Home / ಕವನ / ಕವಿತೆ / ರೀತಿ ನೀತಿ (ಅಮೆರಿಕ)

ರೀತಿ ನೀತಿ (ಅಮೆರಿಕ)


ಅಮೆರಿಕದ ಬಗೆಗೆ ಅದೆಷ್ಟು ಪ್ರೀತಿ
ವೈಭವೀಕರಿಸಿ ಹೇಳುವ ರೀತಿಗೆ ಬೆರಗಾಗಬೇಕು
ವಿಜ್ಞಾನ ತಂತ್ರಜ್ಞಾನ ಮೇರೆಮೀರಿದ
ಡಾಲರ್ ಹೊಳೆ ಸಮಯ ಪ್ರಜ್ಞೆಗೆ
ಟಾಮ್ ಹ್ಯಾರಿಗಳ ನಡುವೆ ಎರಡನೆಯ
ದರ್ಜೆಯ ನಾಣಿ ಸೀನರ ಹೋರಾಟ ಗೋಳಾಟ
ಹಣಕ್ಕೆ ಸಮಾಧಾನ ಪಡುವ ಗತಿ.

ಅಮೆರಿಕದ ಬಗೆಗೆ ಅದೆಷ್ಟು ಪ್ರೀತಿ
ಸಾಧಕ ಸಂಶೋಧಕರಿಗೆ ತವರು ಸಂಶಯವಿಲ್ಲ
ಏನೆಲ್ಲ ಸೌಕರ್ಯ ಆಂತರಿಕ ನೆಮ್ಮದಿ
ಜಾತಿಮತಗಳ ಪ್ರಭಾವ ಪರಿಚಯಗಳ
ಗೋಜಿಲ್ಲದೆ ಸಾಮರ್ಥ್ಯ ಬುದ್ಧಿಜೀವಿ
ವ್ಯಕ್ತಿಗೆ ಸ್ವಾಗತವೋ ಸ್ವಾಗತ
ಸ್ವಾಭಿಮಾನ ಸ್ವಾವಲಂಬನೆಗಳ ಮಂತ್ರದ
ದಂಡ ಹಿಡಿದೇ ಮುನ್ನುಗ್ಗುವ ಗುರಿ

ಅಮೆರಿಕದ ಬಗೆಗೆ ಅದೆಷ್ಟು ಪ್ರೀತಿ
ಭೋಗಜೀವನ ಮೊಜು ಮಜದ ಹುಚ್ಚುಹೊಳೆ
ಹರೆಯಕ್ಕಿಂತ ಮೊದಲೇ ಹೆರುವ
ಸ್ವಚ್ಛಂದ ಜೀವನಾನುಭವ
ಗಳಿಸುವುದಕ್ಕೆ ಮೊದಲೇ ವಿಚ್ಛೇದನ
ಬೇಕೆಂದಾಗ ಬರಬಾರದು ಮಕ್ಕಳ ಮನೆಗೆ
ಕರಳು ಕರಕಲಾಗುತ್ತಿರುವ ವೃದ್ಧಾಶ್ರಮಿಗಳಿಗೆ
ಹೂಗುಚ್ಛಗಳ ರವಾನೆ, ಮತ್ತೆ ಕೆಲಸವೋ
ಮಾನಿನಿಯ ತೆಕ್ಕೆಯೋ ಅಥವಾ ಸಮಾಜ ರೀತಿಯೊ.


ಅಹುದಹುದು ಮತ್ತೆಲ್ಲಿಯೂ ಕಾಣಲಾರೆವು
ಅಮೆರಿಕ ಪ್ರಜಾಪ್ರಭುತ್ವವು ನೀಡಿರುವ
ಸಮಾನತೆ ಜನತಾ ಸ್ವಾತಂತ್ರ್ಯ ಅಭಿವ್ಯಕ್ತಿ ಸ್ವಾತಂತ್ರ್ಯ
ಎಲ್ಲವೂ ತನಗೇ ಇರಲೆನ್ನುವ ಸ್ವಾರ್ಥ
ನೆಪ‌ಒಡ್ಡಿ ಹದ್ದಿನಂತೆ ಎರಗುವ ಹುನ್ನಾರ
ಹಿಂದುಳಿದ ನಾಡುಗಳ ಮೇಲೆ
ಜಾಗತಿಕ ವಲಯದಲಿ ದಿಗ್ಭ್ರಮೆ
ಅದರ ಒಳನೀತಿಗೆ
ಯುದ್ಧ ಹಿಂಸೆ ದಬ್ಬಾಳಿಕೆ ಒತ್ತಡಗಳು ಪಟ್ಟಿ ಮೀರಿದ್ದು
ಸಾವು ನೋವುಗಳ ಆಕ್ರಂದನ ಕಣ್ಣೀರು
ಮಕ್ಕಳು ಮರಿಗಳ ರೋಧನ
ಎದೆ ಸೀಳುವುದಿಲ್ಲಿ.

ಹಿರೋಷಿಮಾ ನಾಗಾಸಾಕಿಯರ ಸುಟ್ಟದೇಹ
ತುಂಡು ತುಂಡಾದ ಇರಾಕ್ ಕ್ಯೂಬಾ ಪ್ಯಾಲಸ್ಟೈನ್
ವಿಯೆಟ್ನಾಂ ಮಾರ್ಷಾಲ್ಸ್ ದ್ವೀಪಗಳ ತಲ್ಲಣ
ಯಾಕಿಷ್ಟೊಂದು ಸಾಮ್ರಾಜ್ಯಾಶಾಹಿ ಧೋರಣೆ
ಯಾಕಿಷ್ಟೊಂದು ದಬ್ಬಾಳಿಕೆ
ಮಾತು ಕೇಳದವರಿಗೆ ಏನೇನೋ ನೆಪಗಳೊಡ್ಡಿ
ಒತ್ತಡಕೆ ಸಿಲುಕಿಸುವ ನೀತಿ
ಬಿನ್‌ಲ್ಯಾಡನ್ ಬೆನ್ನುಹತ್ತಿ
ಅಪಘಾನಿಸ್ತಾನ ಗುಡ್ಡಬೆಟ್ಟಗಳೆಲ್ಲ ಸುಡುಗಾಡಾದದ್ದು
ಒಬ್ಬ ಸದ್ದಾಂಗಾಗಿ
ಇರಾಕ್ ಹೊತ್ತಿ ಉರಿದದ್ದು
ಇನ್ನೂ ಇನ್ನೂ ಸಾವಿರ ಬಾಣಗಳು
ಬತ್ತಳಿಕೆಯಲಿ ಕಾಯುತಿವೆ
ಅಣುಬಾಂಬ್, ಯುರೇನಿಯಂ ಶಸ್ತ್ರಾಸ್ತ್ರಗಳ
ಹಪಹಪಿಕೆ ಕಿರುಬೆರಳಿನಲಿ


ಒಂದೆಡೆ ತಾನು ತನ್ನದೆನ್ನುವ ಮದ
ಮತ್ತೊಂದೆಡೆ ಕೇಳದವರ ಹೊಸಕಿಹಾಕುವ ಮತ್ಸರ
ಒಮ್ಮೆ ಅಮೆರಿಕ ಎಂದರೆ….
*****

ಪುಸ್ತಕ: ಇರುವಿಕೆ

Tagged:

Leave a Reply

Your email address will not be published. Required fields are marked *

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...