Home / ಕವನ / ಕವಿತೆ / ಭರತಾರ್ಪಣ

ಭರತಾರ್ಪಣ

ಈ ತನುಮನ
ಭರತಾರ್ಪಣ
ಓ ಮನ್ಮನ
ಮನ್ಮಾತೆಯ
ಪುಣ್ಯಸ್ತನ-
ವನ್ನೀಕ್ಷಣ
ಕುಡಿ ತತ್ ಕ್ಷಣ
ಸಲ್ಲಕ್ಷಣ
ನ ವಿಲಕ್ಷಣ
ಓ ಮನ್ಮನ
ಈ ತನುಮನ
ಭರತಾರ್ಪಣವು!
*
ಮಾನವ್ಯವು
ಇಹ ದಿವ್ಯವು
ನವ ನವ್ಯವು
ಅಹ ಭವ್ಯವು
ಬಹು ವಿಶ್ರುತ
ವೀ ಭಾರತ!
ಇಲ್ಲಿಯೆ ರತ
ವಲ್ಲವೆ ಹಿತ?
ತತ್ ಪ್ರೇಷಿತ
ಮತ್ ಸ್ನೇಹಿತ
ಓ ಮನ್ಮನ
ಪ್ರಿಯ ಮನ್ಮನ
ಈ ತನುಧನ
ಭರತಾರ್ಪಣವು!!
*
ಅಲ್ಲಿಂದಲೊ
ಎಲ್ಲಿಂದಲೊ
ಇಂತೀ ಜನ
ಬಂತೀ ಕ್ಷಣ
ನೆಲೆ ನಿಲ್ಲದ
ಸೆಲೆ ಸಲ್ಲದ
ನದಿ ನದಿಗಳು
ಮುದ ಬೀರುತ
ಅದೊ ಬಂದವು
ಇದೊ ಸಂದವು
ನೀರ್‌ ಮಿಕ್ಕಿತು
ಕಡಲುಕ್ಕಿತು
ಓ ಮನ್ಮನ
ಮೀಯ್ ತನುಮನ
ತನುಮನಧನ
ಭರತಾರ್ಪಣವು!!
*
ಆರ್ಯರ ಕುಲ
ದ್ರಾವಿಡ ಫಲ
ಅಕೊ ಚೀಣರು
ಶಕ ಹೂಣರು
ಪಾರಸಿಕರು
ಪಾಠಾಣರು
ಮೊಗಲ್ ರಸಿಕರು
ಪ್ರಿಯ ಪ್ರಾಣರು
ಒಂದೇ ಶಿರ
ಒಂದೇ ಮನ
ಈ ತನುಮನ
ಭರತಾರ್ಪಣವು!
*
ಆ ಪಡುವಲ!
ದಾ ಬಾಗಿಲ
ಅಗೊ ತೆರೆಯಿತು
ಇಗೊ ನೆರೆಯಿತು
ಹೊಸ ಹೊಸ ಜನ
ಸುವಿಲಕ್ಷಣ
ಹೊಸ ಸಂಗತಿ
ಸೋಜಿಗ ಶ್ರುತಿ
ಹೊಸ ಕಾಣಿಕೆ
ಮನಗಾಣಿಕೆ
ಒಂದೇ ಶಿರ
ಒಂದೇ ಮನ
ಈ ತನುಧನ
ಭರತಾರ್ಪಣವು!!
*
ಒಂದೇ ಶಿರ
ಒಂದೇ ಮನ
ಭಾರತ ನರ-
ನಾರಾಯಣ
ತಲೆದೂಗುವೆ
ತಲೆಬಾಗುವೆ
ಕೈ ಮುಗಿಯುವೆ
ಮೈಯೊಗೆಯುವೆ
ನಿನ್ನಡಿಯೊಳು
ನನ್ನಯ್ಯನೆ
ಕಲ್ಯಾಣವ
ಮನಗಾಣುವ
ಭಾರತ ನರ-
ನಾರಾಯಣ
ತನುಮನಧನ
ನಿನಗರ್ಪಣವು!!
*****
Tagged:

Leave a Reply

Your email address will not be published. Required fields are marked *

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...