Home / ಕವನ / ಕವಿತೆ / ಬೆಳಗಿನ ವಾಯುವಿಹಾರ

ಬೆಳಗಿನ ವಾಯುವಿಹಾರ

ಇನ್ನೊಂದಿಷ್ಟು ದೂರದೂರ ಅಡ್ಡಾಡಿದರಾಯಿತೆಂದು
ನಸುಕಿನಲ್ಲಿಯೇ ವಾಕಿಂಗಿಗೆ ಹೊರಡುತ್ತೇನೆ
ಪುಕ್ಕಟೆಯಾಗಿ ನಾಯಿಮರಿಕೊಟ್ಟ
ಆಚೆ ಮನೆಯ ~ಆಂಥೋನಿ ಅವನ ಹೆಂಡತಿ ಮಕ್ಕಳು
ಗೇಟಿನ ಹತ್ತಿರ ನಿಂತು ನಯವಾಗಿ ಮಾತಿಗೆಳೆಯುತ್ತಾರೆ
ನಾಯಿಮರಿ ಊಟ ತಿಂಡಿಗೆ ಹೊಂದಿಕೊಂಡಿದೆಯೇ?
ಟಿನ್‌ಫುಡ್ ಮಾತ್ರಕೊಡಿ ಪ್ರೀತಿ ಹೆಚ್ಚು ಕೊಡಿ
ಇಂಜೆಕ್ಶನ್ ಹಾಕಿಸಿದ್ರಾ, ಈಗ ಸ್ವಲ್ಪ ದೊಡ್ಡದಾಗಿರಬೇಕಲ್ಲ !

ಹೀಗೆ ಇನ್ನೂ ಇನ್ನೂ
ನಾಯಿಮರಿ ಬೆಳೆಸುವ ಪಾಠಗಳು ಪ್ರಶ್ನೆಗಳು
ಪುಕ್ಕಟೆಯಾಗಿಯೇ ನಾಯಿಮರಿ ತೆಗೆದುಕೊಂಡಿದ್ದಕ್ಕೆ
ಅವರೊಂದಿಗೆ ಮಾತನಾಡುತ್ತಿದ್ದಂತೆಯೇ
ಬಿಸಿಲೇರುತ್ತದೆ ಮನೆಗೆ ಮರಳುತ್ತೇನೆ.

ಅಪರೂಪಕ್ಕೆ ಆಗಾಗ ನಮ್ಮ ಬಡಾವಣೆಯಲ್ಲಿಯೇ
ವಾಕಿಂಗಿಗೆ ಹೊರಡುತ್ತೇನೆ
ಎದುರಾಗುತ್ತಾರೆ ಸಾಕಿದ ತಮ್ಮ ನಾಯಿಗಳನು
ಬೆರೆಯವರ ಮನೆಗಳ ಮುಂದೆ ಏನೆಲ್ಲ ಮಾಡಲು ಬಿಟ್ಟು
ಮಾತು ಹರಟೆ ಹೊಡೆಯುವ ಪರಿಚಿತರು
ಸಾಹಿತ್ಯಾಸಕ್ತರೋ ಎನ್ನುವಂತೆ
ಹೇಗೆ ನಡೆದಿದೆ ನಿಮ್ಮ ಬರವಣಿಗೆ?
ನಡೆಸಬೇಡಿ ಓಡಿಸಿ ಓಡಿಸಿ
ಭಾಷಣ ಕೊರೆಯುತ್ತಲೇ ಇರುತ್ತಾರೆ
ಬಿಸಿಲೇರುತ್ತದೆ ಮನೆಗೆ ಮರಳುತ್ತೇನೆ.

