Home / ಲೇಖನ / ಇತರೆ / ಪ್ರಯತ್ನ

ಪ್ರಯತ್ನ

ಪ್ರಿಯ ಸಖಿ,
ಯಾವುದೇ ಕೆಲಸಕ್ಕಾಗಲಿ ದೇವರು ನಮಗೆ ಯಾವಾಗ ಸಹಾಯ ಮಾಡುತ್ತಾನೆ?  ನಾವು ಮನಃಪೂರ್ತಿ ಪ್ರಯತ್ನಿಸಿದಾಗ ಮಾತ್ರ ತಾನೇ?  ಸುಮ್ಮನೆ ಕುಳಿತು ಎಲ್ಲಾ ತನ್ನಿಂದ ತಾನೇ ಆಗಲಿ ಎಂದರೆ ಇಲ್ಲಿ ಯಾವುದೇ ಚಮತ್ಕಾರವೂ ಆಗುವುದಿಲ್ಲ ಅಲ್ಲವೇ?  ಕವಿ ವಿ.ಜಿ. ಭಟ್ಟರು ತಮ್ಮ ಪ್ರಯತ್ನ ಎಂಬ ಕವನದಲ್ಲಿ

Prayatnaಪ್ರಯತ್ನ ಮಾಡಿರು
ಪ್ರಸಾದ ಬೇಡಿರು
ಆಗಬೇಡ ಆಲಸೀ
ಸಮರ್ಪಣದಲೇ
ಯತ್ನಿಸುತ್ತಿದ್ದರೆ
ಪರಮಾತ್ಮನಿಗೂ ಖುಷಿ

ಎಂದಿದ್ದಾರೆ. ನಮ್ಮ ಎಲ್ಲ ಕೆಲಸಕ್ಕೂ ದೇವರ ಸಹಾಯವನ್ನು ಸದಾ ಬೇಡುತ್ತಿರುತ್ತೇವೆ. ‘ದೇವರು ಬಯಸಿದರೆ ಯಾವ ಕೆಲಸವಾದರೂ ಆಗುತ್ತದೆ ಬಯಸದಿದ್ದರೆ ಯಾವ ಕೆಲಸವೂ ಆಗುವುದಿಲ್ಲ ಬಿಡು’ ಎಂದು ಸುಮ್ಮನೆ ಕುಳಿತರೆ, ಪ್ರಯತ್ನಕ್ಕೆ ಬೆಲೆಯೇ ಇಲ್ಲವೇ?  ನಾವು ಇನಿತೂ ಪ್ರಯತ್ನ ಪಡದೆ ತಟಸ್ಥರಾಗಿ ಕುಳಿತರೆ ಕೆಲಸ ಆಗುವುದಾದರೂ ಹೇಗೆ?

ಸಖಿ ನನಗೊಂದು ಮಕ್ಕಳ ನೀತಿ ಕತೆ ನೆನಪಾಗುತ್ತಿದೆ. ಐದಾರು ಬಾರಿ ಪರೀಕ್ಷೆಯಲ್ಲಿ ಫೇಲಾದ ಸೋಮಾರಿ ಹುಡುಗನೊಬ್ಬ ನಿಶ್ಚಲ ಮನದಿಂದ ಭಗವಂತನನ್ನು ಪ್ರಾರ್ಥಿಸಿ ತಾನು ಪಾಸಾಗುವಂತೆ ವರ ಪಡೆದ. ಹೇಗೂ ದೇವರು ಪಾಸು ಮಾಡಿಸುವೆನೆಂದಿದ್ದಾನೆ ಎಂದುಕೊಂಡು ಪರೀಕ್ಷೆಗೂ ಹೋಗದೇ ಮನೆಯಲ್ಲೇ ಕುಳಿತು ಫೇಲಾದ! ಮತ್ತೆ ದೇವರನ್ನು ಪ್ರಾರ್ಥಿಸಿ, ಸಿಟ್ಟಿನಿಂದ ತನ್ನನ್ನು ಫೇಲು ಮಾಡಿದ್ದಕ್ಕೆ ಕಾರಣ ಕೇಳಿದಾಗ ದೇವರು ನಗುತ್ತಾ “ನಾನೇನೋ ಪಾಸು ಮಾಡಿಸಲು ಒಪ್ಪಿದ್ದೆ, ಆದರೆ ನೀನು ಪರೀಕ್ಷೆಯಲ್ಲಿ ಬರೆಯುವ ‘ಪ್ರಯತ್ನ’ವನ್ನೇ ಮಾಡದಿದ್ದರೆ ನಾನು ಹೇಗೆ ನಿನ್ನನ್ನು ಪಾಸು ಮಾಡಿಸಲಿ? ಎಂದು ಕೇಳಿದ.

ಈ ಪುಟ್ಟ ಕಥೆಯಲ್ಲಿ ಮನುಷ್ಯ ಪ್ರಯತ್ನದ ಹಿರಿಮೆಯ ಎಂಥಾ ನೀತಿ ಅಡಗಿದೆಯಲ್ಲವೇ ಸಖಿ?

ಕವಿ ಷೇಕ್‍ಸ್ಪಿಯರ್ “How ever for a man goes, he must start from his own door”  ಒಬ್ಬ ವ್ಯಕ್ತಿ ಎಷ್ಟೇ ದೂರ ಹೋಗಲಿ ಅವನು ತನ್ನ ಬಾಗಿಲಿನಿಂದಲೇ ನಡೆಯಲು ಪ್ರಾರಂಭಿಸಬೇಕು ಎನ್ನುತ್ತಾನೆ. ಎಂಥಾ ಅರ್ಥಪೂರ್ಣ ಮಾತಲ್ಲವೇ!

ನಮ್ಮ ಹೊಟ್ಟೆ ತುಂಬಿಸಲು ನಮ್ಮ ಕೈಗಳಂದಲೇ ತಿನ್ನಲು ಭಗವಂತ ಕೈಗಳನ್ನು ನೀಡಿರುವಾಗ ಅವನೇ ಬಂದು ತಿನ್ನಿಸಲೆಂದು ಕಾಯುವುದು ಮೂರ್ಖತನವಲ್ಲವೇ?  ಪ್ರಯತ್ನದ ನಂತರದ ತೀರ್ಪು ಹೇಗೂ ಇರಬಹುದು. ಆದರೆ ಪ್ರಯತ್ನವಂತೂ ಬೇಕೆ ಬೇಕಲ್ಲವೇ? ಮನಃಪೂರ್ವಕ ಪ್ರಯತ್ನ ನೀಡುವ ಖುಷಿ ಇನ್ನಾವುದು ನೀಡುತ್ತದೆ? ಅದಕ್ಕೆಂದೇ ವಿನೋಬಾ ಬಾವೆಯವರು ‘ಪ್ರಾಪ್ತಿಗಿಂತಲೂ ಪ್ರಯತ್ನದ ಆನಂದ ಹೆಚ್ಚಿನದು’ ಎಂದಿದ್ದಾರೆ. ನಿಜವಲ್ಲವೇ ಸಖಿ?
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...