Home / ಕವನ / ಕವಿತೆ / ಮಣ್ಣಿನ ಒಲವು

ಮಣ್ಣಿನ ಒಲವು

ಮಣ್ಣು ಹೊನ್ನಿನ ಗೂಡು
ಮಣ್ಣು ಜೀವದ ಸೂಡು
ಮಣ್ಣು ಹೆಣ್ಣಿನ ಬೀಡು
ಮಣ್ಣು ಗಂಡಿನ ನಾಡು.

ಮಣ್ಣು ಪಾವನಮೆದು
ತುಳಸಿ ಮೈತ್ರಿಕೆಯಾಯ್ತು
ಬಣ್ಣ ಬಣ್ಣದ ಮಣ್ಣು
ಮೈಗೆ ಪೂಸುವ ಗಂಧ.

ಉಪ್ಪು ಸಿಹಿಕಾರಗಳ
ಷಡ್ರಸಾಹಾರಗಳ
ಜೀವಕೇ ತವರಿದುವು
ಮಣ್ಣು ಸಂಜೀವನವು.

ಮಣ್ಣಿಂದ ಸಾಗರವು
ಸಾಗರದಿ ಮುತ್ತುಗಳು
ಹೊನ್ನು ರನ್ನಗಳೆಲ್ಲ
ಮಣ್ಣಿಂದಮೈಶ್ವರ್ಯ.

ಈ ರಾಜ್ಯ ಸಂಪದವು
ಈ ಸೌಧವರಮನೆಯು
ಸಾಮ್ರಾಜ್ಯ ಸಿಂಹಾಸ
ನಗಳು ಮಾಯದ ಮಣ್ಣು.

ನೀರೊಳಗೆ ಮುಳುಗಿಪುದು
ಆಗಸದಿ ಹಾರಿಪುದು
ನೆಲದಲ್ಲಿ ನಡೆಸುವುದು
ಶಕ್ತಿಗೇ ಗಣಿಯಿದುವು.

ದೇವ ಸೃಷ್ಟಿಯ ಮಣ್ಣು
ಬ್ರಹ್ಮಾಂಡಮಾಯ್ತಿಂದು
ಚಣ ಚಣಕೆ ಹೊಸ ಯುಗವ
ಕರೆಯುತಿದೆ ತೋರುತಿದೆ.

ಸಕಲ ಬಗೆಗಳ ಜೀವ
ಖನಿಜ ಸಂಪದ ಭಾವ
ದೈವಶಕ್ತಿಯು ತೀವಿ
ತುಂಬಿರುವ ವರ ಕಣಜ

ಈ ನಾಡು ಈ ಕಾಡು
ಎಂಬ ಭಾವದ ಮಾಯೆ
ಆಸೆ ಕಲಹದಸೂಯೆ
ಮಣ್ಗುಂಟಿ ಪರಿಕಿಸಲು.

ಮಣ್ಣಿಲ್ಲದಿನ್ನಿಲ್ಲ
ನಿತ್ಯವಸ್ತುವೆ ಮಣ್ಣು
ಮನವರಿಯದಿರ್ದೊಡೀ
ಕಣ್ಣರಿಯದೇ ನಿಜವ.

ದೇವರ್ಗೆ ಮಣ್ಣೆಂದ
ರೇನು ಪ್ರೇಮವೊ ಕಾಣೆ
ಅಮೃತವನೆ ಬಿತ್ತಿಹನು
ಜೀವಕಳೆ ತುಂಬುವನು.

ಮಣ್ಣಿಗಿಹ ಸುತ್ಯಾಗ
ಶುಚಿ ಪ್ರೀತಿ ವಾತ್ಸಲ್ಯ
ವೈರಾಗ್ಯಮುಪಕಾರ
ಗುಣವೊಲಿಯಲೆಮಗಿಂದು.
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...