ಲೋಕನೀತಿಯ ಮೀರಿ

ಲೋಕನೀತಿಯ ಮೀರಿ
ಬೆಳೆದ ಪ್ರೀತಿಗೆ ಬಾಯಿ ಎಲ್ಲಿದೆ?
ಮೂಕನೋವನು ಸಹಿಸಿ
ನಗೆನಟಿಸಿ ಮಾಡಿಕೋ ಕಲ್ಲೆದೆ

ಎಂಥ ಬೆಂಕಿಯೆ ಪ್ರೀತಿ
ನುಂಗಿ ತಾಳುವ ನೀತಿ
ಚುಚ್ಚುನುಡಿ ಇರಿನೋಟ ಮೂದಲೆ,
ಕರುಣೆಯೇ ಇರದೇನೊ
ಕರಿಯುವುದೆ ಗುರಿಯೇನೊ
ಕಾಯುತಿದೆ ಉರಿ ಎಣ್ಣೆ ಬಾಣಲೆ!

ಯಾರನೂ ನೋಯಿಸದೆ
ಏನನೂ ಆಶಿಸದೆ
ಜೀವಭಾವಕೆ ಬಾಗಿದುದಕೆ
ತಮ್ಮದೇ ಹೆಸರಿಟ್ಟು
ತಮ್ಮ ಕಲ್ಪನೆ ಕೊಟ್ಟು
ಕೊಲ್ಲುವರು ಜೀವ ಇರುವಂತೆಯೇ!

ಲೋಕನೀತಿಯ ಮೀರಿ ಬೆಳೆದ ಪ್ರೀತಿಗೆ ಬಾಯಿ ಎಲ್ಲಿದೆ?
ತನಗೆ ತಾನೇ ತಾಯಿ, ತನಗೆ ತಾನೇ ತಂದೆ ಅಲ್ಲದೆ?
*****

ಪುಸ್ತಕ: ನಿನಗಾಗೇ ಈ ಹಾಡುಗಳು

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅರೇಬಿಯಾದ ಅರುಣೋದಯ
Next post ನಗೆ ಡಂಗುರ – ೧೦೯

ಸಣ್ಣ ಕತೆ

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…