Home / ಕವನ / ಕವಿತೆ / ನಿರ್‍ದಯಿಗಳು

ನಿರ್‍ದಯಿಗಳು

ಹೆಣ್ಣು ಹುಟ್ಟಿತೆಂದು ಮುಖ ಇಳಿಸಿದರು
ಸಂತೋಷದ ತಮಟೆ ಬಾರಿಸಲಿಲ್ಲ
ಸಮಾಧಾನಕ್ಕೆ ಮನೆಯಲಕ್ಷ್ಮಿ ಎಂದರೆ ಹೊರತಾಗಿ
ಖರ್‍ಚು ಜಾಸ್ತಿ ಎಂದು ನೊಂದರು

ರ್‍ಯಾಂಕ್ ಪಡೆದಳೆಂದು ಬೀಗಿ
ತಮಟೆ ಬಾರಿಸಲಿಲ್ಲ
ಹೆಚ್ಚು ಓದಿದವನನ್ನು ಹುಡುಕಬೇಕಲ್ಲ
ಬೆವರಿಳಿಸತೊಡಗಿದರು.

ಮಗಳ ಮದುವೆ ಎಂದೇನು
ಸಂಭ್ರಮದ ತಮಟೆ ಬಾರಿಸಲಿಲ್ಲ
ವಸ್ತ್ರ ಒಡವೆ ಹಾಕಿ ಅಕ್ಷತೆ ಉದುರಿಸಿ
ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆಂದು
ಆರತಿ ಎತ್ತಿದರು.


ಮಗನನ್ನು ಕಸಿದುಕೊಂಡಳೆಂದು
ಉರಿಯ ತಮಟೆ ಬಾರಿಸಿದರಿಲ್ಲಿ
ಗಳಿಸಿದ್ದೆಲ್ಲ ಇವಳ ಬೆಡಗು ಬಿನ್ನಾಣಕ್ಕೆಂದು
ಚುಚ್ಚಿದರು ಕಣ್ಣೀರು ಹರಿಸಿದರು.

ಬಂದವಳು ಹೆಣ್ಣೆ ಹಡೆದಳೆಂದು
ವಂಶೋದ್ಧಾರಕರಿವರು ತಮಟೆ ಬಾರಿಸಿದರು
ಗಂಡುಮಗಳ ಹೆರಲಾರದ ಬಂಜೆ
ಎಂದೇ ಬಿರುದುಕೊಟ್ಟು ಬೆಂಕಿಹಚ್ಚಿದರು.
ಬೈಕು ಕಾರು ಓಡಿಸುವ ಗಂಡುಬೀರಿ
ಮನೆಯವರ ಸೇವೆಮಾಡದ ಸೊಕ್ಕಿನಾಕೆ
ಎಲ್ಲೆಲ್ಲೂ ತಮಟೆ ಬಾರಿಸುವವರು
ಅಡುಗೆಮನೆಯ ಕಟಕಟೆಯಲ್ಲಿ ನಿಲ್ಲಿಸಿ
ನೂರುಬೈಗುಳ ಹೂವೇರಿಸುತ
ಮನೆಮುರುಕಿ ಹಣೆಪಟ್ಟಿ ಕಟ್ಟುವರು

ತನ್ನದೇ ಕರುಳಿನ ಕುಡಿಯ ಹೆಮ್ಮೆಗೆ
ತಮಟೆ ಬಾರಿಸದ ಅಪ್ಪ ಅಮ್ಮ
ಕ್ಷಣಕ್ಷಣಕೂ ಅಪರಾಧಿ ಇವಳೆಂದು
ತಮಟೆ ಬಾರಿಸುವ ಮಾವ ಅತ್ತೆ


ಪ್ರೀತಿವಾತ್ಸಲ್ಯದ ಹೆಣ್ಣು ಜೀವ
ಸ್ವಾರ್‍ಥಿಗಳ ಕೈಗೊಂಬೆಯಾಗಿ
ನೊಂದು ಬೆಂದು ತಳಮಳಿಸಿ
ಒಂದೊಮ್ಮೆ ಅರ್ಥೈಸಿಕೊಳ್ಳದ
ಕಿವುಡ ನಾಟಕಕಾರರನು ದಾಟಿ
ಮರುಭೂಮಿಯಾಗಿಯೋ
ಜಲಪಾತವಾಗಿಯೋ
ಹೀಗೆ ಕಣ್ಮರೆಯಾಗುವಳು

ಆದರೂ ಮತ್ತೆ ಮತ್ತೆ ತಮಟೆಗಳು
ಹಲಗೆ ಕಹಳೆಯಾಗಿ ಬಾರಿಸುತ್ತಲೇ ಇರುತ್ತವೆ
ನಿರ್‍ದಯಿಗಳ ಬಾಯಲ್ಲಿ
ಇವಳು ಹೀಗೆ ಹಾಗೆ ಎಂದಾಗಲಿ
ಹೆಣ್ಣುಜೀವ ಮುತ್ತೈದೆಸಾವು ಎಂದಾಗಲಿ….
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...