ದ್ರೌಪದೀ,
ಅಂದು
ಋತುಮತಿಯಾಗಿದ್ದ ನಿನ್ನನ್ನು
ದರದರ ಎಳೆದು ತಂದು
ತುಂಬಿದ ಸಭೆಯಲ್ಲಿ
ದುಶ್ಯಾಸನ ನಿನ್ನ ಸೆರಗಿಗೆ ಕೈ ಹಾಕಿದಾಗ,
ನೀನೇಕೆ ಅವನ ದಹಿಸದೆ
ನಿನ್ನ ಪಣ ಒಡ್ಡಿದವರ ಬೇಡಿದೆ?
ಅವರು ಅಸಹಾಯಕರಾಗಿ ತಲೆತಗ್ಗಿಸಿ ಕುಳಿತಾಗ
ನಿನ್ನ ಕೂಗಿಗೆ ಓಗೊಡಲು ಶ್ರೀಕೃಷ್ಣನಿದ್ದ,
ನಿನ್ನ ಸೀರೆಯ ಅಕ್ಷಯವಾಗಿಸಿದ.
ನಾವೇನ ಮಾಡಲಿ ಹೇಳು?
ನೀನಂದು ಒಬ್ಬ ದುಶ್ಯಾಸನನ ದಹಿಸಿದ್ದರೆ
ಇಂದು ಮತ್ತೆ ಮತ್ತೆ ದುಶ್ಯಾಸನರು
ಹೆಡೆ ಎತ್ತುತ್ತಿರಲಿಲ್ಲ.
ಈಗ ಎಲ್ಲೆಲ್ಲೂ ದುಶ್ಯಾಸನರೇ
ಶ್ರೀಕೃಷ್ಣ ಮಾತ್ರ ಇಲ್ಲ.
ಹೆಣ್ಣಿನ ಸೀರೆ ಎಳೆಯುವಾಗ
ಅಂದಿನಂತೆ ಇಂದೂ
ಎಲ್ಲ ನಿಂತು ನೋಡುವವರೇ;
ಅಕ್ಷಯ ವಸನವಿಲ್ಲದೆ ಬೆತ್ತಲಾಗುವುದೇ
ಇಂದಿನ ಸ್ಥಿತಿ, ಇಂದಿನ ಗತಿ.
ರಕ್ಷಿಸಲು ಯಾರು ಬರುತ್ತಾರೆ ಹೇಳು?
ನೀನು ದುಶ್ಯಾಸನನ ಹಿಂದೆ ಬಿಟ್ಟು ಹೋದ ಹಾಗೆ
ನಿನ್ನ ಮರ್ಯಾದೆಯ ಕಾಯ್ದ
ಶ್ರೀಕೃಷ್ಣನ ಬಿಟ್ಟು ಹೋಗಲಿಲ್ಲವೇಕೆ?
*****
Related Post
ಸಣ್ಣ ಕತೆ
-
ಅಂತರಂಗ ಶುದ್ಧಿ ಬಹಿರಂಗ ಶುದ್ಧಿ
ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…
-
ಬ್ರಿಟನ್ ದಂಪತಿಗಳ ಪ್ರೇಮ ದಾಖಲೆ
ಫ್ರಾಂಕ್ ಆಗ ಇನ್ನು ಹದಿನಾಲ್ಕು ವರ್ಷದ ಹುಡುಗ ತೆಳ್ಳಗೆ ಬೆಳ್ಳಗೆ ಇದ್ದು, ಕರಿಯ ಬಣ್ಣದ ದಟ್ಟ ಕೂದಲಿನ ಬ್ರಿಟಿಷ್ ಬಾಲಕ. ಹೈಸ್ಕೂಲಿನಲ್ಲಿ ಓದುತ್ತಿದ್ದ ಫ್ರಾಂಕ್ಗೆ ಕಾಲ್ಚೆಂಡು ಆಟ… Read more…
-
ತನ್ನೊಳಗಣ ಕಿಚ್ಚು
ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…
-
ವಲಯ
ಅವಳ ಕೈ ಬೆರಳುಗಳು ನನ್ನ ಮುಖದ ಮೇಲೆ ಲಯಬದ್ಧವಾಗಿ ಚಲಿಸುತ್ತಿವೆ. ಕಂಗಳ ಮೇಲೆ ಅದೊಂದು ತರಹ ಮಂಪರು ಮೆತ್ತ-ಮೆತ್ತಗೆ ಹಾರಾಡತೊಡಗುತ್ತಿದೆ! ನಾಳೆ ಹೋಗಬೇಕಾದ ‘ಪಾರ್ಟಿ’ ಗೆ ಈಗಾಗಲೇ… Read more…
-
ಗೃಹವ್ಯವಸ್ಥೆ
ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…