Home / ಕವನ / ಕವಿತೆ / ರೆಡ್ ಸೀ

ರೆಡ್ ಸೀ

ಕೆಂಪು ಸಮುದ್ರದ ಕನ್ಯೆ
ಸೂರ್ಯನಿಗೆ ಪ್ರಾರ್ಥಿಸಿಕೊಂಡಾಗ
ಕನಸಿನ ಮುತ್ತುಗಳು ಮಾಲೆಯಾಗಿ
ಜೇನು ಹೊಳೆಯಾಗಿ ಕಾಮನ ಬಿಲ್ಲಾಗಿ
ಬೆಳದಿಂಗಳಾಗಿ
ಬಿಸಿಯುಸಿರಿನಲಿ ಕೆನ್ನೆ ಕಚ್ಚಿದ
ಕೆಂಪು ಕೆನ್ನೆ ಅರಳಿಕೊಂಡು
ಮತ್ತೇರಿದಾಗ
ಕನ್ಯೆಯ ಒಡಲಾಳದಲ್ಲಿ
ಮುಂಜಾವಿನ ಮೊಗ್ಗುಗಳು
ಅರಳಿ ಬಸಿರಿನಲಿ
ಮುತ್ತು ರತ್ನ ಹವಳಗಳ ದಿಬ್ಬಾಗಿ
ನಾಚಿಕೆಯಿಂದ ಪ್ರಸವಿಸಿದ
ಜೀವಂತ ವಿರಾಟ್ ಸ್ವರೂಪಿಣಿ
“ಎಷ್ಟು ಬಣ್ಣ ಎಷ್ಟು ಬೆಡಗು
ಕಡಲೇ ನಿನ್ನ ಒಡಲಲಿ
ಹರೆಯ ತರುವ ಕನಸಿನಂಥ
ಸೊಗಸು ನಿನ್ನ ಮಡಿಲಲಿ”
ಬಿಸಿಲು ಕಿರಣಗಳ ಕಾಮನ ಬಿಲ್ಲಿನಡಿ
ಕಣ್ಣು ಮುಚ್ಚಾಲೆಯ ಹವಳಗಳು
ಮುಟ್ಟಿದರೆ ಮುನಿಯುವ ಜೆಲ್ಲಿ ಫಿಶ್
ಸಮುದ್ರದಾಳದ ನಕ್ಷತ್ರ ಮೀನು
ಆಳಕ್ಕಿಳಿದಾಗ ಬೆವರು, ಜಿಗುಟು
ಸೀ ವೀಡ್ಸ್ ಸ್ನಾನದ ಹೊಸತನ
ತಿಳಿ ನೀರಿನ ಬಣ್ಣದ ಮನೆಯ
ಸುಂದರಿಯರು ನಗುವಾಗ
ಸ್ತಬ್ಧ ಆಳಗಳ ಅಂತ
ಗೊತ್ತಿರದ ಹಾಯಿಗಳು
ದೂರದ ಲಂಗರಿಗೆ ಸಿಕ್ಕಿಸಿಕೊಳ್ಳಲು
ಓಡುತ್ತವೆ.

(ಸೌದಿ ಅರೇಬಿಯಾ ಹಾಗೂ ಆಫ್ರಿಕಾಗಳ ನಡುವಿರುವ ‘ಕೆಂಪು ಸಮುದ್ರ’ ಕುರಿತು)
*****
ಪುಸ್ತಕ: ಗಾಂಜಾ ಡಾಲಿ

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...