ಅರೇಬಿಯಾದ ಅರುಣೋದಯ

ಸುಪ್ರಭಾತ ಗೀತಗಳಿಲ್ಲದೆ
ಅಂಗಳಕೆ ಹೆಂಗಳೆಯರ ರಂಗವಲ್ಲಿಗಳಿಲ್ಲದೆ
ಓಡಾಡಿ ಹಾಲು ಕೊಡುವ
ಪೇಪರ ಒಗೆಯುವ
ತರಕಾರಿ ಎಂದು ಕೂಗುವ ಹುಡುಗರಿಲ್ಲದೆ
ಘಮಘಮಿಸುವ ಹೂಮೊಗ್ಗುಗಳ
ಯಾವೊಂದೂ ಸ್ವಾಗತವಿಲ್ಲದೆ
ಸಿಟ್ಟಿಗೆದ್ದ ಸೂರ್ಯ ಧಗಧಗಿಸುತ್ತಲೇ ಹುಟ್ಟುತ್ತಾನೆ.

ಸೂರ್ಯಪೂಜೆ
ಸೂರ್ಯ ನಮಸ್ಕಾರಗಳಿಲ್ಲದೆ
ಜನರ ನಡುವೆ ಏಳುತ್ತಾನೆ
ಗಿಡಗಳ ನೆರಳಿಲ್ಲದ ಅರಮನೆಗಳಿಗೆ
ಬಡವರ ತುಂಬಿದ ದೊಡ್ಡಿಗಳಿಗೆ
ಮುನ್ನುಗ್ಗುತ್ತಾನೆ.

ಬಿಳಿಯರ ಬೆತ್ತಲೆ ತೊಗಲಿಗೆ ಮುದ್ದಿಸಿ
(ಸನ್‍ಬಾಥ್) ಪ್ರೀತಿಸಿಕೊಳ್ಳುವ
ಕರಿಯರಿಂದ ಸಿಟ್ಟಿಗೆಬ್ಬಿಸಿಕೊಳ್ಳುವ
ಬುರ್ಕಾದ ಅರೇಬಿಯರಿಗೆ ಮುಟ್ಟದೆ
ಎತ್ತರೆತ್ತರಕ್ಕೇರುತ್ತಾನೆ.
ತನ್ನ ದೇಹದೊಳಗೆ
ದಿಗಂಬರ ಬಂಜರು ಮರುಭೂಮಿಗೆ
ತೆಕ್ಕೆಯಾಗಿ
ಅವಳೊಳಗೆ ಇವನೋ
ಇವನೊಳಗೆ ಅವಳೋ ಆಗಿ
ಕುರುಹುಗಳು ಮೊಳಕೆಯೊಡೆಯುತ್ತವೆ

ಪರಿಶುದ್ಧ ಸ್ಫಟಿಕ ಜಲ (ಓಯಸಿಸ್)
ಕಣ್ಣು ಮುಚ್ಚಾಲೆಯಾಡುತ್ತದೆ
ಅಲ್ಲೊಂದು ಇಲ್ಲೊಂದು
ಕ್ಯಾಕ್ಟಸ್‌ಗಳು ಬಿಚ್ಚಿಕೊಳ್ಳುತ್ತವೆ.
ಪ್ರೀತಿಯ ಜೀನು ಮುತ್ತಿನ
ಖರ್ಜೂರಗಳ ಮಳೆಯುದುರುತ್ತದೆ.
ಸುಖ ದುಃಖಗಳ ಸೋಂಕು ಮರೆತು
ಈಗೀಗ ಅರೇಬಿಯದ ಸೂರ್ಯ
ಬರೆಯವವರಿಗೆ ಜೀವಂತ ಕಾವ್ಯವಾಗುತ್ತಿದ್ದಾನೆ.

“ಬಿಸಿಲಿನ ಧಗೆಯಲ್ಲೂ
ಹರಿದ್ವರ್ಣಿಸಿದ ಕ್ಷಣಗಳಿಗೆ
ಬೆಲೆ ಕಟ್ಟಲಾದೀತೆ?
ಉಸುಕಿನ ಕಣಗಳೊಡನೆ
ಓಯಸಿಸ್ ಹನಿಗಳೊಡನೆ
ಬೆಳೆಸಿದ ಕ್ಯಾಕ್ಟಸ್‌ಗಳೂಡನೆ
ಕಡಲಾಳ ಕಡಲಿತ್ತರದೊಡನೆ
ಬೆರೆಸಿದ ಉಸುರಿಗೆ
ಬೆಲೆ ಕಟ್ಟಲಾದೀತೆ?”
*****

ಗಾಂಜಾ ಡಾಲಿ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post “ಎಲೆಕ್ಟ್ರಾನಿಕ್” ಯುಗದ ಆಶ್ಚರ್ಯ “ಗಣಕಯಂತ್ರ”
Next post ಲೋಕನೀತಿಯ ಮೀರಿ

ಸಣ್ಣ ಕತೆ

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…