ಗುಬ್ಬಚ್ಚಿ ಅಂದರೇನಮ್ಮ

ಪಾಪ ! ಅವು ಸುಸ್ತಾಗಿಯೇ ಹಾರುತ್ತಿದ್ದರೂ
ಮುದ್ದಾಗಿಯೇ ಕಾಣುವ ಹಕ್ಕಿಗಳು
ತೀರ ಇತ್ತೀಚೆಗೆ ಒಮ್ಮಿಂದೊಮ್ಮೆಲೆ
ಎಲ್ಲಿಯೋ ಹೋಗಿಬಿಟ್ಟವು.

ಎಲ್ಲೆಲ್ಲೂ ಬೋರು ಹೊಡೆದ ಪುರಾವೆಗಳು
ನೆಲದೊಡಲಾಳಕ್ಕಿಳಿದವು ಕೆರೆ ಒರತೆಗಳ ನೀರು
ಪ್ರೀತಿ ಸ್ಪರ್ಷಿವಿಲ್ಲದ ಮೋಡ
ತುಂಬ ಮೌನ, ಜಡ ಹೆಳವನವತಾರ
ಎಲ್ಲಿಗೋ ಹೋಗಿಬಿಡಬೇಕೆನ್ನುವ
ನಿರಾಸೆಯಿರಬೇಕವಕೆ ನೋಡು ನೋಡುತ್ತಿದ್ದಂತೆಯೇ
ಪಾಪ ! ಅವು ಎಲ್ಲಿಯೋ ಹೋಗಿಬಿಟ್ಟವು

ಹುಲ್ಲಿನೆಸಳಿಲ್ಲ ಗೂಡಿಗೆ
ಗಿಡಪೊಟರೆ ಏನೆಲ್ಲ ಬುಲ್‌ಡೋಜರಿಸಿದ್ದಾಯಿತು
ಮುಗಿಲೆತ್ತರೆತ್ತರಕೆ ಏರುವ ಮನೆಗಳು
ರೆಕ್ಕೆ ಮುದುರಿ ಉಲಿ‌ಅಡಗಿತೇನೊ
ಹಿತ್ತಲಿಗೆ ಕೇರಿ ತೂರಿದ ಕಾಳುಗಳೂ ಕಾಣಿಸದೆ
ಪಾಪ ! ಅವು ಎಲ್ಲಿಗೋ ಹೋಗಿಬಿಟ್ಟವು

ಗುಬ್ಬಚ್ಚಿ ಅಂದರೇನಮ್ಮ ಹಾರುತ್ತವೆ ಹೇಗೆ –
ಬಾ ಕಂದ ತೋರಿಸುವೆನು –
ಕೆಂಪನೆಯ ಆಕಾಶದಂಚಿನಲಿ
ಸೂರ್ಯ ಇಳಿಯುವ ಹೊತ್ತು
ಹಕ್ಕಿ ಮರಳಿ ಮನೆಗೆ ಹೋಗಲೇಬೇಕು

ಸೂರ್ಯ ಮುಳುಗಿದ ಹಕ್ಕಿಗಳು ಕಾಣಲಿಲ್ಲ
ಪಾಪ ! ಅವು ಎಲ್ಲಿಯೋ ಹೋಗಿಬಿಟ್ಟವು
ಏನೆಂದು ಹೇಳುವುದು ಕಂದನಿಗೆ
ಅದು ಹೇಗೆಂದು ತಿಳಿಸುವುದು

ತಂದಿದ್ದೇವೆ
ರಸೆಲ್ ಮಾರುಕಟ್ಟೆಯ
ರೆಕ್ಕೆ ಕಿತ್ತಿಸಿಕೊಂಡ ಗುಬ್ಬಚ್ಚಿಗಳ
ಆಕಾಶದಲ್ಲಿ ಹಾರಲೂ ಇಲ್ಲ
ನೆಲದೆದೆಗೆ ಕುಣಿದು ಕುಪ್ಪಳಿಸಲೂ ಇಲ್ಲ
ಪಾಪ ! ಇವು ಎಲ್ಲಿ ಹೋಗಬೇಕಿನ್ನು
ಕಾಪಾಡುವುದೊಂದೇ ಕೊನೆ ಹಾವು ಬೆಕ್ಕಿನಿಂದ

ಪಂಜರ ಹಾಕದೆ ಮನೆಯೊಳಗೆ ಬಿಟ್ಟಿದೆ
ಪುಟ್ಟನೊಡನೆ ಪುಟಾಣಿಗಳಾಗಿ
ಮನೆತುಂಬ ಮನತುಂಬ ಅಷ್ಟಿಷ್ಟು
ಹಾರಾಡಿ ಕುಪ್ಪಳಿಸಿ ಆಗೀಗ
ಏನೇನೋ ಹೇಳುತಿವೆ
*****
ಪುಸ್ತಕ: ಇರುವಿಕೆ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಜೆಡಿ‌ಎಸ್ ಏರಿಗೆಳದ್ರೆ ಬಿಜೆಪಿನೋರು ನೀರಿಗೆಳಿಲಿಕತ್ತಾರೆ…!
Next post ತಾರೆ ತೇಲಿ ಬರುವ ರೀತಿ

ಸಣ್ಣ ಕತೆ

  • ಮಿಂಚು

    "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

  • ಆಪ್ತಮಿತ್ರ

    ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ದೊಡ್ಡದೊಡ್ಡ ಮರಗಳು ಭೋರ್ ಎಂದು ಬೀಸುವ ಗಾಳಿಯಲ್ಲಿ ತೂಗಾಡುತ್ತಿದ್ದವು. ಇಂಗ್ಲೆಂಡಿನ ಆ ಚಳಿ ಮಳೆಯಲ್ಲಿ ಎರಡು ಆಪ್ತಮಿತ್ರ ಜೀವಗಳು ಒಂದನ್ನು ಅನುಸರಿಸಿ ಇನ್ನೊಂದು… Read more…

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

cheap jordans|wholesale air max|wholesale jordans|wholesale jewelry|wholesale jerseys