ಪ್ರತೀಕ್ಷೆ

ಇಂದು ಏನಾಗಿಹುದೆ, ಗೆಳತಿ
ಏಕೆ ಸಡಗರಗೊಳ್ವೆನೇ?
ಕಡಲಿನಗಲದ ಕೇರಿ ಹರಹನು
ಹಾರಿಬರುವೆಲರಾರ ದೂತನೆ,
ಸುದ್ದಿ ಯಾವುದ ಪೇಳ್ವನೇ?

ಕತ್ತಲಿದು ಮುನ್ನೀರಿನಂದದಿ
ತಿರೆಯ ಮುಳುಗಿಸಿ ಹಬ್ಬಿದೆ;
ಒಡೆದ ಹಡಗುಗಳಂತೆ ಮನೆ ಮಠ
ಅದರ ತಲದೊಳು ಬಿದ್ದಿದೆ-ಮನ
ಬೆದರಿ ಬಯಕೆಯ ತಬ್ಬಿದೆ.

ಎಲ್ಲ ಕರಣವ ಕಿವಿಗೆ ಹೊಂದಿಸಿ
ನಿಲ್ಲುವೆನು ದನಿಯರಸುತ,
ಅನ್ಯಗಿಲ್ಲದ ಧೀರಗಮನದ
ಛಂದವಾಲಿಪ ನೆಲ್ಲದೊಂದನೆ
ತುಡಿಯುವೆದೆಯೊಳು ಹರಸುತ.

ಅಕೊ-

ಬಾನವರಿಗಿಳಿನೆನಪ ತರುವೀ
ಗುಡಿಯ ಗಂಟೆಯ ಬಾಜನೆ
ಬೀದಿಯೊಳು ನೂರ್ ಕೊರಲ ತರುತಿದೆ;
ಹೃದಯದೇಕಾಂತವನು ಸಾರುವ
ದನಿಯ ತಹುದೋ ಕಾಣೆನೇ.

ಅದೊ ಅವನ ನೇಹಿಗನ ನಗೆನುಡಿ-
ಅಗಲಿದರು-ಬಹನಿತ್ತೆಡೆ!
ಒಳಪೊಗುವೆ, ಕನ್ನಡಿಯ ಮುಂಗಡೆ
ತುಸ ನಿಲುವೆ, ಹೊರಬರುವೆ, ಲಾಲಿಪೆ-
ನೆದೆಯ ಹಾಸುವೆ ನಡೆವೆಡೆ.

ಬಹನು ಬರುತಿಹನವ್ವ-ಬಂದನು-
ಕಂಡರೇಗತಿ ಕಾಣೆನೇ!-
ಬಯಕೆಕೊಡೆವಿಡಿದೊಲುಮೆಯುತ್ಸವ
ನನ್ನ ನರಸಿಯೆ ಬಳಿಗೆ ಬಂದಿರೆ
ಕಾಣದೊಲು ಮರೆನಿಂದೆನೇ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಎರಡು ಕ್ಷಣ ಬದುಕಿ ಬಿಡಲೇ?

ಸಣ್ಣ ಕತೆ

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

  • ಏಡಿರಾಜ

    ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…

  • ಅಜ್ಜಿಯ ಪ್ರೇಮ

    ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ… Read more…