ಎರಡು ಕ್ಷಣ ಬದುಕಿ ಬಿಡಲೇ?

ಮಳೆಗಾಲದ ಆ ಸಂಜೆ
ಧೋ! ಎಂದು ಸುರಿದ ಮಳೆ
ಕೊನೆಯ ಕಂತಿನ ಹನಿ
ಟಪ್ ಟಪ್ ಹನಿ ಹನಕು
ಜಿಟಿಜಿಟಿ ಜಡಿ ಮಳೆ
ಎಲೆಗಳಿಂದ ಒಸರುವ
ಒಂದೊಂದೇ ಹನಿ ಹನಿ
ನಾಭಿಯಾಳದಿಂದ
ಹಸಿರು ಚಿಗುರವಾ ನಡುಕ
ಶೀತ ಲಹರಿಯ ಗಾಳಿ
ಮುಂಗುರುಳಿನಿಂದ ಹನಕುವ
ಒಂದೊಂದೇ ಮುತ್ತುಗಳ ಪೋಣಿಸಲೇ
ಬಿಸಿ ಉಸಿರ ದಾರದಲಿ?
ಕೊರೆವ ಚಳಿಗೆ ಬಿಸಿಬಿಸಿ ಕಾಫೀ
ಗುಟಕರಿಸಿ ಬಿಡಲೇ ಇಡಿಯಾಗಿ?
ಉರಿವ ಒಲೆ ಮುಂದೆ ಬಿಸಿ ಕಾಸುತ್ತ
ಕರಗಿ ಹೋಗಲೇ ಮೇಣದಂತೆ
ಆರಿದ ಮೇಣ ಘನವಾಗಿ
ಮೂಲದ ಆಕಾರ ಕಳೆದುಕೊಂಡು
ಇಲ್ಲವಾಗಲೇ ಜಾತ್ರೆಯಲಿ?
ನಡುಕ ತೊಡೆಯಲು
ಉರಿಸಿ ಬಿಡಲೇ ನಿನ್ನ ನೆನಪಿನ ದೀಪ
ಕತ್ತಲಾವರಿಸುವ ಮುನ್ನ
ಎರಡು ಕ್ಷಣ ಬದುಕಿ ಬಿಡಲೇ?
ಲೋಕದ ಹಂಗು ತೊರೆದು
ಆಚೆ ದಡದಲಿ ನಿಂತು
ನೆಲ ಮುಗಿಲು ಸಂಧಿಸುವಲ್ಲಿ
ಆಗಸದಲ್ಲಿ ಹಾರಿಬಿಡಲೇ?
ಎರಡು ಕ್ಷಣ ಬದುಕಿ ಬಿಡಲೇ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಜಲಜನಕ ಬಾಂಬ್ (ವಿನಾಶಕಾರಿ ಅಸ್ತ್ರ)

ಸಣ್ಣ ಕತೆ

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

  • ವ್ಯವಸ್ಥೆ

    ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…