Home / ಕವನ / ಕವಿತೆ / ನಿರೀಕ್ಷೆಯ ಮಮ್ಮಿಗಳು

ನಿರೀಕ್ಷೆಯ ಮಮ್ಮಿಗಳು

ಗ್ಲಾಸಿನ ಪೆಟ್ಟಿಗೆಯೊಳಗೆ ಮೈ ತುಂಬಾ
ಬ್ಯಾಂಡೇಜ್ ಮಾಡಿಕೊಂಡು ಬಿದ್ದಿರೋ ನೂರಾರು
ಇಜಿಪ್ಶಿಯನ್ ಮಮ್ಮಿಗಳು (British Museum London)
ಮ್ಯೂಸಿಯಂದೊಳಗಿಂದ ಹೊರಬೀಳಲು
Q ಹಚ್ಚಿವೆಯೆಂದು ನನ್ನೊಂದಿಗೆ ಉಸುರಿದವು.
ಕೆಲವೊಂದು ವೃದ್ಧ ಮಮ್ಮಿಗಳು
ಅದೆಲ್ಲಿ ತೊಂದರೆ
ಹೊರಗಡೆ ಚಳಿ – ಹಿಮ ತರಾತುರಿ ಜೀವನ
ಇದೆಲ್ಲ ನಮಗೆ ಒಗ್ಗದು: ಇಲ್ಲಿಯೇ ನಮಗೆ ಬೆಚ್ಚಗಿದೆ
ನಿಮ್ಮಂಥವರ ಟಿಕೆಟ್ ಹಣದಿಂದ
ಬೆಚ್ಚಗೆ ಚಾ ಕುಡಿದು ನಿಮ್ಮೊಂದಿಗೆ ನಮ್ಮ
ಅಷ್ಟಷ್ಟು ಪರಿಚಯ ತೋರಿಸಿ ಹೀಗೇ
ಇನ್ನೂ ನೂರಾರು ವರ್ಷ ಕಳೆಯುತ್ತ ಹೋಗುತ್ತೇವೆ
ಎಂದು ನಗುತ್ತವೆ.
Mrs. Guttiನೋಡಿ ನಾವು ಯಾವತ್ತೂ
ನಮ್ಮ ಅಜ್ಜ- ಮುತ್ತಜ್ಜ- ಅಜ್ಜಿಯರೊಂದಿಗೆ
ಇಲ್ಲೇ ಇರುತ್ತೇವೆ
ಮಲಗಿರುವ ಚಿಕ್ಕ ಮಮ್ಮಿಗಳು
ಹೇಳುತ್ತಲೇ ಇದ್ದಂತೆ –
ಎರಡು ವರ್ಷದ ಬ್ಯಾಂಡೇಜ್ ಬೇಬಿಯೊಂದು
ಆಂಟಿ ನಿಮಗೆ ಅಜ್ಜ ಅಜ್ಜಿ ಬಿಟ್ಟಿರಲಿಕ್ಕೆ
ಬೇಜಾರಾಗೋದಿಲ್ಲವೆ? ಎಂದು ಕೇಳಿ
ನನ್ನ ಭಾವನೆಗಳಿಗೆ ಲಗ್ಗೆ ಹಾಕಿತು.
ಅರಿಯದೇ ನನ್ನ ಕಣ್ಣಂಚಿನಲ್ಲಿ ನೀರು ಬಂದಾಗ
ಬ್ಯಾಂಡೇಜ್ ಬೇಬಿಯ ಮೇಲೆ ಕೈಯಾಡಿಸಿ
ನಿನ್ನಂತೆಯೇ ನನಗೂ ಅಜ್ಜಾ- ಅಜ್ಜಿ ಬೇಕು
ಎಂದು ಮುಂದೆ ಸರಿಯುತ್ತಿದ್ದಂತೆಯೇ –
ಡಬಲ್ ಟ್ರಿಬಲ್ ಬ್ಯಾಂಡೇಜಿನ
ಗೂಂಡಾ ಮಮ್ಮಿ ಎದುರಾಯ್ತು
ಅದೇನೋ ನಿಮ್ಮಕಡೆಗೆ ಜೀವ ಹೋದರೆ
