಯ ಮಮ್ಮಿಗಳು

ಗ್ಲಾಸಿನ ಪೆಟ್ಟಿಗೆಯೊಳಗೆ ಮೈ ತುಂಬಾ
ಬ್ಯಾಂಡೇಜ್ ಮಾಡಿಕೊಂಡು ಬಿದ್ದಿರೋ ನೂರಾರು
ಇಜಿಪ್ಶಿಯನ್ ಮಮ್ಮಿಗಳು (British Museum London)
ಮ್ಯೂಸಿಯಂದೊಳಗಿಂದ ಹೊರಬೀಳಲು
Q ಹಚ್ಚಿವೆಯೆಂದು ನನ್ನೊಂದಿಗೆ ಉಸುರಿದವು.
ಕೆಲವೊಂದು ವೃದ್ಧ ಮಮ್ಮಿಗಳು
ಅದೆಲ್ಲಿ ತೊಂದರೆ
ಹೊರಗಡೆ ಚಳಿ – ಹಿಮ ತರಾತುರಿ ಜೀವನ
ಇದೆಲ್ಲ ನಮಗೆ ಒಗ್ಗದು: ಇಲ್ಲಿಯೇ ನಮಗೆ ಬೆಚ್ಚಗಿದೆ
ನಿಮ್ಮಂಥವರ ಟಿಕೆಟ್ ಹಣದಿಂದ
ಬೆಚ್ಚಗೆ ಚಾ ಕುಡಿದು ನಿಮ್ಮೊಂದಿಗೆ ನಮ್ಮ
ಅಷ್ಟಷ್ಟು ಪರಿಚಯ ತೋರಿಸಿ ಹೀಗೇ
ಇನ್ನೂ ನೂರಾರು ವರ್ಷ ಕಳೆಯುತ್ತ ಹೋಗುತ್ತೇವೆ
ಎಂದು ನಗುತ್ತವೆ.
Mrs. Guttiನೋಡಿ ನಾವು ಯಾವತ್ತೂ
ನಮ್ಮ ಅಜ್ಜ- ಮುತ್ತಜ್ಜ- ಅಜ್ಜಿಯರೊಂದಿಗೆ
ಇಲ್ಲೇ ಇರುತ್ತೇವೆ
ಮಲಗಿರುವ ಚಿಕ್ಕ ಮಮ್ಮಿಗಳು
ಹೇಳುತ್ತಲೇ ಇದ್ದಂತೆ –
ಎರಡು ವರ್ಷದ ಬ್ಯಾಂಡೇಜ್ ಬೇಬಿಯೊಂದು
ಆಂಟಿ ನಿಮಗೆ ಅಜ್ಜ ಅಜ್ಜಿ ಬಿಟ್ಟಿರಲಿಕ್ಕೆ
ಬೇಜಾರಾಗೋದಿಲ್ಲವೆ? ಎಂದು ಕೇಳಿ
ನನ್ನ ಭಾವನೆಗಳಿಗೆ ಲಗ್ಗೆ ಹಾಕಿತು.
ಅರಿಯದೇ ನನ್ನ ಕಣ್ಣಂಚಿನಲ್ಲಿ ನೀರು ಬಂದಾಗ
ಬ್ಯಾಂಡೇಜ್ ಬೇಬಿಯ ಮೇಲೆ ಕೈಯಾಡಿಸಿ
ನಿನ್ನಂತೆಯೇ ನನಗೂ ಅಜ್ಜಾ- ಅಜ್ಜಿ ಬೇಕು
ಎಂದು ಮುಂದೆ ಸರಿಯುತ್ತಿದ್ದಂತೆಯೇ –
ಡಬಲ್ ಟ್ರಿಬಲ್ ಬ್ಯಾಂಡೇಜಿನ
ಗೂಂಡಾ ಮಮ್ಮಿ ಎದುರಾಯ್ತು
ಅದೇನೋ ನಿಮ್ಮಕಡೆಗೆ ಜೀವ ಹೋದರೆ
ಬೇಗ ಮಣ್ಣಿಗೋ – ಬೆಂಕಿಗೋ ಕೊಟ್ಟುಬಿಡ್ತಾರಂತೆ
ಹೌದಾ ?
ನಾವು ನೋಡಿ ನಮ್ಮ ಪರಿಚಯದ
ತಲೆ ಪಟ್ಟಿಕಟ್ಟಿಕೊಂಡು ದಿನಾಲೂ
ಸಾವಿರಾರು ಜನರನ್ನು ಮಾತಾಡಿಸ್ತೀವಿ
ನಾವು ಜೀವಂತ ಇಜಿಪ್ತದ ಪರೋಹಗಳು
ಆದರೆ ನೀವು …?
ನನ್ನ ಕೆಣಕಲೆತ್ನಿಸಿದಾಗ ತಪ್ಪಿಸಿಕೊಂಡು
ಮುಂದೆ ಹೋದೆ.
ಆದರೆ ಆಶಾವಾದಿ ಬತೇಹನ್‌ ವಿಜ್ಞಾನ
ಯುಗದ ಭವಿಷ್ಯತೆಯಲ್ಲಿ ಮೈಮರೆತಿದ್ದ.
ಅವನಿಗೆ ತೊಂದರೆಯಾಗದಂತೆ ಪರಿಚಯಿಸಿಕೊಳ್ಳಲು
(ತಲೆಪಟ್ಟಿ ಆಥವಾ ಪರಿಚಯ ಪತ್ರ)
ನಾ ಹತ್ತಿರ ನಿಂತಿದ್ದೆ.
ವಿಜ್ಞಾನಿಗಳೇನಾದರೂ ನಮ್ಮಲ್ಲಿ ಇಂದಿಲ್ಲಿ ನಾಳೆಯಾದರೂ
ಜೀವ ತುಂಬಿದರೆ,
ನಾವೂ ನಿಮ್ಮ ತಲೆಪಟ್ಟಿ ಆಥವಾ
ಸಮಾಧಿ ನೋಡಲು ಬರುತ್ತೇವೆ.
ಈವರೆಗೆ ನೀವು, ನಿಮ್ಮ ಅಜ್ಜಂದಿರೆಲ್ಲ
ನಮ್ಮನ್ನು ನೋಡಿ ಮಾತಾಡಿಸಿ
ಕ್ಷೇಮ ಸಮಾಚಾರ ವಿಚಾರಿಸಿದ್ದಕ್ಕೆ ಧನ್ಯವಾದಗಳು.
ಎಂದು ನನ್ನ ಕಿವಿಯಲ್ಲಿ
ಬತೇಹನ್ ಎಚ್ಚರಗೊಂಡು ಉಸುರಿದಾಗ
ನಾನು ಹೆದರಿ ಬೆವೆತು ಕಂಗಾಲಾಗಿ ಕಂಪಿಸಿ
You are most welcome my friend
ಎಂದು ಹೇಳಿ ಚಕ್ಕನೆ ಹಿಂದೆ ಸರಿದೆ.

(British Museum ದೊಳಗೆ ನೂರಾರು ಮಮ್ಮಿಗಳು ಬಿದ್ದುಕೊಂಡಿವೆ. ಅವುಗಳಿಗೆ ಆಕಸ್ಮಿಕ ಜೀವ ಬಂದರೆ (ಈ ವಿಜ್ಞಾನ ಯುಗದಲ್ಲಿ) ಹೇಗಿರಬಹುದು ವಾತಾವರಣ ಅನಿಸಿತು.  ಆ ಅನಿಸಿಕೆಯೇ ಈ ಒಂದು ಕವನ)
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...