ಕೊಚ್ಚಬೇಡ ಬಡಾಯಿ ನಾ ಬದಲಿಸುವೆ ಎಂದು

ಕೊಚ್ಚಬೇಡ ಬಡಾಯಿ ನಾ ಬದಲಿಸುವೆ ಎಂದು;
ಕಾಲವೇ ನೀನು ಪೇರಿಸುವ ಪಿರಮಿಡ್ಡುಗಳು
ಹೊಸದಲ್ಲವೇ ಅಲ್ಲ ನನ್ನ ಪಾಲಿಗೆ ಎಂದೂ;
ಇಂದೂ ಅವು ಹಳೆಯ ದೃಶ್ಯಗಳ ಮರುನೋಟಗಳು.
ಅಲ್ಪಾವಧಿಯ ಬಾಳು ಇದು, ಎಂದೆ ಮೆಚ್ಚುವೆವು
ಹಿಂದಿನಿಂದಲು ನೀನು ತಂದು ನಮಗಿತ್ತುದನು,
ಹಿಂದೆ ಕೇಳಿದ್ದ ಬಗೆಯಲ್ಲಿ ಕಾಣದೆ ನಾವು
ನಮ್ಮ ಬಯಕೆಗೆಹೊಂದುವಂತೆ ಮಾರ್‍ಪಡಿಸುವೆವು.
ಹೊಸತು ಹಳತೆರಡಕ್ಕೂ ಬೆರಗುಪಡದಿರುವೆ
ನಿನ್ನೆಲ್ಲ ದಾಖಲೆಗಳನ್ನು ನಿನ್ನನೂ ಜೊತೆಗೆ
ಮೂದಲಿಸುವೆನು ಏಕೆ ಗೊತ್ತೆ ಅವು ಎದುರೆದುರೆ
ಬದಲಾಗುವುವು ನಿನ್ನ ಅವಸರದ ನಡಿಗೆಗೆ:
ಆಣೆಯಿಟ್ಟೊರೆವೆ ಇದು ಎಂದೂ ಹೀಗೇ ಎಂದು,
ನೀನು, ಕುಡುಗೋಲು ಇದ್ದೂ ನಾನೆ ನಿಜ ಎಂದು.
*****
ಮೂಲ: ವಿಲಿಯಂ ಷೇಕ್ಸ್‌ಪಿಯರ್
Sonnet 123
No! Time thou shalt not boast that I do change

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ರಂಗಣ್ಣನ ಕನಸಿನ ದಿನಗಳು – ೨೨
Next post ದುಶ್ಯಾಸನರು

ಸಣ್ಣ ಕತೆ

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

  • ಜುಡಾಸ್

    "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…