Home / ಕವನ / ಕವಿತೆ / ರೀತಿ ನೀತಿ (ಅಮೆರಿಕ)

ರೀತಿ ನೀತಿ (ಅಮೆರಿಕ)


ಅಮೆರಿಕದ ಬಗೆಗೆ ಅದೆಷ್ಟು ಪ್ರೀತಿ
ವೈಭವೀಕರಿಸಿ ಹೇಳುವ ರೀತಿಗೆ ಬೆರಗಾಗಬೇಕು
ವಿಜ್ಞಾನ ತಂತ್ರಜ್ಞಾನ ಮೇರೆಮೀರಿದ
ಡಾಲರ್ ಹೊಳೆ ಸಮಯ ಪ್ರಜ್ಞೆಗೆ
ಟಾಮ್ ಹ್ಯಾರಿಗಳ ನಡುವೆ ಎರಡನೆಯ
ದರ್ಜೆಯ ನಾಣಿ ಸೀನರ ಹೋರಾಟ ಗೋಳಾಟ
ಹಣಕ್ಕೆ ಸಮಾಧಾನ ಪಡುವ ಗತಿ.

ಅಮೆರಿಕದ ಬಗೆಗೆ ಅದೆಷ್ಟು ಪ್ರೀತಿ
ಸಾಧಕ ಸಂಶೋಧಕರಿಗೆ ತವರು ಸಂಶಯವಿಲ್ಲ
ಏನೆಲ್ಲ ಸೌಕರ್ಯ ಆಂತರಿಕ ನೆಮ್ಮದಿ
ಜಾತಿಮತಗಳ ಪ್ರಭಾವ ಪರಿಚಯಗಳ
ಗೋಜಿಲ್ಲದೆ ಸಾಮರ್ಥ್ಯ ಬುದ್ಧಿಜೀವಿ
ವ್ಯಕ್ತಿಗೆ ಸ್ವಾಗತವೋ ಸ್ವಾಗತ
ಸ್ವಾಭಿಮಾನ ಸ್ವಾವಲಂಬನೆಗಳ ಮಂತ್ರದ
ದಂಡ ಹಿಡಿದೇ ಮುನ್ನುಗ್ಗುವ ಗುರಿ

ಅಮೆರಿಕದ ಬಗೆಗೆ ಅದೆಷ್ಟು ಪ್ರೀತಿ
ಭೋಗಜೀವನ ಮೊಜು ಮಜದ ಹುಚ್ಚುಹೊಳೆ
ಹರೆಯಕ್ಕಿಂತ ಮೊದಲೇ ಹೆರುವ
ಸ್ವಚ್ಛಂದ ಜೀವನಾನುಭವ
ಗಳಿಸುವುದಕ್ಕೆ ಮೊದಲೇ ವಿಚ್ಛೇದನ
ಬೇಕೆಂದಾಗ ಬರಬಾರದು ಮಕ್ಕಳ ಮನೆಗೆ
ಕರಳು ಕರಕಲಾಗುತ್ತಿರುವ ವೃದ್ಧಾಶ್ರಮಿಗಳಿಗೆ
ಹೂಗುಚ್ಛಗಳ ರವಾನೆ, ಮತ್ತೆ ಕೆಲಸವೋ
ಮಾನಿನಿಯ ತೆಕ್ಕೆಯೋ ಅಥವಾ ಸಮಾಜ ರೀತಿಯೊ.


ಅಹುದಹುದು ಮತ್ತೆಲ್ಲಿಯೂ ಕಾಣಲಾರೆವು
ಅಮೆರಿಕ ಪ್ರಜಾಪ್ರಭುತ್ವವು ನೀಡಿರುವ
ಸಮಾನತೆ ಜನತಾ ಸ್ವಾತಂತ್ರ್ಯ ಅಭಿವ್ಯಕ್ತಿ ಸ್ವಾತಂತ್ರ್ಯ
ಎಲ್ಲವೂ ತನಗೇ ಇರಲೆನ್ನುವ ಸ್ವಾರ್ಥ
ನೆಪ‌ಒಡ್ಡಿ ಹದ್ದಿನಂತೆ ಎರಗುವ ಹುನ್ನಾರ
ಹಿಂದುಳಿದ ನಾಡುಗಳ ಮೇಲೆ
ಜಾಗತಿಕ ವಲಯದಲಿ ದಿಗ್ಭ್ರಮೆ
ಅದರ ಒಳನೀತಿಗೆ
ಯುದ್ಧ ಹಿಂಸೆ ದಬ್ಬಾಳಿಕೆ ಒತ್ತಡಗಳು ಪಟ್ಟಿ ಮೀರಿದ್ದು
ಸಾವು ನೋವುಗಳ ಆಕ್ರಂದನ ಕಣ್ಣೀರು
ಮಕ್ಕಳು ಮರಿಗಳ ರೋಧನ
ಎದೆ ಸೀಳುವುದಿಲ್ಲಿ.

