ಪುಟ್ಟನ ಸಾಹಸ

ಪುಟ್ಟನು ಶಾಲೆಯಿಂದ
ಮನೆಗೆ ಓಡಿ ಬಂದ

ಪುಸ್ತಕದ ಚೀಲವನಿಟ್ಟು
ಹಿಡಿದನು ಕ್ರಿಕೆಟ್ಟು ಬ್ಯಾಟು
ಕಿಟ್ಟುವನ್ನು ಕೂಗಿ ಕರೆದ
ಮೈದಾನದ ಕಡೆಗೆ ನಡೆದ

ಮನದಣಿ ಆಟವನಾಡಿ
ಮತ್ತೆ ಇಬ್ಬರು ಜೊತೆಗೂಡಿ
ಬೀದಿಯಲ್ಲಿ ಬರುತಿರಲು
ಹರಡಿತ್ತು ನಸುಗತ್ತಲು

ಬೀದಿಯ ನಾಯಿಯೊಂದು
ಇವರನು ಕಚ್ಚಲಿಕೆಂದು
ಓಡಿ ಬಂದಿತು ಇವರತ್ತ
ಕಿಟ್ಟು ಅಲ್ಲಿಂದ ಕಂಬಿ ಕಿತ್ತ

ಮುಟ್ಟುಗೆ ಹೆದರಿಕೆಯಾಯ್ತು
ಹಂಚಿಕೆಯೊಂದು ಹೊಳೆಯಿತು
ಬೇಗನೆ ಶರ್ಟನು ಬಿಚ್ಚಿದನು
ಬಲಗೈಯಿಗೆ ಸುತ್ತಿಕೊಂಡನು

ಮಂಡೆಯೂರುತ ಕುಳಿತನು
ಬಲಗೈ ಬಾಯಿಗೆ ಕೊಟ್ಟನು
ಕಚ್ಚಲು ಆಗದ ನಾಯಿಯು
ಕಿಟ್ಟು ಬಿಟ್ಟು ಓಡೋಯ್ತು

ಪುಟ್ಟು ಬುದ್ಧಿಯ ನೋಡಿದ ಜನ
ಕೊಟ್ಟರು ಶಹಾಭಾಶ್‌ಗಿರಿಯನ್ನು
ಪುಟ್ಟ ಕಿಟ್ಟು ಹತ್ತಿರ ಬಂದನು
ಸಾರಿ ಕಿಟ್ಟು ಎಂದೆಂದನು

ಜೀವದ ಗೆಳೆಯ ನೀನಲ್ಲ
ನಿನ್ನ ಸಹವಾಸ ಬೇಕಿಲ್ಲ
ಕಿಟ್ಟು ಕೋಪದಿ ನುಡಿದನು
ತನ್ನ ಮನೆಯನ್ನು ಸೇರಿದನು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಣ್ಣಿನ ಒಲವು
Next post ಕರ್‍ನಾಟಕದ ಹೋರಾಟಗಳು ಮತ್ತು ಮುಸ್ಲಿಮರು

ಸಣ್ಣ ಕತೆ

  • ಇನ್ನೊಬ್ಬ

    ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

  • ಜೋತಿಷ್ಯ

    ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…