ಉಕ್ಕಿ ಹೊರ ಬರಲು
ಯತ್ನಿಸುವ ಕಣ್ಣೀರಿಗೆ
ಅಡ್ಡಗಟ್ಟಿ ಅಣೆಕಟ್ಟು ಕಟ್ಟಿ,
ನಿಟ್ಟುಸಿರುಗಳ ನುಂಗಿ,
ಹಸಿರಿನುಸಿರಿಗೆ ಹಂಬಲಿಸಿ,
ಹಳದಿ ಕಾಯಿಲೆ ಓಡಿಸಿದ
ಜೀವ ಸೂತ್ರ ಸ್ವತಂತ್ರ.
ಮುಚ್ಚಿರುವ ಮುಸುಕಿನ
ಅಡಿಯಲಿ ಹಿಡಿದಿಟ್ಟ
ಬಿಗಿಯುಸಿರು ಸ್ವತಂತ್ರ
ಕೋಗಿಲೆಯ ಧ್ವನಿಗೆ,
ಹೃದಯದ ಹಾಡಿಗೆ,
ಗಾಳಿಗೆ ವಾಲಾಡಿದ
ಎಲೆಗಳ ಸಂಗೀತಕ್ಕೆ
ತಲೆದೂಗಿದ ಮನಸ್ಸು,
ಸ್ವಾತಂತ್ರ್ಯದ ವಿಜಯಮಾಲೆ
ಕೊರಳಲ್ಲಿ ಧರಿಸಿತ್ತು.
ಸೂರ್ಯನ ಪ್ರಖರತೆ
ಚ೦ದ್ರನ ಶಾಂತತೆ
ಎಂದಿಗೂ ಈಗ
ಎದುರಾಳಿಯಾಗರು.
ಚುಕ್ಕೆ, ಸೂರ್ಯಚಂದ್ರಮರು
ಕತ್ತಲೆಯ ರಾತ್ರಿಯಲಿ
ನಡೆಯುವ ಹಿಂಸೆಯನು
ಎಂದಿಗೂ ಸಹಿಸರು.
*****
Related Post
ಸಣ್ಣ ಕತೆ
-
ಪಾಠ
ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…
-
ಯಿದು ನಿಜದಿ ಕತೀ…
ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ... ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ, ವುಗಾದಿ… Read more…
-
ಬೆಟ್ಟಿ
ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…
-
ಮನೆ “ಮಗಳು” ಗರ್ಭಿಣಿಯಾದಾಗ
ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…
-
ಕಲಾವಿದ
"ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…