ಶಪಥ

ಪ್ರತಿ ಕತ್ತಲೆಗೆ ತಾನು
ಮೆರೆವ-ಮೈತೆರೆವ
ಬೆಳಕನ್ನು ತಿಂದ ಉತ್ಸಾಹ
ಪ್ರತಿ ಬೆಳಕಿಗೂ ಅಬ್ಬ
ಅಂಥ ಕತ್ತಲೆಯನ್ನೂ
ಸೀಳಿ ಹೊರಜಿಗಿದ ಮುಗುಳುನಗೆ

ಈ ಗಿಡದ ಹೂವೆಲ್ಲ
ಬಾಡಿ ಬೀಳುತ್ತವಲ್ಲ
ತನ್ನ ಉಡಿಗೇ ಎಂದು ಮಣ್ಣತಾತ್ಸಾರ
ಈ ಮಣ್ಣಿನದೆ ಸಾರ
ಹೀರಿ ಬೆಳೆಯುತ್ತೇನೆ
ಅರಳುವೆನು ಪುನಹಾ
ಮತ್ತೆ ಬದುಕಿಲ್ಲ ವಿನಹಾ
ಇದು ಗಿಡ ತೊಟ್ಟ ಶಪಥ

ಪಶ್ಚಿಮದ ಗೂಬೆ ಹೇಳುತ್ತೆ
ನೋಡು ತಿನ್ನುತ್ತೇನೆ
ನಿನ್ನೊಡಲ ಮರಿಯ
ತಾಳುತ್ತೆ ಪೂರ್ವದ ಹಕ್ಕಿ
ಬಂಗಾರ ವರ್ಣದ ಸೂರ್ಯ
ಪಶ್ಚಿಮದ ಎದೆ ಬಿರಿದು
ಏಳುತ್ತಾನೆ-ಎದುರಿನ ದಿಕ್ಕು
ಕೇಳುತ್ತಾನೆ
ಹೇಗೆ, ನಾನು ಮಾಡಿದ್ದು ಸರಿಯೆ ?

ಹಾಗೆ
ಕವಿತೆಯಾಗದ ಕೆಲವು
ವಸ್ತುಗಳು ಕೇಳುತ್ತವೆ
ಏನಯ್ಯಾ ಉದ್ದಂಡ ದೋರ್ಧಂಡ
ನೀನು ಹುಟ್ಟಿದುದೆ ಆಯ್ತಲ್ಲ
ಬಹು ದಂಡ ?

ಏನೂ ಅನ್ನದು ಜೀವ
ಒಂದು ಶುಭ ಮುಂಜಾವು
ಪೂರ್ವಕ್ಕೆ ಸೂರ್ಯ ಹೊಳೆದಂತೆ
ಹಾಡುಗಳ ನುಡಿಸುವುದು
ನೀನು ಆಡಿದ್ದೆ ಉಳಿದದ್ದು, ನೋಡು ಕಂಡ್ಯ ?
*****

 

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...