ಶಪಥ

ಪ್ರತಿ ಕತ್ತಲೆಗೆ ತಾನು
ಮೆರೆವ-ಮೈತೆರೆವ
ಬೆಳಕನ್ನು ತಿಂದ ಉತ್ಸಾಹ
ಪ್ರತಿ ಬೆಳಕಿಗೂ ಅಬ್ಬ
ಅಂಥ ಕತ್ತಲೆಯನ್ನೂ
ಸೀಳಿ ಹೊರಜಿಗಿದ ಮುಗುಳುನಗೆ

ಈ ಗಿಡದ ಹೂವೆಲ್ಲ
ಬಾಡಿ ಬೀಳುತ್ತವಲ್ಲ
ತನ್ನ ಉಡಿಗೇ ಎಂದು ಮಣ್ಣತಾತ್ಸಾರ
ಈ ಮಣ್ಣಿನದೆ ಸಾರ
ಹೀರಿ ಬೆಳೆಯುತ್ತೇನೆ
ಅರಳುವೆನು ಪುನಹಾ
ಮತ್ತೆ ಬದುಕಿಲ್ಲ ವಿನಹಾ
ಇದು ಗಿಡ ತೊಟ್ಟ ಶಪಥ

ಪಶ್ಚಿಮದ ಗೂಬೆ ಹೇಳುತ್ತೆ
ನೋಡು ತಿನ್ನುತ್ತೇನೆ
ನಿನ್ನೊಡಲ ಮರಿಯ
ತಾಳುತ್ತೆ ಪೂರ್ವದ ಹಕ್ಕಿ
ಬಂಗಾರ ವರ್ಣದ ಸೂರ್ಯ
ಪಶ್ಚಿಮದ ಎದೆ ಬಿರಿದು
ಏಳುತ್ತಾನೆ-ಎದುರಿನ ದಿಕ್ಕು
ಕೇಳುತ್ತಾನೆ
ಹೇಗೆ, ನಾನು ಮಾಡಿದ್ದು ಸರಿಯೆ ?

ಹಾಗೆ
ಕವಿತೆಯಾಗದ ಕೆಲವು
ವಸ್ತುಗಳು ಕೇಳುತ್ತವೆ
ಏನಯ್ಯಾ ಉದ್ದಂಡ ದೋರ್ಧಂಡ
ನೀನು ಹುಟ್ಟಿದುದೆ ಆಯ್ತಲ್ಲ
ಬಹು ದಂಡ ?

ಏನೂ ಅನ್ನದು ಜೀವ
ಒಂದು ಶುಭ ಮುಂಜಾವು
ಪೂರ್ವಕ್ಕೆ ಸೂರ್ಯ ಹೊಳೆದಂತೆ
ಹಾಡುಗಳ ನುಡಿಸುವುದು
ನೀನು ಆಡಿದ್ದೆ ಉಳಿದದ್ದು, ನೋಡು ಕಂಡ್ಯ ?
*****

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಭಾವನದಿ ದಂಡೆಯ ಮೇಲೆ
Next post ಜಿಟ್ಟಿಹುಳಗಳು ಎದ್ದಾವು ನೋಡು

ಸಣ್ಣ ಕತೆ

  • ನಂಬಿಕೆ

    ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…

  • ವಿರೇಚನೆ

    ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

  • ಆಪ್ತಮಿತ್ರ

    ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ದೊಡ್ಡದೊಡ್ಡ ಮರಗಳು ಭೋರ್ ಎಂದು ಬೀಸುವ ಗಾಳಿಯಲ್ಲಿ ತೂಗಾಡುತ್ತಿದ್ದವು. ಇಂಗ್ಲೆಂಡಿನ ಆ ಚಳಿ ಮಳೆಯಲ್ಲಿ ಎರಡು ಆಪ್ತಮಿತ್ರ ಜೀವಗಳು ಒಂದನ್ನು ಅನುಸರಿಸಿ ಇನ್ನೊಂದು… Read more…

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

cheap jordans|wholesale air max|wholesale jordans|wholesale jewelry|wholesale jerseys