Home / ಕವನ / ಕವಿತೆ / ಹುಷ್ ! ಸದ್ದು!

ಹುಷ್ ! ಸದ್ದು!


ಬಾಗಿಲಿಲ್ಲದ ಬಯಲೊಳಗಿಂದ
ಮೆಲ್ಲಗೆ ಬಳುಕುತ್ತಾ ಬಂತು
ಬೆಳಕಿನ ಹೊಳೆ
ಅದರಾಳದಿಂದೆದ್ದ ನೂರಾರು ನಿಹಾರಿಕೆಯರು
ಬೊಗಸೆ ತುಂಬಿ ಸುರಿಸುತ್ತಾರೆ
ಬಣ್ಣದ ಬೆಳಕಿನ ಮಳೆ.

ಹೇಳಿಕೊಳ್ಳಲು ಊರಿಲ್ಲದ
ಊರಿಕೊಳ್ಳಲು ಬೇರಿಲ್ಲದ
ಸೋರಿಕೊಳ್ಳಲು ನೀರಿಲ್ಲದ
ಬೆಳಕಿನ ಹೊಳೆಯಲಿ
ಬರಿದೇ ತೇಲುವ
ಮಿನುಗು ತಾರೆಯರ
ಮೈ ತುಂಬಾ ಕಣ್‌ ಕೋರೈಸುವ ಬೆಳಕು
ಚೆಲುವು – ಒಲವು ಮೇಳೈಸಿ ನಿಂತ ರೂಪು
ಕನಸಿನ ಲೋಕದಿಂದ
ತುಂಡರಿಸಿ ಬಿದ್ದುದೇ ಈ ಮಿಣುಕು!


ಕುತ್ತಿಗೆಗೆ ಬಿಗಿದ
ಹಗ್ಗ ಮತ್ತೆ ಮತ್ತೆ
ತುಂಡರಿಸಿ ಜೀವ ಭಕ್ಷಿಸು ಪಡೆದ
ಮುಗ್ಧ ಕಂದನಿಗೆ ಬೆಳಕಿನಾಸೆ
ಎಂದೂ ಯಾರೊ ಕಾಣದ ಕನಸು ಕಾಣುವಾಸೆ.


ಬೆಳಕು ಬೇಕೆ ಬೆಳಕು?
ಕನಸು ಬೇಕೇ ಕನಸು?
ಸೆರಗಿನ ತುಂಬಾ ಬೆಳಕು – ಕನಸು ಹಿಡಿದು
ಸುಮ್ಮನೆ ಕೆಣಕು
ಮೈನವಿರೇಳುವ ಪಿಸುಗು
ಬೆಳಕಿನ ಗುತ್ತಿಗೆ ಪಡೆದ
ಬೆಡಗಿನ ನಿಹಾರಿಕೆಯೆರದು!


ಬೇಕು – ಬೇಡಗಳ ಪ್ರಶ್ನೆ ನೆವಕ್ಕಷ್ಟೇ
ಬಣ್ಣವಿಲ್ಲದ ಬರೀ ಬೆಳಕಿನ
ನಗೆಗೇ – ಬಗೆಗೇ ಸೋತ ಕಂದನ
ಪ್ರೀತಿಯಿಂದ ತಬ್ಬಿ
ಎದೆಯ ಕಣ್ಣೀರು ಒರೆಸಿ
ಸುಮ್ಮಸುಮ್ಮನೆ ಒಲವು ಹರಿಸಿ
ಬೇಡವೆಂದರೂ ಬೆಳಕಿನ ನೀರು ಸುರಿಸಿ
ಅವನ ತೋಯಿಸುತ್ತಾರೆ
ಮೀಯಿಸುತ್ತಾರೆ
ಲಾಲಿ ಹಾಡಿ ತಬ್ಬಿ ಮೆಲ್ಲಗೆ
ಮಲಗಿಸುತ್ತಾರೆ.


ಹುಷ್! ಸದ್ದು!
ಕಂದನೀಗ ಬೆಳಕಿನಮೃತ ಹೀರುತ್ತಾ
ಬೆಳೆಯುತ್ತಿದ್ದಾನೆ
ಬೆಳಕಾಗುತ್ತಿದ್ದಾನೆ!
ಬೆಳಕಿನ ಕನಸಾಗುತ್ತಿದ್ದಾನೆ!
*****

Tagged:

Leave a Reply

Your email address will not be published. Required fields are marked *

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಕೀಲಿಕರಣ: ಎಮ್ ಎನ್ ಎಸ್ ರಾವ್