Home / ಲೇಖನ / ವಿಜ್ಞಾನ / ಎಲೆಕ್ಟ್ರಾನಿಕ್‌ನಲ್ಲಿ ಕ್ರಾಂತಿ: ನೋಟುಗಳನ್ನು ಎಣಿಸುವ ಯಂತ್ರ

ಎಲೆಕ್ಟ್ರಾನಿಕ್‌ನಲ್ಲಿ ಕ್ರಾಂತಿ: ನೋಟುಗಳನ್ನು ಎಣಿಸುವ ಯಂತ್ರ

ಬ್ಯಾಂಕುಗಳಲ್ಲಿ ಅಥವಾ ದೊಡ್ಡ ವ್ಯಾಪಾರಿ ಕಂಪನಿಗಳಲ್ಲಿ ಲಕ್ಷ ಲಕ್ಷ ಕೋಟಿ ಹಣವನ್ನು ಅತಿಬೇಗನೆ ಎಣಿಸಬೇಕಾಗುತ್ತದೆ. ಮನುಷ್ಯನ ಎಣಿಸುವಿಕೆಯ ವೇಗದಲ್ಲಿ ಸ್ವಲ್ಪ ನೆನಪು ಹುಸಿಯಾದರೂ ಎಣಿಕೆ ತಪ್ಪಾಗಿ ಮುಂದೆ ಅನೇಕ ಸಮಸ್ಯೆಗಳಿಗೆ ಗುರಿಯಾಗಬೇಕಾಗುತ್ತದೆ. ಜತೆಗೆ ಸಮಯವೂ ಹೆಚ್ಚುಬೇಕಾಗುತ್ತದೆ. ಇದನ್ನೆಲ್ಲ ಪರಿಹರಿಸಿ ಕರಾರುವಾಕ್ಕಾದ ಫಲಿತಾಂಶ ನೀಡುವ ವಿಜ್ಞಾನದ ಹೊಸ ಅವಿಷ್ಕಾರವು “ನೋಟುಗಳನ್ನು ಎಣಿಸುವ ಯಂತ್ರವನ್ನೇ ಕಂಡುಹಿಡಿದಿದೆ. ಸಮಯದ ಉಳಿತಾಯ, ಕರಾರುವಾಕ್ಕು ಲೆಕ್ಕ ಜಾಣ್ಮೆಯ ಲೆಕ್ಕಾಚಾರಕ್ಕಾಗಿ ಈ ಯಂತ್ರ ಬಹುಬೇಗನೆ ಜನಪ್ರಿಯವಾಗತೊಡಗಿದೆ. ಮತ್ತು ಬಹುಸಾಮರ್ಥ್ಯವನ್ನು
ಹೊಂದಿದೆ. ಇದೊಂದು ಎಲೆಕ್ಟ್ರಾನಿಕ್ ಯಂತ್ರ. ಈ ಯಂತ್ರದ ವಿಶಿಷ್ಟತೆ ಎಂದರೆ ಹೊಸ ಮತ್ತು ಹಳೆಯ, ಸುಕ್ಕುಗಟ್ಟಿದ ಮತ್ತು ಹರಿದು ಹೋಗಿರುವ ಬಿಡಿಯಾಗಿರುವ ಮತ್ತು ಕಟ್ಟಿರುವ ಎಲ್ಲ ವಿಧವಾದ ನೋಟುಗಳನ್ನು ಎಣಿಸಬಹುದು.

ಇದು ಹಗುರವಾದ ಅಚ್ಚುಕಟ್ಟಾದ ಯಂತ್ರ. ಇದಕ್ಕೆ ಹೆಚ್ಚಿನ ಸ್ಥಳಬೇಕಿಲ್ಲ ಬ್ಯಾಂಕಿನಲ್ಲಿ ಪ್ರತಿಯೊಬ್ಬ ಖಜಾಂಚಿಯು ಎಣಿಸಿದ ನೋಟುಗಳು ಸಂಖ್ಯೆಯನ್ನು ಈ ಯಂತ್ರ ಮುದ್ರಿಸಿಡುತ್ತದೆ. ಜಪಾನಿನ ಮತ್ತು ಸಂಯುಕ್ತ ಸಂಸ್ಥಾನದ ಅನೇಕ ಸಂಸ್ಥೆಗಳು ದೊಡ್ಡ ಪ್ರಮಾಣದಲ್ಲಿ ನೋಟುಗಳನ್ನು ಎಣಿಸುವ ಯಂತ್ರಗಳನ್ನು ತಯಾರಿಸುತ್ತಿದ್ದು ವಿಶ್ವವ್ಯಾಪಿಯಾಗುತ್ತಲಿವೆ.

