Home / ಲೇಖನ / ವಿಜ್ಞಾನ / ಒಬ್ಬರ ತಲೆ ಇನ್ನೊಬ್ಬರಿಗೆ !

ಒಬ್ಬರ ತಲೆ ಇನ್ನೊಬ್ಬರಿಗೆ !

ಶಿವಪುರಾಣದಲ್ಲಿ ಗಜಾನನ ತಲೆಗೆ ಆನೆಯ ಸೊಂಡಿಲಿನ ತಲೆ ಜೋಡಿಸಿದ ಕಥೆ. ಮಹಾಭಾರತದಲ್ಲಿ……………. ದಂತಕಥೆಗಳನ್ನು ಕೇಳಿದ್ದೇವೆ. ಅವು ಎಷ್ಟು ಸತ್ಯವಾದ ಕಥೆಗಳು ಎಂಬುವುದು ವಿಜ್ಞಾನಿಗಳೇ ಹೇಳಬೇಕು. ಮೂಲ ಒಂದಾದರೆ ಬಾಯಿಯಿಂದ ಬಾಯಿಗೆ ಹರಡುತ್ತ ವೈಭವೀಕರಣಗೊಂಡು, ಚಕಿತಗೂಳಿಸುತ್ತವೆ. ಆದಾಗ್ಯೂ ಅಂದಿನ ಕಾಲದಲ್ಲಿಯೇ ತಲೆಗಳ ಕಸಿಗೊಳಿಸುವ ತಂತ್ರವಿತ್ತೆಂದು ಪುರಾಣಗಳು ಹೇಳುತ್ತವೆ. ಆದರೆ ೨೦ನೇ ಶತಮಾನದವರೆಗೆ ಪ್ರಪಂಚದಲ್ಲಿ ತಲೆಯ ಕಸಿಗೊಳಿಸುವ ನಿಜವಾದ ಘಟನೆ ಕಂಡುಬಂದಿದ್ದಿಲ್ಲ. ಆದರೆ ಇಂದು ವಿಜ್ಞಾನಯುಗ ತಾಂತ್ರಿಕ ಆವಿಷ್ಕಾರಗಳೊಂದಿಗೆ ಏನೆಲ್ಲ ಸಾಧನೆಗಳನ್ನು ಮಾಡುತ್ತಿರುವ ಸಂದರ್ಭ ಇಂದು ತಲೆಕಸಿಗೊಳಿಸುವ ವಿಜ್ಞಾನ ಈದೀಗ ಬಂದಿದೆ. ಆಮೇರಿಕಾದ
ಶಸ್ತ್ರಚಿಕಿತ್ಸಕ ಡಾ|| ರಾಬರ್ಟ್ ಜೆ. ವೈಟ್ ಇವರು ಅನೇಕ ಸಣ್ಣಜೀವಿಗಳ ಮೇಲೆ ಪ್ರಯೋಗ ಮಾಡಿ ಈ ಸತ್ಯವನ್ನು ಬಹಿರಂಗಗೊಳಿಸಿದ್ದಾರೆ. ತಲೆಯನ್ನು ಕಡಿದಾಗ ಕೆಳಗಿನ ಮುಂಡದ ಭಾಗದ ಅಂಗಾಗಗಳು ತಮ ಕಾರ್ಯವನು ಸ್ಥಗಿತಗೊಳಿಸುತ್ತವೆ. ಆದರೆ ತಲೆಬಾಗ ಮಾತ್ರ ಇನ್ನೂ ಜೀವಂತವಾಗಿರುತ್ತದೆ. ಇನ್ನೊಂದೆಡೆ ಓರ್ವವ್ಯಕ್ತಿಯ ಮಿದುಳು ಮೃತಗೊಂಡು ಇತರ ಆಂಗಗಳು ಕಾರ್ಯಶೀಲವಾಗಿದ್ದರೆ, ಅಂತಹ ರೋಗಿಗೆ ಇನ್ನೊಬ್ಬ ವ್ಯಕ್ತಿಯ ಶಿರಸ್ಸನ್ನು ಯಶಸ್ವಿಯಾಗಿ ಕಸಿ ಮಾಡಬಹುದೆನ್ನುವುದು ಅವರ ಹೇಳಿಕೆಯಾಗಿದೆ.

ಈ ಮೊದಲು ಈ ಪ್ರಯೋಗಗಳನ್ನು ಮಂಗಗಳ ಮೇಲೆ ನಡೆಯಿಸಿ ಯಶಸ್ವಿಯಾಗಿದ್ದಾರೆ. ಇದರಂತೆ ಮನುಷ್ಯರ ಮೇಲೂ ಸಹ ಯಶಸ್ವಿಯಾಗಿ ಚಿಕಿತ್ಸೆ
ಮಾಡಬಹುದು ಎಂಬ ಆತ್ಮವಿಶ್ವಾಸವನ್ನು ಹೊಂದಿದ್ದಾರೆ. ಇದು ಪರಿಶೀಲನಾ ಹಂತದಲ್ಲಿದೆ.