ಹಿರೋಷಿಮಾ ನಾಗಾಸಾಕಿಯರ ಸುಟ್ಟದೇಹ
ತುಂಡು ತುಂಡಾದ ಇರಾಕ್ ಕ್ಯೂಬಾ ಪ್ಯಾಲಸ್ಟೈನ್
ವಿಯೆಟ್ನಾಂ ಮಾರ್ಷಾಲ್ಸ್ ದ್ವೀಪಗಳ ತಲ್ಲಣ
ಯಾಕಿಷ್ಟೊಂದು ಸಾಮ್ರಾಜ್ಯಾಶಾಹಿ ಧೋರಣೆ
ಯಾಕಿಷ್ಟೊಂದು ದಬ್ಬಾಳಿಕೆ
ಮಾತು ಕೇಳದವರಿಗೆ ಏನೇನೋ ನೆಪಗಳೊಡ್ಡಿ
ಒತ್ತಡಕೆ ಸಿಲುಕಿಸುವ ನೀತಿ
ಬಿನ್‌ಲ್ಯಾಡನ್ ಬೆನ್ನುಹತ್ತಿ
ಅಪಘಾನಿಸ್ತಾನ ಗುಡ್ಡಬೆಟ್ಟಗಳೆಲ್ಲ ಸುಡುಗಾಡಾದದ್ದು
ಒಬ್ಬ ಸದ್ದಾಂಗಾಗಿ
ಇರಾಕ್ ಹೊತ್ತಿ ಉರಿದದ್ದು
ಇನ್ನೂ ಇನ್ನೂ ಸಾವಿರ ಬಾಣಗಳು
ಬತ್ತಳಿಕೆಯಲಿ ಕಾಯುತಿವೆ
ಅಣುಬಾಂಬ್, ಯುರೇನಿಯಂ ಶಸ್ತ್ರಾಸ್ತ್ರಗಳ
ಹಪಹಪಿಕೆ ಕಿರುಬೆರಳಿನಲಿ


ಒಂದೆಡೆ ತಾನು ತನ್ನದೆನ್ನುವ ಮದ
ಮತ್ತೊಂದೆಡೆ ಕೇಳದವರ ಹೊಸಕಿಹಾಕುವ ಮತ್ಸರ
ಒಮ್ಮೆ ಅಮೆರಿಕ ಎಂದರೆ….
*****

ಪುಸ್ತಕ: ಇರುವಿಕೆ

Tagged:

Leave a Reply

Your email address will not be published. Required fields are marked *

ಸರ್‍ಕಸ್ಸು ಮುಗಿದರೂ ಅವನು ಅಲ್ಲಿಯೇ ಕುಳಿತಿದ್ದ. ಎಲ್ಲಾ ಎದ್ದು ಹೋಗಿದ್ದರು. ಎರಡನೇ ಷೋ ಆರಂಭವಾಗಲು ಕೆಲವೇ ಸಮಯ ಉಳಿದಿತ್ತು. ಅವನ ಕಣ್ಣುಗಳು ಏನನ್ನೋ ಹುಡುಕುತ್ತಿದ್ದವು. ಆ ಸರ್‍ಕಸ್ಸಿನ ಹುಡುಗಿ ಪ್ರವೇಶಿಸಿ ಓಡಿ ಬಂದು ಎರಡು ಬಾರಿ ಲಾಗಾ ಹಾಕಿ ಇವನ ಮುಂದೆಯೇ ನಿಂತಂತಾಯಿತು. ಆಕೆಯ...

“ಸುಭದ್ರೆ, ನೀನು ಎಂದು….” ದೈನ್ಯವಾಣಿಯಿಂದ ಕೇಳಿಕೊಂಡ ಶ್ರೀಧರ. “ತಡೆ ಶ್ರೀಧರ. ಹ್ಞ. ಹತ್ತಿರ ಬರಬೇಡ. ಪ್ರತಿಯೊಂದು ಕಾರ್ಯಕ್ಕೂ ಮುಹೂರ್ತ ಬರಬೇಕು; ಸ್ವಲ್ಪ ಕಾಲ ತಡೆ. ಒಮ್ಮೆ ಹೇಳಿದೆ: ನಾನು ನಿನ್ನವಳೆಂದು, ನಂಬಿಕೊ.” “ಎಷ್ಟು ದಿನ ಈ ನ...

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...