Home / ಕವನ / ಕವಿತೆ / ಬೇರುಗಳು

ಬೇರುಗಳು

ಈಗಷ್ಟೆ ಪತ್ರ ಬಂತು
ಮಿ. ಪ್ಯಾಟ್ರಿಕ್‌ನ ಬರವಣಿಗೆ
ಕತ್ತೆ ಕಾಲು ನಾಯಿಕಾಲು ಆನೆಕಾಲು
ಎಲ್ಲಿಂದ ಓದುವುದು ಎಲ್ಲಿ ನಿಲ್ಲಿಸುವುದು – ಛೇ-
ಅರ್ಥವಾಗುವುದೇ ಇಲ್ಲ ಬೇಗ ಅಮೆರಿಕದವ
ಮಾತುಗಳು ಸ್ಪಷ್ಟ ಸಾಕಷ್ಟು ಮಾತನಾಡಬಹುದು
ಜೋಕ್ಸು ಮಾತುಕತೆಗಳೇನೇ ಇರಲಿ ದೊಡ್ಡ ಬಾಯಿಯವ

ಬರೆದಿದ್ದಾನೆ
೫೦ ಡಿಗ್ರಿ ಬಿಸಿಲಿನ ಹೊಡೆತಕ್ಕೂ
ತೆಂಗಿನ ಮರ ಬೆಳೆದುನಿಂತಿದೆ ಆಕಾಶದೆತ್ತರ
ಹಣ್ಣುಗಳು ಬಿಡುತಿವೆ ಪಪಾಯಿ ಗಿಡದಲಿ
ಸೊಂಪಾಗಿ ಹಬ್ಬಿದೆ ಮಲ್ಲಿಗೆ ಬಳ್ಳಿ
ಅದೇಕೋ ಮುನಿಸಿಕೊಂಡಿದೆ ಮಾವಿನಗಿಡ
ಮೇಲೆಳುತ್ತಲೇ ಇಲ್ಲ ಸಲಹೆ ಏನಾದರೂ….
ಸ್ಯಾಂಡಲ್‌ವುಡ್ ಆನೆಗಳ ಹಿಂಡು
ಹೆಂಡತಿಗೆ ಕೊಟ್ಟ ಬಿಂದಿ ಪೊಟ್ಟಣ
ರೇಶ್ಮೆ ಸೀರೆ ನಿಮ್ಮೂರಿಗೆ ಏಳೆಯುತ್ತವೆ.
ಜೊತೆಗೆ ಕಳಿಸಿದ್ದಾನೆ ಇವುಗಳೆಲ್ಲದರ ಫೋಟೋ.

ಭಾವಪರವಶಳಾಗಿ ಹೃದಯ ತುಂಬಿತು
ವಿದೇಶಕ್ಕೆ ಹೊರಟ ಅಂದು
ನೆಲದಿಂದ ಹೆಜ್ಜೆ ಕೀಳುವಾಗ
ನೆಲ-ಜಲದ ಋಣ ನೆನಪಿಗಿರಲೆಂದು
ಬೊಗಸೆ ಮಣ್ಣು ನಾಲ್ಕಾರು ಬೇರುಗಳು
ನನ್ನೊಂದಿಗಿರಲೆಂದು ನೀರಿನಲ್ಲೆದ್ದೆದ್ದಿ ಒಯ್ದಿದ್ದೆ

ಕಿಡಕಿಯಾಚೆ ಸೊಂಪಾದ ಗಿಡಬಳ್ಳಿಗಳು
ಕೈತೋಟದ ತುಂಬ ಹೂವುಗಳು
ವರ್ಷಗಳುರುಳುರುಳಿ ಬೆಳೆಯತೊಡಗಿದವು
ಮನೆಗೆ ಹೊಸದಾಗಿ ಬರುತ್ತಿರುವ
ಮಿ. ಪ್ಯಾಟ್ರಿಕ್‌ನಿಗೆ ಹಸಿರು ಹಸ್ತಾಂತರಿಸಿ
ಇವು ನಮ್ಮ ಮಕ್ಕಳೆಂದು ಹೇಳಿ ಬಂದಾಗಿತ್ತು.

ಮತ್ತೆ ಮುಂದುವರೆಸಿದ್ದಾನೆ-
ಹಾಲೆಂಡಿನ ಫರ್ಟಿಲೈಸರ್
ಅಮೆರಿಕದ ಇನ್‌ಸೆಕ್ಟಿಸೈಡ್
ಫಿಲಿಪೈನಿನ ಗಾರ್ಡನರ್
ಇಲ್ಲಿಯ ಡಿಸ್ಟಿಲ್ಡ್ ವಾಟರ್
ನಿಮ್ಮ ಬೇರುಗಳು ಇನ್ನೂ ಇನ್ನೂ ನೆಲದಾಳಕ್ಕಿಳಿಯುತ್ತಿವೆ
ಟೊಂಗೆಗಳೆಲ್ಲ ದಿಕ್ಕು ದಿಕ್ಕಿಗೂ ಚಾಚಿ
ಕೊಡುತಿವೆ ಚಿಗುರು ಹೂವು ಕಾಯಿ ಹಣ್ಣು
ಸುಂದರ ಅತೀ ಸುಂದರ

ಈ ನೆಲದ ಮಣ್ಣು ಬೇರು ಆ ನೆಲದ ನೀರು ಗಾಳಿ
ಬಾಯಿಪಾಠವಾಗಿ ಹೋಗಿದೆ ಪತ್ರ
ದೂರದೇಶಕೆ ಹೊರಡುವ ಮಕ್ಕಳಿಗೂ
ಭಾರವಾದರೂ ಇರಲೆಂದು
ಬೊಗಸೆಮಣ್ಣು ನಾಲ್ಕಾರು ಬೇರು ಕಳಿಸಿಬಿಡುತ್ತೇನೆ.
*****
ಪುಸ್ತಕ: ಇರುವಿಕೆ

Tagged:

Leave a Reply

Your email address will not be published. Required fields are marked *

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...