Home / ಕವನ / ಅನುವಾದ / ಪಕ್ಷಿತೀರ್ಥ

ಪಕ್ಷಿತೀರ್ಥ

ಮೂಲ: ಮೋತಿಲಾಲ್ ಜೋತ್ವಾನಿ (ಸಿಂಧಿ ಕವಿ)

ದಕ್ಷಿಣ ಭಾರತದಲ್ಲಿ ಚೆಂಗಲ್‌ಪೇಟೆ, ಅಲ್ಲಿ
ತಿರುಕ್ಕುಳಕ್ಕುಂಡ್ರಂ ಎಂಬ ಪುಟ್ಟ ಊರಲ್ಲಿ
ಪ್ರಸಿದ್ಧವಾಗಿದೆ ಒಂದು ಬೆಟ್ಟದಲ್ಲಿನ ಗುಡಿ;
ದಿನವೂ ಮಧ್ಯಾಹ್ನದಲ್ಲಿ
ಗೊತ್ತಾದ ಹೊತ್ತಿನಲ್ಲಿ
ಇಳಿಯುತ್ತವೆ ಜೋಡಿ ಹಕ್ಕಿ
ಆ ದೇವಾಲಯದ ನೆತ್ತಿಯಲ್ಲಿ

ದೇವಾಲಯದ ಮುಂದೆ ಭಾರೀ ಜನಸ್ತೋಮ.
ಗಂಭೀರ ಗತಿಯಲ್ಲಿ ನಡೆದು ಬಂದರೆ ಹಕ್ಕಿ
ದಾರಿಬಿಡುವರು ಮಂದಿ ಹಿಂದೆ ಸರಿದು,
ಕಾದಿರುವ ಪೂಜಾರಿ ಸಾಷ್ಟಾಂಗ ಎರಗುವನು
ಭಯಭಕ್ತಿಯಿಂದ ಅವುಗಳೆದುರು.
ನಡೆಯುವುದು ಶಿವಪೂಜೆ ಗಂಟೆ ಬಡಿದು
ನಗಾರಿ ಹೊಡೆದು.

ಸಿಹಿ ಹುಗ್ಗಿ ನೈವೇದ್ಯ ಶಿವಮೂರ್ತಿಗೆ
ಬಡಿಸುವನು ಪೂಜಾರಿ ಹಕ್ಕಿಗಳಿಗೆ
ಬಟ್ಟಲು ತುಂಬ ಪ್ರಸಾದ ಹೊಟ್ಟೆ ತುಂಬ ತಿಂದು
ಮತ್ತೆ ಜಿಗಿವುವು ಹಕ್ಕಿ ಗಾಳಿಯಲ್ಲಿ,
ಸುತ್ತುವುವು ಮೂರು ಸಲ ಗುಡಿ ಶಿಖರವನ್ನು
ಬಿಚ್ಚಿ ರೆಕ್ಕೆಯ ಧೀರ ಠೀವಿಯಲ್ಲಿ.
ನೀಲಾಗಸದ ಕೆಳಗೆ ಬಿಳಿ ಹಾಯಿಗಳ ಜೋಡಿ
ಚೆಲುವು ಪ್ರೀತಿಗೆ ಕೂಡಿ ಕಣ್ಣಮೋಡಿ,
ಎಲ್ಲಿಂದ ಬರುವುವೋ ಎಲ್ಲಿ ಸಾಗುವುವೋ
ಯಾರೂ ತಿಳಿಯರು ಇದರ ಗೂಢವನ್ನು
ಜನ ಹೇಳುವರು ಒಂದು ಐತಿಹ್ಯವನ್ನು.
ಅರುಣೋದಯದ ವೇಳೆ ಹಿಮಾಲಯದ ತಡಿಯಿಂದ
ಹೊರಡುವುವು ಹಕ್ಕಿ ಗಿರಿಗೆ ನಮಿಸಿ,
ದಕ್ಷಿಣಕ್ಕೆ ಹಾಯುತ್ತ ಕಾಶಿಯನ್ನು ಸೇರಿ
ಗಂಗೆಯಲಿ ಮೀಯುವುದು, ಮತ್ತೆ ಹಾರಿ
ಈ ಗುಡಿಗೆ ಬಂದು ನೈವೇದ್ಯ ಪಡೆದು
ತ್ರಿಪ್ರದಕ್ಷಿಣೆ ಸಲಿಸಿ ಶಿವಮೂರ್ತಿಗೆ
ಸಾಗುವುವು ಮುಂದೆ ರಾಮೇಶ್ವರಕ್ಕೆ
ಅಲ್ಲಿ ಸಂಧ್ಯೆಯನ್ನು ಆಚರಿಸಲಿಕ್ಕೆ
*****

Tagged:

Leave a Reply

Your email address will not be published. Required fields are marked *

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...