Home / ಕವನ / ಕವಿತೆ / ಆರತಿ

ಆರತಿ

ಪಣೆಗೆ ಕುಂಕುಮವಿಟ್ಟು ಪೂರ್ವ ನಾರಿಯು ನಿಂದು
ಕಣುಗಳಿಂದವೆ ಕರೆದು ಕಮಲಿನಿಯ ಬಳಿಸಂದು
ಮಣಿಕಿರೀಟವ ಧರಿಸಿ ಮನಕೆ ಮಿತ್ರನ ತಂದು
ಇಣಿಕಿ ನೋಡುತಲಿಹಳು ರಮಣ ಬರುತಿಹನೆಂದು.

ಹೊಳೆವ ದೀವಿಗೆಯಿಟ್ಟು ಮಂಗಳಾರತಿ ಪಿಡಿದು
ಅಳಿಯ ರಾಗದಿ ಹಾಡಿ ಹಕ್ಕಿಯೆದೆಯಿಂಚರದೆ
ತಳಿರ ಚಾಮರವೀಸಿ ತಣ್ಣೆಲರನುರೆ ಹಾಸಿ
ಬಳಿಗೆ ಬಾಬಾಯೆಂದು ಕರೆಯುವಳು ಕೈವೀಸಿ.

ಪೂರ್ವ ಶರಧಿಯ ಸೀಳಿ ದಿವ್ಯ ಸಿಂಗರದಿಂದ
ಪಾರ್ವ ರವಿರಥ ತುರಗಮಿದಿರಾಗೆ ಸೊಗದಿಂದ
ಆರತಿಯನೆತ್ತಿದಳು ಮುಂಬರಿಯುತಪ್ರಿದಳು
ಧಾರುಣಿಗೆ ರವಿ ಬರವ ತಾ ನಿಂದು ಸಾರಿದಳು.

ತನ್ನ ಗರ್ಭ ದಿ ಬಂದ ಸೂರ್ಯನಂ ವಂದಿಸುತ
ಇನ್ನು ಶುಭ ನಿನಗಾಗಲೆನ್ನುತ ಹರಸುತ್ತ
ಮುನ್ನೀರ ಕಳುಹಿದಂ ಮೇಲೆಯ್ದಿ ವರ್ಧಿಸುತ
ಉನ್ನತಾಕಾಶದಲಿ ನಡೆದಿಹನು ಬೆಳೆಯುತ್ತ.

ಅಮೃತಮಯ ರುಚಿರನುಂ ಬುವಿಗೆ ಜೀವವನಿತ್ತು
ಗಮನಿಸದೆ ಅವರಿವರ ಕಣ್ಣಾದ ಕಳೆಯಿತ್ತು
ಕರ್ಮವೇ ಮಿಗಿಲೆಂದು ತೋರಿ ಲೋಕವ ನಡೆಸಿ
ನಿರ್ಮಲಂ ಬೆಳಗಿದನು ಪೂರ್ವಮಾನಿನಿವೆರಸಿ.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...