Home / ಕವನ / ಕವಿತೆ / ಅರೇಬಿಯಾದ ಅರುಣೋದಯ

ಅರೇಬಿಯಾದ ಅರುಣೋದಯ

ಸುಪ್ರಭಾತ ಗೀತಗಳಿಲ್ಲದೆ
ಅಂಗಳಕೆ ಹೆಂಗಳೆಯರ ರಂಗವಲ್ಲಿಗಳಿಲ್ಲದೆ
ಓಡಾಡಿ ಹಾಲು ಕೊಡುವ
ಪೇಪರ ಒಗೆಯುವ
ತರಕಾರಿ ಎಂದು ಕೂಗುವ ಹುಡುಗರಿಲ್ಲದೆ
ಘಮಘಮಿಸುವ ಹೂಮೊಗ್ಗುಗಳ
ಯಾವೊಂದೂ ಸ್ವಾಗತವಿಲ್ಲದೆ
ಸಿಟ್ಟಿಗೆದ್ದ ಸೂರ್ಯ ಧಗಧಗಿಸುತ್ತಲೇ ಹುಟ್ಟುತ್ತಾನೆ.

ಸೂರ್ಯಪೂಜೆ
ಸೂರ್ಯ ನಮಸ್ಕಾರಗಳಿಲ್ಲದೆ
ಜನರ ನಡುವೆ ಏಳುತ್ತಾನೆ
ಗಿಡಗಳ ನೆರಳಿಲ್ಲದ ಅರಮನೆಗಳಿಗೆ
ಬಡವರ ತುಂಬಿದ ದೊಡ್ಡಿಗಳಿಗೆ
ಮುನ್ನುಗ್ಗುತ್ತಾನೆ.

ಬಿಳಿಯರ ಬೆತ್ತಲೆ ತೊಗಲಿಗೆ ಮುದ್ದಿಸಿ
(ಸನ್‍ಬಾಥ್) ಪ್ರೀತಿಸಿಕೊಳ್ಳುವ
ಕರಿಯರಿಂದ ಸಿಟ್ಟಿಗೆಬ್ಬಿಸಿಕೊಳ್ಳುವ
ಬುರ್ಕಾದ ಅರೇಬಿಯರಿಗೆ ಮುಟ್ಟದೆ
ಎತ್ತರೆತ್ತರಕ್ಕೇರುತ್ತಾನೆ.
ತನ್ನ ದೇಹದೊಳಗೆ
ದಿಗಂಬರ ಬಂಜರು ಮರುಭೂಮಿಗೆ
ತೆಕ್ಕೆಯಾಗಿ
ಅವಳೊಳಗೆ ಇವನೋ
ಇವನೊಳಗೆ ಅವಳೋ ಆಗಿ
ಕುರುಹುಗಳು ಮೊಳಕೆಯೊಡೆಯುತ್ತವೆ

ಪರಿಶುದ್ಧ ಸ್ಫಟಿಕ ಜಲ (ಓಯಸಿಸ್)
ಕಣ್ಣು ಮುಚ್ಚಾಲೆಯಾಡುತ್ತದೆ
ಅಲ್ಲೊಂದು ಇಲ್ಲೊಂದು
ಕ್ಯಾಕ್ಟಸ್‌ಗಳು ಬಿಚ್ಚಿಕೊಳ್ಳುತ್ತವೆ.
ಪ್ರೀತಿಯ ಜೀನು ಮುತ್ತಿನ
ಖರ್ಜೂರಗಳ ಮಳೆಯುದುರುತ್ತದೆ.
ಸುಖ ದುಃಖಗಳ ಸೋಂಕು ಮರೆತು
ಈಗೀಗ ಅರೇಬಿಯದ ಸೂರ್ಯ
ಬರೆಯವವರಿಗೆ ಜೀವಂತ ಕಾವ್ಯವಾಗುತ್ತಿದ್ದಾನೆ.

“ಬಿಸಿಲಿನ ಧಗೆಯಲ್ಲೂ
ಹರಿದ್ವರ್ಣಿಸಿದ ಕ್ಷಣಗಳಿಗೆ
ಬೆಲೆ ಕಟ್ಟಲಾದೀತೆ?
ಉಸುಕಿನ ಕಣಗಳೊಡನೆ
ಓಯಸಿಸ್ ಹನಿಗಳೊಡನೆ
ಬೆಳೆಸಿದ ಕ್ಯಾಕ್ಟಸ್‌ಗಳೂಡನೆ
ಕಡಲಾಳ ಕಡಲಿತ್ತರದೊಡನೆ
ಬೆರೆಸಿದ ಉಸುರಿಗೆ
ಬೆಲೆ ಕಟ್ಟಲಾದೀತೆ?”
*****

ಗಾಂಜಾ ಡಾಲಿ

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...