ಅಮೇರಿದ ‘ಕ್ಲಿವ್‌ ಲ್ಯಾಂಡ್’ ವಿಶ್ವವಿದ್ಯಾನಿಲಯದ ಡಾ|| ವೈಟ್ ಅವರು ಮಸ್ತಿಷ್ಕದ ಜೈವ ರಾಸಾಯನಿಕ ಸಂರಚನೆಯ ಬಗೆಗೆ ಅತ್ಯಂತ ಸೂಕ್ಷ್ಮ ಅಧ್ಯಯನ ಕೈಗೊಂಡಿದ್ದಾರೆ. ಮಸ್ತಿಷ್ಕದಲ್ಲಿ ರೋಗ ನಿರೋಧಕ ಶಕ್ತಿ ಇತರ ಅಂಗಗಳಿಗಿಂತಲೂ ಹೆಚ್ಚಾಗಿರುತ್ತದೆ. ಮೆದುಳಿನ ಪ್ರತ್ಯಾರೋಹಣದ ನಂತರ ಶರೀರದಿಂದ ಅಸ್ವೀಕಾರ ಮಾಡುವ ಸಾಧ್ಯತೆ ಇತರ ಅಂಗಗಳಿಗಿಂತಲೂ ಕಡಿಮೆ. ರೋಗಗ್ರಸ್ತ ಶರೀರದಿಂದ ತಲೆಯನ್ನು ಬೇರ್ಪಡಿಸಿ ಒಂದು ಯಂತ್ರಕ್ಕೆ ಅಳವಡಿಸಲಾಗುತ್ತದೆ. ನಂತರ ಆದನ್ನು ಹೊಸ ದೇಹದ ಭಾಗಕ್ಕೆ ಅಳವಡಿಸುವವರೆಗೆ ಅದಕ್ಕೆ ಕೃತಕ ಶ್ವಾಸಕೋಶ, ಹೃದಯ, ಮೂತ್ರಕೋಶ, ಯಕೃತ್ತುಗಳ ಕಾರ್ಯದ ಸಂಪರ್ಕವನ್ನು ಮುಂದುವರಿಸಲಾಗುತ್ತದೆ. ನಂತರವೇ ಅದನ್ನು ಮುಂಡಕ್ಕೆ ಸೇರ್ಪಡೆ ಮಾಡಲಾಗುತ್ತದೆ. ಅನಾರೋಗ್ಯದ ಶರೀರವನ್ನು ಬೇರ್ಪಡಿಸಿ ಹೊಸ ಶರೀರವನ್ನು ಅಳವಡಿಸಿದಲ್ಲಿ ಮಿದುಳಿನ ಶಕ್ತಿ ಇನ್ನಷ್ಟು ಪ್ರಖರಗೊಳ್ಳುತ್ತದೆಂದು ಡಾ|| ವೈಟ್ ತಿಳಿಸುತ್ತಾರೆ. ಆದರೆ ಅದರ ಮೂಲಸ್ಥಿತಿ ಮಾತ್ರ ಹಾಗೆಯೇ ಇರುತ್ತದೆ. ವ್ಯಕ್ತಿಯು ಮಾತನಾಡುವ ಕೇಳುವ, ನೋಡುವ, ಅನುಭವಿಸುವ ಕಾರ್ಯವು ಮಸ್ತಿಷ್ಕದಿಂದಲೆ ಸಂಚಲಿತಗೊಳ್ಳುತ್ತದೆ. ಹೀಗೆ ಅಳವಡಿಸಿದಾಗ ಅವರವರ ಸ್ಮೃತಿಗಳು ಮಿದುಳಿನಲ್ಲಿಯೇ ಸುರಕ್ಷಿತವಾಗಿರುತ್ತವೆ. ಹೀಗೆ ಕಸಿಮಾಡಿದ ನಂತರವೂ ಏನೂ ವ್ಯತ್ಯಾಸವಾಗಲಾರವು. ಶರೀರದ ಇತರೆ ಯಾವುದೇ ಅಂಗಗಳಿಗೆ ತಮ್ಮದೇ ಆದ ಸ್ಮೃತಿ ಆಥವಾ ಭಾವನೆಗಳಿರುವುದಿಲ್ಲ. ಈ ಪ್ರಯೋಗ ಮನುಷ್ಯರ ಮೇಲೆ ಯಶಸ್ವಿಯಾಗಿ ನಡೆದು ಬಂದರೆ ವೈದ್ಯಕೀಯ ರಂಗದಲ್ಲಿ ಹೊಸಗಾಳಿ ಬೀಸಿದಂತಾಗುತ್ತದೆ.
*****

ಪುಸ್ತಕ: ವಿಜ್ಞಾನದ ವಿಸ್ಮಯ ಶೋಧಗಳು

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...