Home / ಕವನ / ಕವಿತೆ / ದೀಪಾವಳಿ

ದೀಪಾವಳಿ

ಬಂದಿತು ದೀಪಾವಳಿ ಮನೆಮನೆಯೊಳು
ಕುಡಿಯಾಡಿಸುತಿದೆ ನರುಬೆಳಕು
ಮಿರುಸೊಡರಿನ ಮಿತಮಾನದೊಳಿರುಳನು
ಮೊಗೆದು ಸುರಿವ ಮೋದದ ತಳಕು.
ಕತ್ತಲೊಡನೆ ಪಂತವಿಲ್ಲವಿವಕೆ
ತಮದೊಡನಜ್ಜಿಯಾಟವಾಡುವಂಥ ಬಯಕೆ
ಇವ ಹೆಚ್ಚುತಿರುವ ಮಕ್ಕಳಂತೆ ಮುದ್ದು
ಈ ನೋಟವೆನ್ನ ಮನದ ಜಡಕೆ ಮದ್ದು.
ಧಗ ಧಗ ನುರಿದುರವಣಿಸುತ ಬಂದಾ
ಹರಿಚಕ್ರವನಸುವಿಂ ಶಮಿಸಿ
ಆ ಬೆಂಕಿಯ ಲಯರೂಕ್ಷತೆಗೀ ತೆರ
ಸುಂದರ ಸೌಮ್ಯತೆಯಳವಡಿಸಿ
ಭವಗರದಾಗರ ತಾನೆನೆ ಬಾಳುತ
ಕೊನೆಗೀ ಹಬ್ಬದ ಸೊದೆಯಿತ್ತ
ನರಕನ ನೆನವುದು ಮನ ನಲಿದೀ ದಿನ
ಬೆಳಕಿನ ತೆನೆಗಳ ಬೆಳೆಸುತ್ತ.
ಮದಿಸಿದ ಬಲಿಯನು ತುಳಿದವನವನಾಳಾದವನವನು
ಅಣುಹೃದಯದಿ ಪವಡಿಸುತೀ ಸೃಷ್ಟಿಯ ಕನಸಾಂತವನು
ತಾನೆಚ್ಚರೆ ಜಗವೆಲ್ಲವ ಬರಿತೇಜದಿ ತುಂಬವನು
ಆ ಎಡೆವಿಲಯಾಗ್ನಿಗು ಈ ಎಡೆ ಹಣತೆಗು ಇಂಬವನು.
ಈ ತೆರನಾದಾ ವಿಶ್ವ ವಿಚಿತ್ರನ ನೆನೆವೆ
ಆ ತೇಜದ ಕಾರುಣ್ಯದ ರೂಪದ ಈ ದೀಪಾವಳಿಯೊಳು ನಲಿವೆ
ವಿಜ್ಞಾನದ ಮದವಾಂತಾಸುರವದೊಳು ವಿಲಯಾಗ್ನಿಯ
ಮೆರೆಸುವ ಲೋಕವ ಮರೆವೆ
ಇರುಳೊಡನೀತೆರ ಬಹುವರ್ಣದ ಲಾಲಿತ್ಯದೊಳಾಡುವ
ಬೆಳಕಿಗೆ ಜಯವೆರೆವೆ.
*****
Tagged:

Leave a Reply

Your email address will not be published. Required fields are marked *

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...