ನಾದ ವೇದಗಳ ಶಿವೆ

ನಾದ ವೇದಗಳ ಶಿವೆ
ಭರತ ಮಾತೆಯ ಓಂಕಾರಗೀತೆಯ
ಶಿರೋಮಣಿಗಳ ಮಾತೆಯೆ
ನಿನಗೆ ವಂದನೆ ಶಿವೆ ||

ಆನಂದದನುರಾಗದ ಪದ್ಮಮುಕುಟ
ಶೋಭೆಯೆ ಸುರನರಸೇವಿತೆ
ಸುಂದರಿ ಮಾಧವಿ ಲಾವಣ್ಯಕಾಲವಲ್ಲಭೆ
ನಿನಗೆ ವಂದನೆ ಶಿವೆ ||

ವನಸ್ಪತಿಯ ವೈಭವದ ತಾಣವೆ
ಸುಂದರ ಗಾನ ವಿನೋದವಾಣಿಯೆ
ಸಾಹಿತ್ಯ ಸಂಗೀತ ಸೌಂದರ್‍ಯೋಪಾಸಕಿ
ನಿನಗೆ ವಂದನೆ ಶಿವೆ||

ವೀರ ಧೀರಶಿರೋಮಣಿಗಳ ಜಾತೆಯೇ
ಕೋಟಿ ಸೂರ್‍ಯ ತೇಜೋನ್ಮಣಿಯೆ
ಅಮಿತ ಸುರನರ ಪೂಜಿತೆ
ನಿನಗೆ ವಂದನೆ ಶಿವೆ ||

ವೈಭವದಿ ಮೆರೆದ ಕೃಷ್ಣೆ ನೀನು
ಗಂಗಾ ಯಮುನೆ ಗೋದಾವರಿಯೆ
ಸರಸ್ವತಿ ಸಿಂಧು ಗಂಗೆ ತುಂಗೆ ಭದ್ರೆಯೆ
ಜಲ ತರಂಗಿಣಿ ಜೋತಿ ಸ್ವರೂಪಿಣಿ
ನಿನಗೆ ವಂದನೆ ಶಿವೆ ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸ್ಕೂಲು ಮಕ್ಕಳ ನಡುವೆ
Next post ಹತ್ಯೆ

ಸಣ್ಣ ಕತೆ

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

  • ದಾರಿ ಯಾವುದಯ್ಯಾ?

    ಮೂವತೈದು ವರ್‍ಷಗಳ ನಂತರ ಅಮಲ ನಿನ್ನೂರಿಗೆ ಬರುತ್ತಿದ್ದೇನೆ ಅಂತ ಫೋನ ಮಾಡಿದಾಗ ಮೃಣಾಲಿನಿಗೆ ಆಶ್ಚರ್‍ಯ ಮತ್ತು ಆತಂಕ ಕಾಡಿದವು. ಬರೋಬ್ಬರಿ ಮೂವತ್ತೈದು ವರ್ಷಗಳ ಹಿಂದೆ ವಿಶ್ವವಿದ್ಯಾಲಯದ ಕ್ಯಾಂಪಸ್… Read more…

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…