ಉರುಳಿರುವ ತಾರೆಗಳು

ಉರುಳಿರುವ ತಾರೆಗಳಿಗಳುತ ನಿಲ್ಲುವರುಂಟೆ?
ಮೂಡಿರಲು ಮೂಡಲಲಿ ಉದಯದರಳಿನ ಕಂಪು
ಕಳೆದ ಕಾಲದ ತಂಟೆ
ಇಂದೇಕೆ? – ಹೊಸ ತಂಪು

ಹೃದಯದೊಳಗರಳಿರಲು, ಕಂಪು ಸವಿವುದಬಿಟ್ಟು
ಅಳಿದ ಕನಸುಗಳನ್ನು-ಸತ್ವವಿಲ್ಲದ ಹೊಟ್ಟು
ಅದು ಎಂಬುದನೆ
ನೀ ನಂಬದೆಯೆ
ಮೊಗೆಮೊಗೆದು
ಮೇಲೆಸೆದು
ಆನಂದ ಪಡಲೆಂದು
ಚಿಂತಿಸುತ ನೀನಿಂದು
ಎಲ್ಲ ಮಣ್ಗೂಡಿಸಿಹೆ
-ಕಾಲ ಸಾಗುತ್ತಲಿದೆ!

ಕಾಲಜೇಡನು ನೇದ ಬಲೆಯು ಜೀವದ ಗೋರಿ
ಅದರ ಗರ್ಭದಲಿಹುದು ಮತ್ತೆ ಹಿಂತಿರುಗುವುದೆ?
ನಿನ್ನ ಕೊಚ್ಚೆಯ ಮೋರಿ
ಅಲ್ಲಿ ಮುತ್ತರಸುವುದೆ?

ಅಂತಾದರೂ ಇಂದು ಪ್ರೇಮದೆದೆ ಬಳ್ಳಿಯಲಿ
ನಿನ್ನ ಜೀವನವರಳೀ, ಹೃದಯದಾನಂದದುಲಿ
ಹೊರಹೊಮ್ಮುತಿರೆ
ಸುಖ ನಿನ್ನುಸಿರೆ
ಆಗುತಿರೆ
ಅದನೆ ನೆರೆ
ಮರೆತು ಕಳೆದುದ ನೆನೆದು
ದುಗುಡದೊಳಗಿಳಿದಿಳಿದು
ಎಲ್ಲ ಮಣ್ಗೂಡಿಸಿಹೆ
-ಕಾಲ ಸಾಗುತ್ತಲಿದೆ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪ್ರಯತ್ನ
Next post ನಿರೀಕ್ಷೆಯ ಮಮ್ಮಿಗಳು

ಸಣ್ಣ ಕತೆ

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

  • ಕತೆಗಾಗಿ ಜತೆ

    ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

cheap jordans|wholesale air max|wholesale jordans|wholesale jewelry|wholesale jerseys