ಅಣ್ಣ ಎನ್ನ ಬಸವಣ್ಣ

ಅಣ್ಣ ಎನ್ನ ಬಸವಣ್ಣ
ಕಲ್ಯಾಣ ಬಸವಣ್ಣ|
ಕ್ರಾಂತಿಯೋಗಿ ಬಸವಣ್ಣ||

ಕಾಯಕಯೋಗಿ ಬಸವಣ್ಣ
ಕರ್ಮಯೋಗಿ ಬಸವಣ್ಣ|
ಕರುಣಾಳು ಬಸವಣ್ಣ
ಅಂತರಂಗ ಬಹಿರಂಗಶುದ್ಧಿ ಬಸವಣ್ಣ
ನಮ್ಮಯ ಆತ್ಮೋದ್ಧಾರಿ ಬಸವಣ್ಣ||

ತನುವ ದೇಗುಲ ಮಾಡಿ
ಶಿರವ ಹೊನ್ನ ಕಳಸವಮಾಡಿ
ಆತ್ಮಲಿಂಗವ ಕೈಯಲಿ ನೀಡಿ
ಆಚರಿಸಿ ತೋರಿದ ಬಸವಣ್ಣ|
ಶಿವಭಕ್ತ ಜಂಗಮರಲೇ
ಈಶನನು ಕಂಡ ಬಸವಣ್ಣ||

ಸರ್‍ವರಿಗೂ ಲೇಸನೇ
ಬಯಸಿ ತಾ ಬೆಸದಿಹ ಬಸವಣ್ಣ|
ಭಕ್ತಿ ಭಂಡಾರಿ ಬಸವಣ್ಣ
ಕೈಲಾಸದ ನಂದಿ ಈತ ಬಸವಣ್ಣ|
ಸರ್ವಜನ ಉದ್ಧಾರಕೆ ಅವತರಿಸಿದ
ಅವತಾರ ಪುರುಷನಿತನೇ
ಕೂಡಲಸಂಗಮ ಬಸವಣ್ಣ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮೊಟ್ಮೊದಲು
Next post ಹಣದ ಕುಣಿತ

ಸಣ್ಣ ಕತೆ

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…