Home / ಕವನ / ಕವಿತೆ / ಅರೇಬಿಯಾದ ಅರುಣೋದಯ

ಅರೇಬಿಯಾದ ಅರುಣೋದಯ

ಸುಪ್ರಭಾತ ಗೀತಗಳಿಲ್ಲದೆ
ಅಂಗಳಕೆ ಹೆಂಗಳೆಯರ ರಂಗವಲ್ಲಿಗಳಿಲ್ಲದೆ
ಓಡಾಡಿ ಹಾಲು ಕೊಡುವ
ಪೇಪರ ಒಗೆಯುವ
ತರಕಾರಿ ಎಂದು ಕೂಗುವ ಹುಡುಗರಿಲ್ಲದೆ
ಘಮಘಮಿಸುವ ಹೂಮೊಗ್ಗುಗಳ
ಯಾವೊಂದೂ ಸ್ವಾಗತವಿಲ್ಲದೆ
ಸಿಟ್ಟಿಗೆದ್ದ ಸೂರ್ಯ ಧಗಧಗಿಸುತ್ತಲೇ ಹುಟ್ಟುತ್ತಾನೆ.

ಸೂರ್ಯಪೂಜೆ
ಸೂರ್ಯ ನಮಸ್ಕಾರಗಳಿಲ್ಲದೆ
ಜನರ ನಡುವೆ ಏಳುತ್ತಾನೆ
ಗಿಡಗಳ ನೆರಳಿಲ್ಲದ ಅರಮನೆಗಳಿಗೆ
ಬಡವರ ತುಂಬಿದ ದೊಡ್ಡಿಗಳಿಗೆ
ಮುನ್ನುಗ್ಗುತ್ತಾನೆ.

ಬಿಳಿಯರ ಬೆತ್ತಲೆ ತೊಗಲಿಗೆ ಮುದ್ದಿಸಿ
(ಸನ್‍ಬಾಥ್) ಪ್ರೀತಿಸಿಕೊಳ್ಳುವ
ಕರಿಯರಿಂದ ಸಿಟ್ಟಿಗೆಬ್ಬಿಸಿಕೊಳ್ಳುವ
ಬುರ್ಕಾದ ಅರೇಬಿಯರಿಗೆ ಮುಟ್ಟದೆ
ಎತ್ತರೆತ್ತರಕ್ಕೇರುತ್ತಾನೆ.
ತನ್ನ ದೇಹದೊಳಗೆ
ದಿಗಂಬರ ಬಂಜರು ಮರುಭೂಮಿಗೆ
ತೆಕ್ಕೆಯಾಗಿ
ಅವಳೊಳಗೆ ಇವನೋ
ಇವನೊಳಗೆ ಅವಳೋ ಆಗಿ
ಕುರುಹುಗಳು ಮೊಳಕೆಯೊಡೆಯುತ್ತವೆ

ಪರಿಶುದ್ಧ ಸ್ಫಟಿಕ ಜಲ (ಓಯಸಿಸ್)
ಕಣ್ಣು ಮುಚ್ಚಾಲೆಯಾಡುತ್ತದೆ
ಅಲ್ಲೊಂದು ಇಲ್ಲೊಂದು
ಕ್ಯಾಕ್ಟಸ್‌ಗಳು ಬಿಚ್ಚಿಕೊಳ್ಳುತ್ತವೆ.
ಪ್ರೀತಿಯ ಜೀನು ಮುತ್ತಿನ
ಖರ್ಜೂರಗಳ ಮಳೆಯುದುರುತ್ತದೆ.
ಸುಖ ದುಃಖಗಳ ಸೋಂಕು ಮರೆತು
ಈಗೀಗ ಅರೇಬಿಯದ ಸೂರ್ಯ
ಬರೆಯವವರಿಗೆ ಜೀವಂತ ಕಾವ್ಯವಾಗುತ್ತಿದ್ದಾನೆ.

“ಬಿಸಿಲಿನ ಧಗೆಯಲ್ಲೂ
ಹರಿದ್ವರ್ಣಿಸಿದ ಕ್ಷಣಗಳಿಗೆ
ಬೆಲೆ ಕಟ್ಟಲಾದೀತೆ?
ಉಸುಕಿನ ಕಣಗಳೊಡನೆ
ಓಯಸಿಸ್ ಹನಿಗಳೊಡನೆ
ಬೆಳೆಸಿದ ಕ್ಯಾಕ್ಟಸ್‌ಗಳೂಡನೆ
ಕಡಲಾಳ ಕಡಲಿತ್ತರದೊಡನೆ
ಬೆರೆಸಿದ ಉಸುರಿಗೆ
ಬೆಲೆ ಕಟ್ಟಲಾದೀತೆ?”
*****

ಗಾಂಜಾ ಡಾಲಿ

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...