ಪಶ್ಚಿಮದ ಕಡೆಗೆ ತುಂಬಿದ ಕೆರೆ
ಕೆಂಪು ಬಿಳಿ ನೈದಿಲೆಗಳ ಸಂಭ್ರಮ ತಂಗಾಳಿ
ಆರೋಗ್ಯಕ್ಕೆ ಇನ್ನೂ ಒಳ್ಳೆಯದೆಂದು
ಚುಮುಚುಮು ನಸುಕಿನಲ್ಲಿಯೇ ಹೊರಡುತ್ತೇನೆ
ನೈದಿಲೆಗಳ ಕದ್ದ ಕಳ್ಳರು ಪೇಟೆಗೆ ಓಡುವ ಭರಾಟೆ
ಸೆರೆಮನೆ ದಿನಗಳು ಕಳೆದು ಬಂದವರ
ಕತ್ತೆ ಮಸೆಯುವ ಮಾತುಕತೆಗಳು
ಕೂಲಿಕಾರರು ಚೊಂಬು ಖಾಲಿಮಾಡಿ ಎದುರಾಗುವ ದೃಶ್ಯ
ನೆಮ್ಮದಿಯೆನಿಸುವುದಿಲ್ಲ; ಮನೆಗೆ ಮರಳುತ್ತೇನೆ.

ಪೂರ್ವದ ಬೆಟ್ಟದ ಬದಿಯಲೊಂದು ದೇವಾಲಯ
ಮನಸ್ಸಿಗೆ ಪ್ರಶಾಂತವೆಂದು ಹೊರಡುತ್ತೇನೆ
ಆಗಲೇ ದೇವರನ್ನೆಬ್ಬಿಸುವ ಕ್ಯಾಸೆಟ್ಟುಗಳ ಕಿರುಚಾಟ
ಇರಲಿ ಹೇಗೋ ಬಂದಿದ್ದೆನಲ್ಲಾ
ದೇವರಿಗೊಂದು ಸೆಲ್ಯೂಟ್ ಹೊಡೆದರಾಯಿತೆಂದು
ಮೆಟ್ಟಲೇರುತ್ತಿದ್ದಂತೆಯೇ ಪೂಜಾರಿ
ಕರ್ಪೂರ ಹಾಕಿ ತಟ್ಟೆ ಹಿಡಿದೇ ಬಿಡುತ್ತಾನೆ
ಬರಿಗೈಯಲ್ಲಿ ಹೋದ ನಾನು ಒಳಗೆ ಹೋಗದೆ
ಇನ್ನೊಂದೆರಡು ಸುತ್ತೂ ಹೊಡೆಯದೆ ಮನೆಗೆ ಮರಳುತ್ತೇನೆ.

ಬೆಳಗಿನ ವಾಯುವಿಹಾರ ಯಾಕೋ ಒಮ್ಮೊಮ್ಮೆ
ಹೀಗೆ ಕಿರಿ ಕಿರಿ ಅದಕ್ಕೆಂದೇ ಈಗ-
ರೂಮಿನಲ್ಲಿ ಹುಲ್ಲಿನಂತೆ ಕಾಣುವ ಹಸಿರು ಕಾರ್ಪೆಟ್ ಹಾಸಿ
ಮೇಲೆ ಟ್ರೆಡ್‌ಮಿಲ್ (ವಾಕಿಂಗ್ ಬೆಲ್ಟ್) ಇಟ್ಟು
ಗೋಡೆಗಳಿಗೆಲ್ಲ ಸುರ್ಯೋದಯ, ಕೆರೆ, ನದಿ ಗಾರ್ಡನ್
ಗಿಡಗಂಟೆಗಳ ಪೋಸ್ಟರ್ ಹಚ್ಚಿ ಇದೇ ಸೂಕ್ತ ಜಾಗವೆಂದು
ಟ್ರೆಡ್ಮಿಲ್‌ನಲ್ಲಿಯೇ ಬೆಳಗಿನ ವಾಕಿಂಗಿಗೆ ಹೊರಡುತ್ತೇನೆ.
*****

ಪುಸ್ತಕ: ಇರುವಿಕೆ

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...