ಅಂದೊಮ್ಮೆ
ನೋಡಬಯಸಿದ್ದು ಧೂಮಕೇತುವನ್ನು
ನೋಡಿದ್ದು ಚಂದ್ರೋದಯದ ಸೊಬಗನ್ನು.
ಸೂರ್ಯಾಸ್ತದ ನವರಂಗಿನ ಚೆಲ್ಲಾಟವೊಂದೆಡೆ
ಚಂದ್ರೋದಯದ ಮನಮೋಹಕತೆ ಇನ್ನೊಂದೆಡೆ.
ಮೋಡಗಳ ಮರೆಯಿಂದ ಚಂದಿರನ ಇಣುಕಾಟ
ಸೂರ್ಯಚಂದ್ರರ ಕಣ್ಣುಮುಚ್ಚಾಲೆಯಾಟ!
ನಡುವೆ ಬಂಗಾರದ ಎಳೆಗಳ ನರ್ತನದಾಟ.
ಗುಡುಗಿಲ್ಲ ಮಿಂಚಿಲ್ಲ, ಮಳೆಯ ದಿನಗಳಲ್ಲ
ಮೇಲೆ ಶುಭ್ರ ಆಕಾಶ,
ಕೆಳಗೆ ವಿದ್ಯುತ್ದೀಪಗಳ ಸಾಲು;
ಒಂದಲ್ಲ, ಎರಡಲ್ಲ, ನಾಲ್ಕಾರು ಬಾರಿ
ಮಿಂಚಿತ್ತು ಬಂಗಾರದ ಗೆರೆಗಳು
ಆಗಸದಿಂದ ನಮ್ಮೆಡೆಗೆ
ಹೊಂಬಣ್ಣದ ಗೆರೆಗಳ ಎಳೆದವರ್ಯಾರು?
ಸೂರ್ಯ ಚಂದಿರರ ನಡುವೆ
ಚಿತ್ತಾರ ಬಿಡಿಸಿದವರ್ಯಾರು?
ಸೃಷ್ಟಿಯ ವೈಚಿತ್ರ್ಯ!
ಆಗಸದಲ್ಲೆಷ್ಟು ಚಿತ್ತಾರಗಳು ಮೂಡುವವೋ
ಅದ ನೋಡಲು ನಮಗಿಲ್ಲ ಸಮಯ.
ಕಣ್ಣಿದ್ದೂ ನೋಡಲಾಗದ ಕುರುಡುತನದಲಿ
ನಾವು ಕಳಕೊಂಡ ನೋಟಗಳೆಷ್ಟೋ?
ಮರಳಿ ಪಡೆಯಬಲ್ಲೆವೇ
ಕಳೆದುಕೊಂಡ ದೃಶ್ಯಗಳ?
ಮರಳಿ ಸಿಗುವುದೇ ಜಾರಿ ಹೋದ ಸಮಯ?
*****
Related Post
ಸಣ್ಣ ಕತೆ
-
ಅವರು ನಮ್ಮವರಲ್ಲ
ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…
-
ಬಾಗಿಲು ತೆರೆದಿತ್ತು
ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…
-
ಗಿಣಿಯ ಸಾಕ್ಷಿ
ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…
-
ಮರೀಚಿಕೆ
ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…
-
ಇಬ್ಬರು ಹುಚ್ಚರು
ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…