“ಟೆಲ್ಲಾಕ್-೫” ಎಂಬುದು ಸುಪ್ರಸಿದ್ಧವಾದ ನೋಟು ಎಣಿಸುವ ಯಂತ್ರ. “ಮುಸಾ೮” ಜಪಾನ್ ಸಂಸ್ಥೆಯಲ್ಲಿ ತಯಾರಿಸಲಾಗುತ್ತಿದ್ದು ಜೆ. ಇಂಜಿನಿಯರಿಂಗ್ ಇಂಡಿಯಾ ಲಿಮಿಟೆಡ್ ಮತ್ತು ಕ್ಯಾಲ್ಕ್ಯೂಲಸ್ ಲಿ|| ಗಳಿಂದ ಸರಬರಾಜಾಗುತ್ತದೆ. ಈ ಯಂತ್ರವನ್ನು ಆಗಲೇ ಭಾರತೀಯ ರಿಜರ್ವ್ ಬ್ಯಾಂಕಿನಲ್ಲಿ ಸ್ಥಾಪಿಸಲಾಗಿದೆ. ಇದರಂತೆ “ಯೂನಿಟೇಕ್” “ಜಯಿಸುಮಿ” “O.B.M- 1010” (ನೋಟು ಎಣಿಸುವ ಯಂತ್ರ) ಇದು ಒಂದು ನಿಮಿಷಕ್ಕೆ ಒಂದು ಸಾವಿರ ನೋಟುಗಳನ್ನು ಎಣಿಸುತ್ತದೆ. ನೋಟುಗಳ ಸಂಖ್ಯೆ ಹಾಗೂ ಹಣದ ಮೊತ್ತವನ್ನು ತೋರಿಸುವ ಏಳು ಅಂಕಿ L.E.D). ಪ್ರದರ್ಶನ ಇದರಲ್ಲಿದೆ. ಒಂದರಿಂದ ೯೯೯ ನೋಟುಗಳನ್ನು ಎಣಿಸುವಾಗ ಸ್ವಯಂ ಚಾಲಿತ ನಿಲುಗಡೆಯನ್ನು ಒದಗಿಸುತ್ತದೆ. G.N.E-1-W ಮತ್ತು G.E.2-8/9F.B-200 ಈ ಎರಡು ಹೆಸರಿನ ನೋಟು ಎಣಿಸುವ ಯಂತ್ರಗಳನ್ನು ಗ್ಲೋರಿ ಜಪಾನ್ ಸಂಸ್ಥೆಯು ತಯಾರಿಸುತ್ತಿದೆ. ಈ ಯಂತ್ರಗಳು ಕ್ರಮವಾಗಿ ಒಂದು ನಿಮಿಷಕ್ಕೆ ೧,೫೦೦ ಮತ್ತು ೧,೦೦೦ ನೋಟುಗಳನ್ನು ಎಣಿಸುವ ವೇಗವನ್ನು ಹೊಂದಿವೆ. ಸಮಗ್ರ ಪ್ರದಕ್ಷಿಣೆ (ಸರ್ಕ್ಯೂಟ್) ಮತ್ತು ಸಿಲಿಕಾನ್ ವಲ್ಕಲ ಕ್ರಾಂತಿಯಿಂದ ಇವೆಲ್ಲ ಸಾಧ್ಯವಾಗಿದೆ.
*****

ಲೇಖಕ: ಚಂದ್ರಶೇಖರ್ ಧೂಲೇಕರ್

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...