ನ್ಯಾಯ

ವಾಲ್ಮೀಕಿ ಕುಮಾರವ್ಯಾಸ
ಯಾರೂ ಒದಗಿಸಲಿಲ್ಲ
ಹೆಣ್ಣಿಗೆ ನ್ಯಾಯ.
ಅದಕ್ಕೇ ತಪ್ಪಲಿಲ್ಲ
ಅವಳಿಗೆ ಸತತ ಅನ್ಯಾಯ.

ಪತಿಯೇ ಪರದೈವವೆಂದು
ಸೀತೆಯ ಶೋಷಿಸಿದರು;
ಸಹೋದರ ಭಕ್ತಿಯೆಂದು
ಊರ್ಮಿಳೆಯ ಶೋಷಿಸಿದರು;
ಮಲತಾಯಿಯೆಂದು
ಕೈಕೇಯಿಯ ಶೋಷಿಸಿದರು;
ಸೇಡು ಎಂದು
ಶೂರ್ಪನಖಿಯ ಶೋಷಿಸಿದರು;
ಸಂತಾನ ಲಕ್ಷ್ಮಿಯಾಗಿಸಲು
ಅಂಬೆ, ಅಂಬಾಲಿಕೆಯರ ಶೋಷಿಸಿದರು;
ಋಷಿ ಶಾಪವೆಂದು
ಕುಂತಿ ಮಾದ್ರಿಯರ ಶೋಷಿಸಿದರು;
ತಾಯಿ ಮಾತು ವೇದವಾಕ್ಯವೆಂದು
ದ್ರೌಪದಿಯ ಶೋಷಿದರು.

ರಾಮಾಯಣ ಮಹಾಭಾರತ ತುಂಬ
ಶೋಷಿತ ಸ್ತ್ರೀಯರೇ
ಅವರಿಗೆ ಕೊಟ್ಟರು
ಪತಿವ್ರತೆಯರ ಪಟ್ಟ
ಯಾರಿಗಾದರೂ ಬೇಕೇ
ಈ ಚಿನ್ನದ ಪಂಜರ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬಲು ದೊಡ್ಡ ಬಹುಮಾನ ನೀನು, ಅದಕ್ಕೆ ಎದ್ದು
Next post ಜೀವನದುದ್ದ

ಸಣ್ಣ ಕತೆ

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

cheap jordans|wholesale air max|wholesale jordans|wholesale jewelry|wholesale jerseys