ಪುಟ್ಟನ ಸಾಹಸ

ಪುಟ್ಟನು ಶಾಲೆಯಿಂದ
ಮನೆಗೆ ಓಡಿ ಬಂದ

ಪುಸ್ತಕದ ಚೀಲವನಿಟ್ಟು
ಹಿಡಿದನು ಕ್ರಿಕೆಟ್ಟು ಬ್ಯಾಟು
ಕಿಟ್ಟುವನ್ನು ಕೂಗಿ ಕರೆದ
ಮೈದಾನದ ಕಡೆಗೆ ನಡೆದ

ಮನದಣಿ ಆಟವನಾಡಿ
ಮತ್ತೆ ಇಬ್ಬರು ಜೊತೆಗೂಡಿ
ಬೀದಿಯಲ್ಲಿ ಬರುತಿರಲು
ಹರಡಿತ್ತು ನಸುಗತ್ತಲು

ಬೀದಿಯ ನಾಯಿಯೊಂದು
ಇವರನು ಕಚ್ಚಲಿಕೆಂದು
ಓಡಿ ಬಂದಿತು ಇವರತ್ತ
ಕಿಟ್ಟು ಅಲ್ಲಿಂದ ಕಂಬಿ ಕಿತ್ತ

ಮುಟ್ಟುಗೆ ಹೆದರಿಕೆಯಾಯ್ತು
ಹಂಚಿಕೆಯೊಂದು ಹೊಳೆಯಿತು
ಬೇಗನೆ ಶರ್ಟನು ಬಿಚ್ಚಿದನು
ಬಲಗೈಯಿಗೆ ಸುತ್ತಿಕೊಂಡನು

ಮಂಡೆಯೂರುತ ಕುಳಿತನು
ಬಲಗೈ ಬಾಯಿಗೆ ಕೊಟ್ಟನು
ಕಚ್ಚಲು ಆಗದ ನಾಯಿಯು
ಕಿಟ್ಟು ಬಿಟ್ಟು ಓಡೋಯ್ತು

ಪುಟ್ಟು ಬುದ್ಧಿಯ ನೋಡಿದ ಜನ
ಕೊಟ್ಟರು ಶಹಾಭಾಶ್‌ಗಿರಿಯನ್ನು
ಪುಟ್ಟ ಕಿಟ್ಟು ಹತ್ತಿರ ಬಂದನು
ಸಾರಿ ಕಿಟ್ಟು ಎಂದೆಂದನು

ಜೀವದ ಗೆಳೆಯ ನೀನಲ್ಲ
ನಿನ್ನ ಸಹವಾಸ ಬೇಕಿಲ್ಲ
ಕಿಟ್ಟು ಕೋಪದಿ ನುಡಿದನು
ತನ್ನ ಮನೆಯನ್ನು ಸೇರಿದನು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಣ್ಣಿನ ಒಲವು
Next post ಕರ್‍ನಾಟಕದ ಹೋರಾಟಗಳು ಮತ್ತು ಮುಸ್ಲಿಮರು

ಸಣ್ಣ ಕತೆ

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

  • ವಿಷಚಕ್ರ

    "ಚಂದ್ರು, ಒಳಗೆ ಬಾಮ್ಮ. ಮಳೆ ಬರುತ್ತೆ." ತಾಯಿ ಕೂಗಿದುದನ್ನು ಕೇಳಿ ಚಂದ್ರು ನಕ್ಕ. ಒಳಕ್ಕೆ ಬರುವುದಿರಲಿ, ಪಕ್ಕದ ಮನೆಯ ಹುಡುಗಿ ವೇದಳೊಂದಿಗೆ ಆಡುತ್ತಿದ್ದುದನ್ನು ನಿಲ್ಲಿಸಲೂ ಇಲ್ಲ. "ನೋಡೇ-ನಾನು… Read more…

  • ದೇವರು

    ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…

cheap jordans|wholesale air max|wholesale jordans|wholesale jewelry|wholesale jerseys