Home / ಲೇಖನ / ವಿಜ್ಞಾನ / ಸೊಳ್ಳೆಯ ಕತೆ

ಸೊಳ್ಳೆಯ ಕತೆ

ಸೊಳ್ಳೆ ಒಂದಾದರೂ ಅದರ ಅಡ್ಡ ಪರಿಣಾಮ ಹತ್ತಾರು. ಹೀಗಾದರೆ ಹೇಗೆಂದು ದೇಶ ವಿದೇಶದ ಜನ ತಲೆಗೆ ಕೈಹೊತ್ತು ಕುಳಿತು ಬಿಟ್ಟಿದ್ದಾರೆ.

ಸೊಳ್ಳೆಯಲ್ಲಿ ಹಲವು ಬಗೆ, ಕೆಲವು ವಿಷಕಾರಿ ಸೊಳ್ಳೆಗಳಿವೆಯೆಂದು ಸೊಳ್ಳೆ ಕಡಿತದಿಂದ ಚಿಕೂನ್ ಗುನ್ಯಾ ಡೆಂಗೆಯಂತ ತೀವ್ರತರದ ಜ್ವರ, ನೆಗಡಿ, ಕೆಮ್ಮು ಇತ್ಯಾದಿ ಕಾಣಿಸಿಕೊಳ್ಳವುದರಿಂದ ಅದನ್ನು ಕೇವಲ ನಿರ್ಲಕ್ಷಿಸುವಂತಿಲ್ಲ ಎಂದು ಲಂಡನ್ ವೈದ್ಯರು ಈಗಾಗಲೇ ದೃಢಪಡಿಸಿರುವರು.

ಸೊಳ್ಳೆ ಕಡಿತದಿಂದ ಕಣ್ಣಿನ ದೃಷ್ಟಿಯೂ ಕಳೆದು ಕೊಳ್ಳುವ ಅಪಾಯವಿದೆಯೊಂದು ಲಂಡನ್‌ಲ್ಲೊಂದು ಇಂತಹ ಪ್ರಕರಣವೊಂದು ಈಗಾಗಲೇ ವರದಿಯಾಗಿ ಇಡೀ ವಿಶ್ವವನ್ನೇ ಗಢಗಢ ನಡುಗಿಸಿರುವುದು.

ಹೌದು! ೬೯ ವರ್ಷದ ಲಂಡನ್ ಮಹಿಳೆಯೊಬ್ಬರು ರಜೆಯ ಪ್ರವಾಸದಲ್ಲಿ ಕೆರಿಬಿಯನ್ ರಾಷ್ಟ್ರಕ್ಕೆ ತೆರಳಿದ್ದಳು. ಅಲ್ಲಿ ಸೊಳ್ಳೆ ಕಡಿತದಿಂದ ಚಿಕೂನ್‌ಗುನ್ಯಾಗೆ ತುತ್ತಾಗಿ ಕಣ್ಣನ್ನೇ ಕಳೆದುಕೊಂಡಿದ್ದಾಳೆ!

೨೦೧೪ರಲ್ಲಿ ಕೆರಿಬಿಯನ್ ದ್ವೀಪ ಗ್ರೆನಡಾಗೆ ತೆರಳಿದ್ದ ಮಹಿಳೆಗೆ ಸೊಳ್ಳೆ ಕಡಿದಿವೆ. ಬಳಿಕ ಆಕೆಗೆ ಜ್ವರ, ಮಂಡಿ, ಮಣೆಕಟ್ಟುಗಳ ನೋವು, ಸುಸ್ತು ಕಾಡಲಾರಂಭಿಸಿದೆ. ಇದಾದ ಸ್ವಲ್ಪ ದಿನಗಳ ಬಳಿಕ ಬಲಗಣ್ಣಿನಲ್ಲಿ ದೃಷ್ಟಿದೋಷ ಕಾಣಿಸಿಕೊಂಡಿದೆ.

ಆಗಸ್ಟ್ ೨೦೧೫ ರಲ್ಲಿ ಸ್ವದೇಶಕ್ಕೆ ಹಿಂದಿರುಗಿದ ನಂತರ ಅವರ ಕಣ್ಣಿಗೆ ಸಮಸ್ಯೆ ಮತ್ತಷ್ಟು ಬಿಗಡಾಯಿಸಿತು! ವೈದ್ಯರ ಬಳಿಗೆ ಹೋದಾಗ ಇದು ಚಿಕೂನ್ ಗೂನ್ಯಾಗೆ ಜ್ವರದಿಂದ ಈ ದೋಷ ಕಾಣಿಸಿಕೊಂಡಿದೆಯೆಂದು ದೃಢಪಟ್ಟಿದೆ. ಚಿಕೂನ್‌ಗುನ್ಯಾಗ್ ತುತ್ತಾದವರು ಜೀವನ ಪರ್ಯಂತ ಕೆಲ ಸಮಸ್ಯೆಗಳಿಗೆ ಖಂಡಿತ ತುತ್ತಾಗುವುದುಂಟು. ಇದರಲ್ಲಿ ದೃಷ್ಟಿ ಕಳೆದುಕೊಳ್ಳುವ ಸಾಧ್ಯತೆಯೂ ದಟ್ಟವಾಗಿದೆಯೆಂದು ವೈದ್ಯರು ದೃಢಪಡಿಸಿರುವರು.

ಅಬ್ಬಾ! ಸೊಳ್ಳೆಗಳೆ… ಇನ್ನು ಬರುಬರುತ್ತಾ ಏನೆಲ್ಲಾ ಅನಾಹುತ ಮಾಡಬಲ್ಲವೆಂಬುದನ್ನು ಈಗಲೇ ಊಹಿಸುವುದು ಕಷ್ಟ ಸಾಧ್ಯವಾದರೂ ಸೊಳ್ಳೆಗಳಿಂದ ಬಲು ಎಚ್ಚರಿಕೆ ವಹಿಸುವುದೂ ಸಣ್ಣಪುಟ್ಟ ಮಕ್ಕಳನ್ನು ರಕ್ಷಿಸುವುದೂ ನಮ್ಮೆಲ್ಲರ ಕರ್ತವ್ಯಗಳಲ್ಲಿ ಒಂದು ಅಲ್ಲವೇ??
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...