Home / ಕವನ / ಕವಿತೆ / ಹುಷ್ ! ಸದ್ದು!

ಹುಷ್ ! ಸದ್ದು!


ಬಾಗಿಲಿಲ್ಲದ ಬಯಲೊಳಗಿಂದ
ಮೆಲ್ಲಗೆ ಬಳುಕುತ್ತಾ ಬಂತು
ಬೆಳಕಿನ ಹೊಳೆ
ಅದರಾಳದಿಂದೆದ್ದ ನೂರಾರು ನಿಹಾರಿಕೆಯರು
ಬೊಗಸೆ ತುಂಬಿ ಸುರಿಸುತ್ತಾರೆ
ಬಣ್ಣದ ಬೆಳಕಿನ ಮಳೆ.

ಹೇಳಿಕೊಳ್ಳಲು ಊರಿಲ್ಲದ
ಊರಿಕೊಳ್ಳಲು ಬೇರಿಲ್ಲದ
ಸೋರಿಕೊಳ್ಳಲು ನೀರಿಲ್ಲದ
ಬೆಳಕಿನ ಹೊಳೆಯಲಿ
ಬರಿದೇ ತೇಲುವ
ಮಿನುಗು ತಾರೆಯರ
ಮೈ ತುಂಬಾ ಕಣ್‌ ಕೋರೈಸುವ ಬೆಳಕು
ಚೆಲುವು – ಒಲವು ಮೇಳೈಸಿ ನಿಂತ ರೂಪು
ಕನಸಿನ ಲೋಕದಿಂದ
ತುಂಡರಿಸಿ ಬಿದ್ದುದೇ ಈ ಮಿಣುಕು!


ಕುತ್ತಿಗೆಗೆ ಬಿಗಿದ
ಹಗ್ಗ ಮತ್ತೆ ಮತ್ತೆ
ತುಂಡರಿಸಿ ಜೀವ ಭಕ್ಷಿಸು ಪಡೆದ
ಮುಗ್ಧ ಕಂದನಿಗೆ ಬೆಳಕಿನಾಸೆ
ಎಂದೂ ಯಾರೊ ಕಾಣದ ಕನಸು ಕಾಣುವಾಸೆ.


ಬೆಳಕು ಬೇಕೆ ಬೆಳಕು?
ಕನಸು ಬೇಕೇ ಕನಸು?
ಸೆರಗಿನ ತುಂಬಾ ಬೆಳಕು – ಕನಸು ಹಿಡಿದು
ಸುಮ್ಮನೆ ಕೆಣಕು
ಮೈನವಿರೇಳುವ ಪಿಸುಗು
ಬೆಳಕಿನ ಗುತ್ತಿಗೆ ಪಡೆದ
ಬೆಡಗಿನ ನಿಹಾರಿಕೆಯೆರದು!


ಬೇಕು – ಬೇಡಗಳ ಪ್ರಶ್ನೆ ನೆವಕ್ಕಷ್ಟೇ
ಬಣ್ಣವಿಲ್ಲದ ಬರೀ ಬೆಳಕಿನ
ನಗೆಗೇ – ಬಗೆಗೇ ಸೋತ ಕಂದನ
ಪ್ರೀತಿಯಿಂದ ತಬ್ಬಿ
ಎದೆಯ ಕಣ್ಣೀರು ಒರೆಸಿ
ಸುಮ್ಮಸುಮ್ಮನೆ ಒಲವು ಹರಿಸಿ
ಬೇಡವೆಂದರೂ ಬೆಳಕಿನ ನೀರು ಸುರಿಸಿ
ಅವನ ತೋಯಿಸುತ್ತಾರೆ
ಮೀಯಿಸುತ್ತಾರೆ
ಲಾಲಿ ಹಾಡಿ ತಬ್ಬಿ ಮೆಲ್ಲಗೆ
ಮಲಗಿಸುತ್ತಾರೆ.


ಹುಷ್! ಸದ್ದು!
ಕಂದನೀಗ ಬೆಳಕಿನಮೃತ ಹೀರುತ್ತಾ
ಬೆಳೆಯುತ್ತಿದ್ದಾನೆ
ಬೆಳಕಾಗುತ್ತಿದ್ದಾನೆ!
ಬೆಳಕಿನ ಕನಸಾಗುತ್ತಿದ್ದಾನೆ!
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...