ಅಣ್ಣ ಎನ್ನ ಬಸವಣ್ಣ

ಅಣ್ಣ ಎನ್ನ ಬಸವಣ್ಣ
ಕಲ್ಯಾಣ ಬಸವಣ್ಣ|
ಕ್ರಾಂತಿಯೋಗಿ ಬಸವಣ್ಣ||

ಕಾಯಕಯೋಗಿ ಬಸವಣ್ಣ
ಕರ್ಮಯೋಗಿ ಬಸವಣ್ಣ|
ಕರುಣಾಳು ಬಸವಣ್ಣ
ಅಂತರಂಗ ಬಹಿರಂಗಶುದ್ಧಿ ಬಸವಣ್ಣ
ನಮ್ಮಯ ಆತ್ಮೋದ್ಧಾರಿ ಬಸವಣ್ಣ||

ತನುವ ದೇಗುಲ ಮಾಡಿ
ಶಿರವ ಹೊನ್ನ ಕಳಸವಮಾಡಿ
ಆತ್ಮಲಿಂಗವ ಕೈಯಲಿ ನೀಡಿ
ಆಚರಿಸಿ ತೋರಿದ ಬಸವಣ್ಣ|
ಶಿವಭಕ್ತ ಜಂಗಮರಲೇ
ಈಶನನು ಕಂಡ ಬಸವಣ್ಣ||

ಸರ್‍ವರಿಗೂ ಲೇಸನೇ
ಬಯಸಿ ತಾ ಬೆಸದಿಹ ಬಸವಣ್ಣ|
ಭಕ್ತಿ ಭಂಡಾರಿ ಬಸವಣ್ಣ
ಕೈಲಾಸದ ನಂದಿ ಈತ ಬಸವಣ್ಣ|
ಸರ್ವಜನ ಉದ್ಧಾರಕೆ ಅವತರಿಸಿದ
ಅವತಾರ ಪುರುಷನಿತನೇ
ಕೂಡಲಸಂಗಮ ಬಸವಣ್ಣ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮೊಟ್ಮೊದಲು
Next post ಹಣದ ಕುಣಿತ

ಸಣ್ಣ ಕತೆ

  • ಮೋಟರ ಮಹಮ್ಮದ

    ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…

  • ಏಡಿರಾಜ

    ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

cheap jordans|wholesale air max|wholesale jordans|wholesale jewelry|wholesale jerseys