ಬೇಗ ಮಣ್ಣಿಗೋ – ಬೆಂಕಿಗೋ ಕೊಟ್ಟುಬಿಡ್ತಾರಂತೆ
ಹೌದಾ ?
ನಾವು ನೋಡಿ ನಮ್ಮ ಪರಿಚಯದ
ತಲೆ ಪಟ್ಟಿಕಟ್ಟಿಕೊಂಡು ದಿನಾಲೂ
ಸಾವಿರಾರು ಜನರನ್ನು ಮಾತಾಡಿಸ್ತೀವಿ
ನಾವು ಜೀವಂತ ಇಜಿಪ್ತದ ಪರೋಹಗಳು
ಆದರೆ ನೀವು …?
ನನ್ನ ಕೆಣಕಲೆತ್ನಿಸಿದಾಗ ತಪ್ಪಿಸಿಕೊಂಡು
ಮುಂದೆ ಹೋದೆ.
ಆದರೆ ಆಶಾವಾದಿ ಬತೇಹನ್‌ ವಿಜ್ಞಾನ
ಯುಗದ ಭವಿಷ್ಯತೆಯಲ್ಲಿ ಮೈಮರೆತಿದ್ದ.
ಅವನಿಗೆ ತೊಂದರೆಯಾಗದಂತೆ ಪರಿಚಯಿಸಿಕೊಳ್ಳಲು
(ತಲೆಪಟ್ಟಿ ಆಥವಾ ಪರಿಚಯ ಪತ್ರ)
ನಾ ಹತ್ತಿರ ನಿಂತಿದ್ದೆ.
ವಿಜ್ಞಾನಿಗಳೇನಾದರೂ ನಮ್ಮಲ್ಲಿ ಇಂದಿಲ್ಲಿ ನಾಳೆಯಾದರೂ
ಜೀವ ತುಂಬಿದರೆ,
ನಾವೂ ನಿಮ್ಮ ತಲೆಪಟ್ಟಿ ಆಥವಾ
ಸಮಾಧಿ ನೋಡಲು ಬರುತ್ತೇವೆ.
ಈವರೆಗೆ ನೀವು, ನಿಮ್ಮ ಅಜ್ಜಂದಿರೆಲ್ಲ
ನಮ್ಮನ್ನು ನೋಡಿ ಮಾತಾಡಿಸಿ
ಕ್ಷೇಮ ಸಮಾಚಾರ ವಿಚಾರಿಸಿದ್ದಕ್ಕೆ ಧನ್ಯವಾದಗಳು.
ಎಂದು ನನ್ನ ಕಿವಿಯಲ್ಲಿ
ಬತೇಹನ್ ಎಚ್ಚರಗೊಂಡು ಉಸುರಿದಾಗ
ನಾನು ಹೆದರಿ ಬೆವೆತು ಕಂಗಾಲಾಗಿ ಕಂಪಿಸಿ
You are most welcome my friend
ಎಂದು ಹೇಳಿ ಚಕ್ಕನೆ ಹಿಂದೆ ಸರಿದೆ.

(British Museum ದೊಳಗೆ ನೂರಾರು ಮಮ್ಮಿಗಳು ಬಿದ್ದುಕೊಂಡಿವೆ. ಅವುಗಳಿಗೆ ಆಕಸ್ಮಿಕ ಜೀವ ಬಂದರೆ (ಈ ವಿಜ್ಞಾನ ಯುಗದಲ್ಲಿ) ಹೇಗಿರಬಹುದು ವಾತಾವರಣ ಅನಿಸಿತು.  ಆ ಅನಿಸಿಕೆಯೇ ಈ ಒಂದು ಕವನ)
*****

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...