Home / ಲೇಖನ / ಇತರೆ / ಪ್ರಯತ್ನ

ಪ್ರಯತ್ನ

ಪ್ರಿಯ ಸಖಿ,
ಯಾವುದೇ ಕೆಲಸಕ್ಕಾಗಲಿ ದೇವರು ನಮಗೆ ಯಾವಾಗ ಸಹಾಯ ಮಾಡುತ್ತಾನೆ?  ನಾವು ಮನಃಪೂರ್ತಿ ಪ್ರಯತ್ನಿಸಿದಾಗ ಮಾತ್ರ ತಾನೇ?  ಸುಮ್ಮನೆ ಕುಳಿತು ಎಲ್ಲಾ ತನ್ನಿಂದ ತಾನೇ ಆಗಲಿ ಎಂದರೆ ಇಲ್ಲಿ ಯಾವುದೇ ಚಮತ್ಕಾರವೂ ಆಗುವುದಿಲ್ಲ ಅಲ್ಲವೇ?  ಕವಿ ವಿ.ಜಿ. ಭಟ್ಟರು ತಮ್ಮ ಪ್ರಯತ್ನ ಎಂಬ ಕವನದಲ್ಲಿ

Prayatnaಪ್ರಯತ್ನ ಮಾಡಿರು
ಪ್ರಸಾದ ಬೇಡಿರು
ಆಗಬೇಡ ಆಲಸೀ
ಸಮರ್ಪಣದಲೇ
ಯತ್ನಿಸುತ್ತಿದ್ದರೆ
ಪರಮಾತ್ಮನಿಗೂ ಖುಷಿ

ಎಂದಿದ್ದಾರೆ. ನಮ್ಮ ಎಲ್ಲ ಕೆಲಸಕ್ಕೂ ದೇವರ ಸಹಾಯವನ್ನು ಸದಾ ಬೇಡುತ್ತಿರುತ್ತೇವೆ. ‘ದೇವರು ಬಯಸಿದರೆ ಯಾವ ಕೆಲಸವಾದರೂ ಆಗುತ್ತದೆ ಬಯಸದಿದ್ದರೆ ಯಾವ ಕೆಲಸವೂ ಆಗುವುದಿಲ್ಲ ಬಿಡು’ ಎಂದು ಸುಮ್ಮನೆ ಕುಳಿತರೆ, ಪ್ರಯತ್ನಕ್ಕೆ ಬೆಲೆಯೇ ಇಲ್ಲವೇ?  ನಾವು ಇನಿತೂ ಪ್ರಯತ್ನ ಪಡದೆ ತಟಸ್ಥರಾಗಿ ಕುಳಿತರೆ ಕೆಲಸ ಆಗುವುದಾದರೂ ಹೇಗೆ?

ಸಖಿ ನನಗೊಂದು ಮಕ್ಕಳ ನೀತಿ ಕತೆ ನೆನಪಾಗುತ್ತಿದೆ. ಐದಾರು ಬಾರಿ ಪರೀಕ್ಷೆಯಲ್ಲಿ ಫೇಲಾದ ಸೋಮಾರಿ ಹುಡುಗನೊಬ್ಬ ನಿಶ್ಚಲ ಮನದಿಂದ ಭಗವಂತನನ್ನು ಪ್ರಾರ್ಥಿಸಿ ತಾನು ಪಾಸಾಗುವಂತೆ ವರ ಪಡೆದ. ಹೇಗೂ ದೇವರು ಪಾಸು ಮಾಡಿಸುವೆನೆಂದಿದ್ದಾನೆ ಎಂದುಕೊಂಡು ಪರೀಕ್ಷೆಗೂ ಹೋಗದೇ ಮನೆಯಲ್ಲೇ ಕುಳಿತು ಫೇಲಾದ! ಮತ್ತೆ ದೇವರನ್ನು ಪ್ರಾರ್ಥಿಸಿ, ಸಿಟ್ಟಿನಿಂದ ತನ್ನನ್ನು ಫೇಲು ಮಾಡಿದ್ದಕ್ಕೆ ಕಾರಣ ಕೇಳಿದಾಗ ದೇವರು ನಗುತ್ತಾ “ನಾನೇನೋ ಪಾಸು ಮಾಡಿಸಲು ಒಪ್ಪಿದ್ದೆ, ಆದರೆ ನೀನು ಪರೀಕ್ಷೆಯಲ್ಲಿ ಬರೆಯುವ ‘ಪ್ರಯತ್ನ’ವನ್ನೇ ಮಾಡದಿದ್ದರೆ ನಾನು ಹೇಗೆ ನಿನ್ನನ್ನು ಪಾಸು ಮಾಡಿಸಲಿ? ಎಂದು ಕೇಳಿದ.

ಈ ಪುಟ್ಟ ಕಥೆಯಲ್ಲಿ ಮನುಷ್ಯ ಪ್ರಯತ್ನದ ಹಿರಿಮೆಯ ಎಂಥಾ ನೀತಿ ಅಡಗಿದೆಯಲ್ಲವೇ ಸಖಿ?

ಕವಿ ಷೇಕ್‍ಸ್ಪಿಯರ್ “How ever for a man goes, he must start from his own door”  ಒಬ್ಬ ವ್ಯಕ್ತಿ ಎಷ್ಟೇ ದೂರ ಹೋಗಲಿ ಅವನು ತನ್ನ ಬಾಗಿಲಿನಿಂದಲೇ ನಡೆಯಲು ಪ್ರಾರಂಭಿಸಬೇಕು ಎನ್ನುತ್ತಾನೆ. ಎಂಥಾ ಅರ್ಥಪೂರ್ಣ ಮಾತಲ್ಲವೇ!

ನಮ್ಮ ಹೊಟ್ಟೆ ತುಂಬಿಸಲು ನಮ್ಮ ಕೈಗಳಂದಲೇ ತಿನ್ನಲು ಭಗವಂತ ಕೈಗಳನ್ನು ನೀಡಿರುವಾಗ ಅವನೇ ಬಂದು ತಿನ್ನಿಸಲೆಂದು ಕಾಯುವುದು ಮೂರ್ಖತನವಲ್ಲವೇ?  ಪ್ರಯತ್ನದ ನಂತರದ ತೀರ್ಪು ಹೇಗೂ ಇರಬಹುದು. ಆದರೆ ಪ್ರಯತ್ನವಂತೂ ಬೇಕೆ ಬೇಕಲ್ಲವೇ? ಮನಃಪೂರ್ವಕ ಪ್ರಯತ್ನ ನೀಡುವ ಖುಷಿ ಇನ್ನಾವುದು ನೀಡುತ್ತದೆ? ಅದಕ್ಕೆಂದೇ ವಿನೋಬಾ ಬಾವೆಯವರು ‘ಪ್ರಾಪ್ತಿಗಿಂತಲೂ ಪ್ರಯತ್ನದ ಆನಂದ ಹೆಚ್ಚಿನದು’ ಎಂದಿದ್ದಾರೆ. ನಿಜವಲ್ಲವೇ ಸಖಿ?
*****

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...