Home / ಕವನ / ಕವಿತೆ / ಗುಬ್ಬಚ್ಚಿ ಅಂದರೇನಮ್ಮ

ಗುಬ್ಬಚ್ಚಿ ಅಂದರೇನಮ್ಮ

ಪಾಪ ! ಅವು ಸುಸ್ತಾಗಿಯೇ ಹಾರುತ್ತಿದ್ದರೂ
ಮುದ್ದಾಗಿಯೇ ಕಾಣುವ ಹಕ್ಕಿಗಳು
ತೀರ ಇತ್ತೀಚೆಗೆ ಒಮ್ಮಿಂದೊಮ್ಮೆಲೆ
ಎಲ್ಲಿಯೋ ಹೋಗಿಬಿಟ್ಟವು.

ಎಲ್ಲೆಲ್ಲೂ ಬೋರು ಹೊಡೆದ ಪುರಾವೆಗಳು
ನೆಲದೊಡಲಾಳಕ್ಕಿಳಿದವು ಕೆರೆ ಒರತೆಗಳ ನೀರು
ಪ್ರೀತಿ ಸ್ಪರ್ಷಿವಿಲ್ಲದ ಮೋಡ
ತುಂಬ ಮೌನ, ಜಡ ಹೆಳವನವತಾರ
ಎಲ್ಲಿಗೋ ಹೋಗಿಬಿಡಬೇಕೆನ್ನುವ
ನಿರಾಸೆಯಿರಬೇಕವಕೆ ನೋಡು ನೋಡುತ್ತಿದ್ದಂತೆಯೇ
ಪಾಪ ! ಅವು ಎಲ್ಲಿಯೋ ಹೋಗಿಬಿಟ್ಟವು

ಹುಲ್ಲಿನೆಸಳಿಲ್ಲ ಗೂಡಿಗೆ
ಗಿಡಪೊಟರೆ ಏನೆಲ್ಲ ಬುಲ್‌ಡೋಜರಿಸಿದ್ದಾಯಿತು
ಮುಗಿಲೆತ್ತರೆತ್ತರಕೆ ಏರುವ ಮನೆಗಳು
ರೆಕ್ಕೆ ಮುದುರಿ ಉಲಿ‌ಅಡಗಿತೇನೊ
ಹಿತ್ತಲಿಗೆ ಕೇರಿ ತೂರಿದ ಕಾಳುಗಳೂ ಕಾಣಿಸದೆ
ಪಾಪ ! ಅವು ಎಲ್ಲಿಗೋ ಹೋಗಿಬಿಟ್ಟವು

ಗುಬ್ಬಚ್ಚಿ ಅಂದರೇನಮ್ಮ ಹಾರುತ್ತವೆ ಹೇಗೆ –
ಬಾ ಕಂದ ತೋರಿಸುವೆನು –
ಕೆಂಪನೆಯ ಆಕಾಶದಂಚಿನಲಿ
ಸೂರ್ಯ ಇಳಿಯುವ ಹೊತ್ತು
ಹಕ್ಕಿ ಮರಳಿ ಮನೆಗೆ ಹೋಗಲೇಬೇಕು

ಸೂರ್ಯ ಮುಳುಗಿದ ಹಕ್ಕಿಗಳು ಕಾಣಲಿಲ್ಲ
ಪಾಪ ! ಅವು ಎಲ್ಲಿಯೋ ಹೋಗಿಬಿಟ್ಟವು
ಏನೆಂದು ಹೇಳುವುದು ಕಂದನಿಗೆ
ಅದು ಹೇಗೆಂದು ತಿಳಿಸುವುದು

ತಂದಿದ್ದೇವೆ
ರಸೆಲ್ ಮಾರುಕಟ್ಟೆಯ
ರೆಕ್ಕೆ ಕಿತ್ತಿಸಿಕೊಂಡ ಗುಬ್ಬಚ್ಚಿಗಳ
ಆಕಾಶದಲ್ಲಿ ಹಾರಲೂ ಇಲ್ಲ
ನೆಲದೆದೆಗೆ ಕುಣಿದು ಕುಪ್ಪಳಿಸಲೂ ಇಲ್ಲ
ಪಾಪ ! ಇವು ಎಲ್ಲಿ ಹೋಗಬೇಕಿನ್ನು
ಕಾಪಾಡುವುದೊಂದೇ ಕೊನೆ ಹಾವು ಬೆಕ್ಕಿನಿಂದ

ಪಂಜರ ಹಾಕದೆ ಮನೆಯೊಳಗೆ ಬಿಟ್ಟಿದೆ
ಪುಟ್ಟನೊಡನೆ ಪುಟಾಣಿಗಳಾಗಿ
ಮನೆತುಂಬ ಮನತುಂಬ ಅಷ್ಟಿಷ್ಟು
ಹಾರಾಡಿ ಕುಪ್ಪಳಿಸಿ ಆಗೀಗ
ಏನೇನೋ ಹೇಳುತಿವೆ
*****
ಪುಸ್ತಕ: ಇರುವಿಕೆ

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...