ನಿರ್‍ದಯಿಗಳು

ಹೆಣ್ಣು ಹುಟ್ಟಿತೆಂದು ಮುಖ ಇಳಿಸಿದರು
ಸಂತೋಷದ ತಮಟೆ ಬಾರಿಸಲಿಲ್ಲ
ಸಮಾಧಾನಕ್ಕೆ ಮನೆಯಲಕ್ಷ್ಮಿ ಎಂದರೆ ಹೊರತಾಗಿ
ಖರ್‍ಚು ಜಾಸ್ತಿ ಎಂದು ನೊಂದರು

ರ್‍ಯಾಂಕ್ ಪಡೆದಳೆಂದು ಬೀಗಿ
ತಮಟೆ ಬಾರಿಸಲಿಲ್ಲ
ಹೆಚ್ಚು ಓದಿದವನನ್ನು ಹುಡುಕಬೇಕಲ್ಲ
ಬೆವರಿಳಿಸತೊಡಗಿದರು.

ಮಗಳ ಮದುವೆ ಎಂದೇನು
ಸಂಭ್ರಮದ ತಮಟೆ ಬಾರಿಸಲಿಲ್ಲ
ವಸ್ತ್ರ ಒಡವೆ ಹಾಕಿ ಅಕ್ಷತೆ ಉದುರಿಸಿ
ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆಂದು
ಆರತಿ ಎತ್ತಿದರು.


ಮಗನನ್ನು ಕಸಿದುಕೊಂಡಳೆಂದು
ಉರಿಯ ತಮಟೆ ಬಾರಿಸಿದರಿಲ್ಲಿ
ಗಳಿಸಿದ್ದೆಲ್ಲ ಇವಳ ಬೆಡಗು ಬಿನ್ನಾಣಕ್ಕೆಂದು
ಚುಚ್ಚಿದರು ಕಣ್ಣೀರು ಹರಿಸಿದರು.

ಬಂದವಳು ಹೆಣ್ಣೆ ಹಡೆದಳೆಂದು
ವಂಶೋದ್ಧಾರಕರಿವರು ತಮಟೆ ಬಾರಿಸಿದರು
ಗಂಡುಮಗಳ ಹೆರಲಾರದ ಬಂಜೆ
ಎಂದೇ ಬಿರುದುಕೊಟ್ಟು ಬೆಂಕಿಹಚ್ಚಿದರು.
ಬೈಕು ಕಾರು ಓಡಿಸುವ ಗಂಡುಬೀರಿ
ಮನೆಯವರ ಸೇವೆಮಾಡದ ಸೊಕ್ಕಿನಾಕೆ
ಎಲ್ಲೆಲ್ಲೂ ತಮಟೆ ಬಾರಿಸುವವರು
ಅಡುಗೆಮನೆಯ ಕಟಕಟೆಯಲ್ಲಿ ನಿಲ್ಲಿಸಿ
ನೂರುಬೈಗುಳ ಹೂವೇರಿಸುತ
ಮನೆಮುರುಕಿ ಹಣೆಪಟ್ಟಿ ಕಟ್ಟುವರು

ತನ್ನದೇ ಕರುಳಿನ ಕುಡಿಯ ಹೆಮ್ಮೆಗೆ
ತಮಟೆ ಬಾರಿಸದ ಅಪ್ಪ ಅಮ್ಮ
ಕ್ಷಣಕ್ಷಣಕೂ ಅಪರಾಧಿ ಇವಳೆಂದು
ತಮಟೆ ಬಾರಿಸುವ ಮಾವ ಅತ್ತೆ


ಪ್ರೀತಿವಾತ್ಸಲ್ಯದ ಹೆಣ್ಣು ಜೀವ
ಸ್ವಾರ್‍ಥಿಗಳ ಕೈಗೊಂಬೆಯಾಗಿ
ನೊಂದು ಬೆಂದು ತಳಮಳಿಸಿ
ಒಂದೊಮ್ಮೆ ಅರ್ಥೈಸಿಕೊಳ್ಳದ
ಕಿವುಡ ನಾಟಕಕಾರರನು ದಾಟಿ
ಮರುಭೂಮಿಯಾಗಿಯೋ
ಜಲಪಾತವಾಗಿಯೋ
ಹೀಗೆ ಕಣ್ಮರೆಯಾಗುವಳು

ಆದರೂ ಮತ್ತೆ ಮತ್ತೆ ತಮಟೆಗಳು
ಹಲಗೆ ಕಹಳೆಯಾಗಿ ಬಾರಿಸುತ್ತಲೇ ಇರುತ್ತವೆ
ನಿರ್‍ದಯಿಗಳ ಬಾಯಲ್ಲಿ
ಇವಳು ಹೀಗೆ ಹಾಗೆ ಎಂದಾಗಲಿ
ಹೆಣ್ಣುಜೀವ ಮುತ್ತೈದೆಸಾವು ಎಂದಾಗಲಿ….
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪ್ರಜ್ಞಾನ
Next post ರಂಗಣ್ಣನ ಕನಸಿನ ದಿನಗಳು – ೩೦

ಸಣ್ಣ ಕತೆ

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

  • ಗ್ರಹಕಥಾ

    [ಸತಿಯು ಪತಿಯ ಹಾಗೂ ಪತಿಯು ಸತಿಯ ಮನೋವೃತ್ತಿಗಳನ್ನು ಅರಿತು ಪರಸ್ಪರರು ಪರಸ್ಪರರನ್ನು ಸಂತೋಷಗೊಳಿಸಿದರೆ ಮಾತ್ರ ಸಂಸಾರವು ಉಭಯತರಿಗೂ ಸುಖಮಯವಾಗುತ್ತದೆ ಹೊರತಾಗಿ, ಅವರಲ್ಲಿ ಯಾರಾದರೊಬ್ಬರು ಅಹಂಭಾವದಿಂದ ಪ್ರೇರಿತರಾಗಿ, ಪರರ… Read more…

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…