ಹಣದ ಕುಣಿತ

ಕುಣಿ ಕುಣಿ ಹಣವೇ ಝಣಝಣಾ!
ಮಾಡುವೆ ಹಬ್ಬಾ ದಿನಾದಿನಾ!

ಘಿಲ್ ಘಿಲ್ ಥಕ್‌ಥಕ್ ಥೈ!…..
ಬಿಲ್ಲಿಗೆ ಮೂರೇ ಪೈ!

ರಾಣಿಯ ಕಾಲಿಗೆ ಪಿಲ್ಲಿ….
ಆಣೆಗೆ ನಾಲುಕು ಬಿಲ್ಲಿ !

ನವಿಲಿನ ಕುಣಿತವು ಕಾಣೇ….
ಚವಲಿಗೆ ಎರಡೇ ಆಣೆ !

ಭಾವ ಬಂದರೆ ಗವಲಿ….
ಪಾವಲಿಗೆರಡು ಚವಲಿ !

ಕುಂಟನ ಕಿವಿಗೆ ಬಾವ್ಲಿ ….
ಎಂಟಾಣೆಗೆರಡು ಪಾವ್ಲಿ !

ಸಿಪಾಯಿ ಕತ್ತಿಗೆ ಸಾಣೆ….
ರುಪಾಯಿಗೆರಡೆಂಟಾಣೆ !

ರುಪಾಯಿಯಿದ್ದರೆ ಹೊಟ್ಟೆ…
ರುಪಾಯಿಯಿದ್ದರೆ ಬಟ್ಟೆ!

ರುಪಾಯಿಯಿಂದಲೆ ಆಟ….
ರುಪಾಯಿಯಿಂದಲೆ ನೋಟ !

ಕುಣಿದರೆ ಹಣವು ಝಣಝಣಾ !
ಮನೆಯಲಿ ಹಬ್ಬವು ದಿನಾದಿನಾ !
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಣ್ಣ ಎನ್ನ ಬಸವಣ್ಣ
Next post ಮಾತೃವಾಣಿ

ಸಣ್ಣ ಕತೆ

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

  • ಹೃದಯ ವೀಣೆ ಮಿಡಿಯೆ….

    ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…

  • ದಾರಿ ಯಾವುದಯ್ಯಾ?

    ಮೂವತೈದು ವರ್‍ಷಗಳ ನಂತರ ಅಮಲ ನಿನ್ನೂರಿಗೆ ಬರುತ್ತಿದ್ದೇನೆ ಅಂತ ಫೋನ ಮಾಡಿದಾಗ ಮೃಣಾಲಿನಿಗೆ ಆಶ್ಚರ್‍ಯ ಮತ್ತು ಆತಂಕ ಕಾಡಿದವು. ಬರೋಬ್ಬರಿ ಮೂವತ್ತೈದು ವರ್ಷಗಳ ಹಿಂದೆ ವಿಶ್ವವಿದ್ಯಾಲಯದ ಕ್ಯಾಂಪಸ್… Read more…

  • ತನ್ನೊಳಗಣ ಕಿಚ್ಚು

    ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…