Home / ಕವನ / ಕವಿತೆ / ದೀಪಾವಳಿ

ದೀಪಾವಳಿ

ಬಂದಿತು ದೀಪಾವಳಿ ಮನೆಮನೆಯೊಳು
ಕುಡಿಯಾಡಿಸುತಿದೆ ನರುಬೆಳಕು
ಮಿರುಸೊಡರಿನ ಮಿತಮಾನದೊಳಿರುಳನು
ಮೊಗೆದು ಸುರಿವ ಮೋದದ ತಳಕು.
ಕತ್ತಲೊಡನೆ ಪಂತವಿಲ್ಲವಿವಕೆ
ತಮದೊಡನಜ್ಜಿಯಾಟವಾಡುವಂಥ ಬಯಕೆ
ಇವ ಹೆಚ್ಚುತಿರುವ ಮಕ್ಕಳಂತೆ ಮುದ್ದು
ಈ ನೋಟವೆನ್ನ ಮನದ ಜಡಕೆ ಮದ್ದು.
ಧಗ ಧಗ ನುರಿದುರವಣಿಸುತ ಬಂದಾ
ಹರಿಚಕ್ರವನಸುವಿಂ ಶಮಿಸಿ
ಆ ಬೆಂಕಿಯ ಲಯರೂಕ್ಷತೆಗೀ ತೆರ
ಸುಂದರ ಸೌಮ್ಯತೆಯಳವಡಿಸಿ
ಭವಗರದಾಗರ ತಾನೆನೆ ಬಾಳುತ
ಕೊನೆಗೀ ಹಬ್ಬದ ಸೊದೆಯಿತ್ತ
ನರಕನ ನೆನವುದು ಮನ ನಲಿದೀ ದಿನ
ಬೆಳಕಿನ ತೆನೆಗಳ ಬೆಳೆಸುತ್ತ.
ಮದಿಸಿದ ಬಲಿಯನು ತುಳಿದವನವನಾಳಾದವನವನು
ಅಣುಹೃದಯದಿ ಪವಡಿಸುತೀ ಸೃಷ್ಟಿಯ ಕನಸಾಂತವನು
ತಾನೆಚ್ಚರೆ ಜಗವೆಲ್ಲವ ಬರಿತೇಜದಿ ತುಂಬವನು
ಆ ಎಡೆವಿಲಯಾಗ್ನಿಗು ಈ ಎಡೆ ಹಣತೆಗು ಇಂಬವನು.
ಈ ತೆರನಾದಾ ವಿಶ್ವ ವಿಚಿತ್ರನ ನೆನೆವೆ
ಆ ತೇಜದ ಕಾರುಣ್ಯದ ರೂಪದ ಈ ದೀಪಾವಳಿಯೊಳು ನಲಿವೆ
ವಿಜ್ಞಾನದ ಮದವಾಂತಾಸುರವದೊಳು ವಿಲಯಾಗ್ನಿಯ
ಮೆರೆಸುವ ಲೋಕವ ಮರೆವೆ
ಇರುಳೊಡನೀತೆರ ಬಹುವರ್ಣದ ಲಾಲಿತ್ಯದೊಳಾಡುವ
ಬೆಳಕಿಗೆ ಜಯವೆರೆವೆ.
*****
Tagged:

Leave a Reply

Your email address will not be published. Required fields are marked *

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...

ಮಧ್ಯಾಹ್ನದ ಆರು ತಾಸಿನ ಸಮಯ. ಬಿಸಿಲು ರಣಗುಟ್ಟುತ್ತಿತ್ತು. ಕಲ್ಲವನು ಉರುವಲ ಹೊರೆಯೊಂದನ್ನು ಹೊತ್ತು ತಂದು, ಗುಡಿಸಲಿನ ಮುಂದೆ ಒಗೆದು ಬೇವಿನ ಗಿಡದ ನೆರಳಿನಲ್ಲಿ ಕುಳಿತು ಉಸ್ಸೆಂದು ಉಸುರುಗರೆದಳು. ಗುಡಿಸಲಿನೊಳಗಿಂದ ನಾಲ್ಕಾರು ಚಿಕ್ಕ ಮಕ್ಕಳು ಹೊರಗೆ ಹಾತೊರೆದು ಬಂದು, “ಅವ್...