ಶೋಧನೆ

ಹೌದು ಬದುಕು ಎನ್ನಲು
ಇದು ನಿನಗೆ ಮೀಸಲು
ದೂರದ ವರೆಗೆ ಸಾಗಲು
ಮತ್ತೆ ನೀನೇ ಕಲಿಬೇಕು ಈಜಲು

ಈ ಜನುಮದ ದಾರಿಯಲ್ಲಿ
ಇವರೆಲ್ಲ ನಿನ್ನ ಸಂಗಾತಿಗಳು
ಒಡೆಯನ ಮರೆತು ಇಲ್ಲಿ ಬೆರೆತು
ಅರಳಿಸಿಕೊಳ್ಳುತ್ತಿರುವ ನನ್ನ ಕನ್ಸುಗಳು

ಮುಣ್ಯ ಪಾಪಗಳದೇಕೆ ಲೆಕ್ಕ
ಅವುಗಳ ವೀಕ್ಷಿಸಲು ನೀನಾರು
ಆತ್ಮನ ದಾರಿಯಲಿ ನಡೆ ನಿ ಚೊಕ್ಕ
ಅದೇ ಮಾಡುವುದು ನಿನ್ನಭವ ಪಾರು

ಸತ್ಯ ಅಹಿಂಸೆ ಆಸೆಗಳನು
ನಿ ಪಾಲಿಸಬೇಕು ನಿಚ್ಚ ನಿಚ್ಚ
ಬ್ರಹ್ಮಚರ್ಯ ಮತ್ತೆ ಅಪರಿಗ್ರಹಗಳನು
ಪೋಷಿಸು ಮನಸು ಕಾಯಾವಾಚಾ

ಸಾಕು ಸಾಕು ಬೆಂಬಿಡದೆ ಲೌಕಿಕ
ಏನು ಮಾಡಲಿದೆ ನಿನಗೆ ಸಾಧನೆ
ನಿನ್ನೊಳಗಿನ ನಿನ್ನವಗೆ ನೀನೆ
ಮಾಣಿಕ್ಯ ವಿಠಲನ ಶೋಧನೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಆರತಿ
Next post ಪಾಪಿಯ ಪಾಡು – ೪

ಸಣ್ಣ ಕತೆ

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ಉರಿವ ಮಹಡಿಯ ಒಳಗೆ

    ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…

  • ಮಿಂಚಿನ ದೀಪ

    ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…