Home / ಕವನ / ಕವಿತೆ / ಗುಬ್ಬಚ್ಚಿ ಅಂದರೇನಮ್ಮ

ಗುಬ್ಬಚ್ಚಿ ಅಂದರೇನಮ್ಮ

ಪಾಪ ! ಅವು ಸುಸ್ತಾಗಿಯೇ ಹಾರುತ್ತಿದ್ದರೂ
ಮುದ್ದಾಗಿಯೇ ಕಾಣುವ ಹಕ್ಕಿಗಳು
ತೀರ ಇತ್ತೀಚೆಗೆ ಒಮ್ಮಿಂದೊಮ್ಮೆಲೆ
ಎಲ್ಲಿಯೋ ಹೋಗಿಬಿಟ್ಟವು.

ಎಲ್ಲೆಲ್ಲೂ ಬೋರು ಹೊಡೆದ ಪುರಾವೆಗಳು
ನೆಲದೊಡಲಾಳಕ್ಕಿಳಿದವು ಕೆರೆ ಒರತೆಗಳ ನೀರು
ಪ್ರೀತಿ ಸ್ಪರ್ಷಿವಿಲ್ಲದ ಮೋಡ
ತುಂಬ ಮೌನ, ಜಡ ಹೆಳವನವತಾರ
ಎಲ್ಲಿಗೋ ಹೋಗಿಬಿಡಬೇಕೆನ್ನುವ
ನಿರಾಸೆಯಿರಬೇಕವಕೆ ನೋಡು ನೋಡುತ್ತಿದ್ದಂತೆಯೇ
ಪಾಪ ! ಅವು ಎಲ್ಲಿಯೋ ಹೋಗಿಬಿಟ್ಟವು

ಹುಲ್ಲಿನೆಸಳಿಲ್ಲ ಗೂಡಿಗೆ
ಗಿಡಪೊಟರೆ ಏನೆಲ್ಲ ಬುಲ್‌ಡೋಜರಿಸಿದ್ದಾಯಿತು
ಮುಗಿಲೆತ್ತರೆತ್ತರಕೆ ಏರುವ ಮನೆಗಳು
ರೆಕ್ಕೆ ಮುದುರಿ ಉಲಿ‌ಅಡಗಿತೇನೊ
ಹಿತ್ತಲಿಗೆ ಕೇರಿ ತೂರಿದ ಕಾಳುಗಳೂ ಕಾಣಿಸದೆ
ಪಾಪ ! ಅವು ಎಲ್ಲಿಗೋ ಹೋಗಿಬಿಟ್ಟವು

ಗುಬ್ಬಚ್ಚಿ ಅಂದರೇನಮ್ಮ ಹಾರುತ್ತವೆ ಹೇಗೆ –
ಬಾ ಕಂದ ತೋರಿಸುವೆನು –
ಕೆಂಪನೆಯ ಆಕಾಶದಂಚಿನಲಿ
ಸೂರ್ಯ ಇಳಿಯುವ ಹೊತ್ತು
ಹಕ್ಕಿ ಮರಳಿ ಮನೆಗೆ ಹೋಗಲೇಬೇಕು

ಸೂರ್ಯ ಮುಳುಗಿದ ಹಕ್ಕಿಗಳು ಕಾಣಲಿಲ್ಲ
ಪಾಪ ! ಅವು ಎಲ್ಲಿಯೋ ಹೋಗಿಬಿಟ್ಟವು
ಏನೆಂದು ಹೇಳುವುದು ಕಂದನಿಗೆ
ಅದು ಹೇಗೆಂದು ತಿಳಿಸುವುದು

ತಂದಿದ್ದೇವೆ
ರಸೆಲ್ ಮಾರುಕಟ್ಟೆಯ
ರೆಕ್ಕೆ ಕಿತ್ತಿಸಿಕೊಂಡ ಗುಬ್ಬಚ್ಚಿಗಳ
ಆಕಾಶದಲ್ಲಿ ಹಾರಲೂ ಇಲ್ಲ
ನೆಲದೆದೆಗೆ ಕುಣಿದು ಕುಪ್ಪಳಿಸಲೂ ಇಲ್ಲ
ಪಾಪ ! ಇವು ಎಲ್ಲಿ ಹೋಗಬೇಕಿನ್ನು
ಕಾಪಾಡುವುದೊಂದೇ ಕೊನೆ ಹಾವು ಬೆಕ್ಕಿನಿಂದ

ಪಂಜರ ಹಾಕದೆ ಮನೆಯೊಳಗೆ ಬಿಟ್ಟಿದೆ
ಪುಟ್ಟನೊಡನೆ ಪುಟಾಣಿಗಳಾಗಿ
ಮನೆತುಂಬ ಮನತುಂಬ ಅಷ್ಟಿಷ್ಟು
ಹಾರಾಡಿ ಕುಪ್ಪಳಿಸಿ ಆಗೀಗ
ಏನೇನೋ ಹೇಳುತಿವೆ
*****
ಪುಸ್ತಕ: ಇರುವಿಕೆ

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...